ಆ್ಯಪ್ನಗರ

ವೈದ್ಯರು ಮಾನವೀಯತೆಯಿಂದ ಸೇವೆ ಸಲ್ಲಿಸಲಿ

ಲಕ್ಷ್ಮೇಶ್ವರ : ರೋಗಿಗಳು ವೈದ್ಯರಲ್ಲಿ ಸಾಕ್ಷಾತ್‌ ನಾರಾಯಣನನ್ನು ಕಾಣುತ್ತಾರೆ. ಇದನ್ನು ಎಲ್ಲ ವೈದ್ಯರು ಅರಿತುಕೊಳ್ಳಬೇಕು ಎಂದು ಹೂವಿನ ಶಿಗ್ಲಿಮಠದ ಚೆನ್ನವೀರ ಸ್ವಾಮಿಗಳು ಹೇಳಿದರು.

Vijaya Karnataka 7 Jul 2019, 5:00 am
ಲಕ್ಷ್ಮೇಶ್ವರ : ರೋಗಿಗಳು ವೈದ್ಯರಲ್ಲಿ ಸಾಕ್ಷಾತ್‌ ನಾರಾಯಣನನ್ನು ಕಾಣುತ್ತಾರೆ. ಇದನ್ನು ಎಲ್ಲ ವೈದ್ಯರು ಅರಿತುಕೊಳ್ಳಬೇಕು ಎಂದು ಹೂವಿನ ಶಿಗ್ಲಿಮಠದ ಚೆನ್ನವೀರ ಸ್ವಾಮಿಗಳು ಹೇಳಿದರು.
Vijaya Karnataka Web let doctors serve humanity
ವೈದ್ಯರು ಮಾನವೀಯತೆಯಿಂದ ಸೇವೆ ಸಲ್ಲಿಸಲಿ


ಅವರು ಸಮೀಪದ ಹೂವಿನ ಶಿಗ್ಲಿಯ ವಿರಕ್ತಮಠದಲ್ಲಿ ವೈದ್ಯರ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ವೈದ್ಯರ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಹಣ ಮಾಡಬೇಕು ಎಂಬ ಉದ್ದæ್ದೕಶ ಹೊಂದಿರುವ ಕೆಲ ವೈದ್ಯರ ಕಾರ್ಯದಿಂದಾಗಿ ಇಡೀ ವೈದ್ಯ ಲೋಕಕ್ಕೆ ಕೆಟ್ಟ ಹೆಸರು ಬರುತ್ತದೆ. ಕೇವಲ ಹಣಕ್ಕಾಗಿ ಚಿಕಿತ್ಸೆ ನೀಡದೇ ಮಾನವೀಯತೆ ಬೆಳೆಸಿಕೊಂಡು ಜನರ ಸೇವೆಗೆ ವೈದ್ಯರು ಮುಂದಾಗಬೇಕು ಎಂದು ಹೇಳಿದರು.

ಹಿರಿಯ ವೈದ್ಯ ಪಿ.ಡಿ. ತೋಟದ ಹಾಗೂ ಎಂ.ಆರ್‌. ಕಲಿವಾಳಮಠ ಮಾತನಾಡಿ, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂಬ ಭಾವನೆ ಎಲ್ಲ ವೈದ್ಯರಲ್ಲೂ ಇರುತ್ತದೆ. ಕೇವಲ ಹಣಕ್ಕಾಗಿ ಚಿಕಿತ್ಸೆ ನೀಡುವುದಷ್ಟೆ ನಮ್ಮ ಕರ್ತವ್ಯ ಅಲ್ಲ. ಬದಲಾಗಿ ರೋಗಿಗಳ ರೋಗ ಕಳೆದು ಅವರನ್ನು ಆರೋಗ್ಯವಂತರನ್ನಾಗಿ ಮಾಡುವ ಜವಾಬ್ದಾರಿ ಇರುತ್ತದೆ. ಆದರೂ ಇತ್ತೀಚೆಗೆ ದಿನಗಳಲ್ಲಿ ವೈದ್ಯರ ಮೇಲೆ ಹಲ್ಲೆಗಳು ಹೆಚ್ಚುತ್ತಿರುವುದು ವಿಷಾದನೀಯ ಎಂದರು.

ವೈದ್ಯರಾದ ಎಸ್‌.ಸಿ. ಮಲ್ಲಾಡದ, ಎಸ್‌.ಕೆ. ಹೆಬ್ಬಳ್ಳಿ, ಶಿವಾನಂದ ಹೂವಿನ, ಶ್ರೀಕಾಂತ ಬೆಳವಗಿ, ವಿನೋದ ಹೊನ್ನಿಕೊಪ್ಪ, ಎಸ್‌.ಬಿ. ಗುಡಗೇರಿ, ಪಿ.ಪಿ. ಶಿರಹಟ್ಟಿ, ಪ್ರಸನ್ನ ಕುಲಕರ್ಣಿ, ಎಸ್‌.ಬಿ. ನಾಗರಳ್ಳಿ, ನಾಗರಾಜ ವಾಲಿ, ಅಂದಾನಯ್ಯ ಹಿರೇಮಠ, ಡಿ.ಎಚ್‌. ಸಣ್ಣಬಾಳಪ್ಪನವರ, ಡಿ.ಡಿ. ಕಟಗಿ, ನೀಲಪ್ಪ ಹೆಬಸೂರ, ಶೇಖಣ್ಣ ಮಂಜಲಾಪುರ, ಸೋಮಣ್ಣ ಆಡಿನ, ವಗ್ಗಪ್ಪ ಕುಂದರಗಿ, ಆರ್‌.ವಿ. ಬಡಿಗೇರ, ಕೆ.ಎ. ಇಟಗಿಮಠ, ಪಿ.ಎಚ್‌. ಪಾಟೀಲ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ