ಆ್ಯಪ್ನಗರ

ಗ್ರಾಹಕರಿಗೆ ಉತ್ತಮ ಸೌಲಭ್ಯ ನೀಡಲಿ

ಗದಗ : ಬ್ಯಾಂಕುಗಳು ಅದರಲ್ಲೂ ವಿಶೇಷವಾಗಿ ಸಹಕಾರಿ ಬ್ಯಾಂಕುಗಳು ಗ್ರಾಹಕರಿಗೆ ಉತ್ತಮ ಸೌಲಭ್ಯ ಒದಗಿಸುವ ಮೂಲಕ ಠೇವಣಿದಾರರನ್ನು ಆಕರ್ಷಿಸಿಸಬೇಕು ಎಂದು ಡಾ.ಪ್ಯಾರ್‌ಅಲಿ ನೂರಾನಿ ಹೇಳಿದರು. ನಗರದ ಆಝಾದ್‌ ಕೋ-ಆ ಬ್ಯಾಂಕ್‌ದಲ್ಲಿ ನಡೆದ ಗ್ರಾಹಕ ಸಂಪರ್ಕ ಸಭೆ ಹಾಗೂ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

Vijaya Karnataka 12 Jan 2019, 5:00 am
ಗದಗ : ಬ್ಯಾಂಕುಗಳು ಅದರಲ್ಲೂ ವಿಶೇಷವಾಗಿ ಸಹಕಾರಿ ಬ್ಯಾಂಕುಗಳು ಗ್ರಾಹಕರಿಗೆ ಉತ್ತಮ ಸೌಲಭ್ಯ ಒದಗಿಸುವ ಮೂಲಕ ಠೇವಣಿದಾರರನ್ನು ಆಕರ್ಷಿಸಿಸಬೇಕು ಎಂದು ಡಾ.ಪ್ಯಾರ್‌ಅಲಿ ನೂರಾನಿ ಹೇಳಿದರು. ನಗರದ ಆಝಾದ್‌ ಕೋ-ಆ ಬ್ಯಾಂಕ್‌ದಲ್ಲಿ ನಡೆದ ಗ್ರಾಹಕ ಸಂಪರ್ಕ ಸಭೆ ಹಾಗೂ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
Vijaya Karnataka Web GDG-11RUDRAGOUD19
ಗದಗÜ ಆಝಾದ್‌ ಕೋ-ಆ ಬ್ಯಾಂಕಿನಲ್ಲಿ ನಡೆದ ಗ್ರಾಹಕ ಸಂಪರ್ಕ ಸಭೆ ಹಾಗೂ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಡಾ.ಪ್ಯಾರ್‌ಅಲಿ ನೂರಾನಿ ಮಾತನಾಡಿದರು.


ಬ್ಯಾಂಕ್‌ಗಳಿಗೆ ಗ್ರಾಹಕರೇ ಜೀವಾಳ ಆದ್ದರಿಂದ ಗ್ರಾಹಕರಿಗೆ ಆಕರ್ಷಕ ಸೌಲಭ್ಯಗಳನ್ನು ಹಾಗೂ ಗ್ರಾಹಕರಿಗೆ ಸೌಜನ್ಯಯುತ ಸೇವೆ ಒದಿಸುವ ಮೂಲಕ ಅಭಿವೃದ್ಧಿ ಸಾಧಿಸಬೇಕೆಂದರು.

ಆಝಾದ್‌ ಬ್ಯಾಂಕ್‌ ಉತ್ತಮ ಸೇವೆ ನೀಡುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡಿ ಅವರನ್ನು ಸ್ವಯಂ ಉದ್ಯೋಗ ಕೈಗೊಳ್ಳುವಂತೆ ಪ್ರೇರಣೆ ನೀಡುತ್ತ ಬಂದಿದೆ ಎಂದರು.

ಅಧ್ಯಕ್ಷ ತೆ ವಹಿಸಿದ್ದ ಬ್ಯಾಂಕ್‌ ಚೇರಮನ್‌ ಸರ್ಪರಾಜ ಉಮಚಗಿ ಮಾತನಾಡಿ, ಹಿರಿಯ ಸಹಕಾರಿಗಳ ಒಗ್ಗೂಡಿಕೆಯಿಂದ ಆಝಾದ್‌ ಕೋ-ಆ ಬ್ಯಾಂಕ್‌ ಸ್ಥಾಪನೆಗೊಂಡು ಎಲ್ಲ ಗ್ರಾಹಕರಿಗೆ ಸಿಗಬಹುದಾದ ಸೌಲಭ್ಯ, ಆರ್ಥಿಕ ನೆರವು ನೀಡಿ ಅವರ ಆರ್ಥಿಕ ಸ್ಥಿತಿ ಸುಧಾರಿಸುವ ಮೂಲಕ ತನ್ನ ಪ್ರಗತಿಯನ್ನೂ ಸಾಧಿಸಿ 58ನೇ ವರ್ಷದಲ್ಲಿ ಮುನ್ನಡೆದಿದೆ ಇದಕ್ಕೆಲ್ಲ ಗ್ರಾಹಕರಿಂದ ಸಿಕ್ಕ ಉತ್ತಮ ಸ್ಪಂದನೆಯೇ ಕಾರಣ ಎಂದರು.

ಎಂ.ಎಂ.ಶಿರಹಟ್ಟಿ, ಎಂ.ಎಚ್‌.ಜಕ್ಕಲಿ, ಆರ್‌.ಡಿ.ಬುವಾಜಿ, ಎಂ.ಎನ್‌.ಮಕಾನದಾರ, ಬುಡ್ಡಣ್ಣ ಹಬೀಬ ಬ್ಯಾಂಕ್‌ನ ಪ್ರಗತಿ, ಗ್ರಾಹಕರಿಗೆ ಸಿಗಬೇಕಾದ ಸೌಲಭ್ಯ, ಬ್ಯಾಂಕನ ಸಿಬ್ಬಂದಿಯ ಆಡಳಿತ ವೈಖರಿ ಕುರಿತು ಸಲಹೆ ಸೂಚನೆ ನೀಡಿದರು.

ಬ್ಯಾಂಕ್‌ ನಿರ್ದೆಶಕ ಎನ್‌.ಬಿ.ಶಾಸ್ತ್ರೀ ಮಾತನಾಡಿದರು.ಹುಲಗಣ್ಣ ಬಳ್ಳಾರಿ, ಆರ್‌.ಎಲ್‌.ಬಾಗಲಕೋಟ, ಇಕ್ಬಾಲ್‌ ಹಣಗಿ, ಶಾನವಾಜ್‌ ಉಮಚಗಿ, ಎನ್‌.ಬಿ.ಶಾಸ್ತ್ರೀ, ಗುಲ್ಜಾರಭಾನು,ಜೀಲಾನಿ ಉಮಚಗಿ, ಎ.ಎಸ್‌.ಖವಾಸ, ಅಲ್ತಾಪ ರಾಣೆಬೆನ್ನೂರ, ಹನಮಂತಸಾ ಕಲಬಾವಿ, ರಿಕಾಠಿ, ಮೌಜನ್‌, ರಮೇಶ ತೋಟದ, ಎಚ್‌.ಜೆ.ಹರ್ಲಾಪೂರ ಇದ್ದರು.

ಎಂ.ಎಂ.ಮಕಾನದಾರ ಕುರಾಣ ಪಠಿಸಿದರು. ಬ್ಯಾಂಕ್‌ ಪ್ರಧಾನ ಕಚೇರಿಯ ವ್ಯವಸ್ಥಾಪಕ ಎ.ಜಿ.ಯರಗುಡಿ ಸ್ವಾಗತಿಸಿ, ನಿರೂಪಿಸಿದರು.ಯಾಸಿನ್‌ ಹುಬ್ಬಳ್ಳಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ