ಆ್ಯಪ್ನಗರ

ವ್ಯಕ್ತಿತ್ವದಿಂದ ಮನುಷ್ಯ ದೊಡ್ಡವನಾಗಲಿ

ಲಕ್ಷ್ಮೇಶ್ವರ : ಜನಿಸುವ ಪ್ರತಿ ಮಗುವು ವಿಶ್ವಮಾನವನೇ ಆ ನಂತರ ಆ ಮಗುವನ್ನು ಜಾತಿ ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು ಎಂದು ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಆರ್‌.ಎಂ.ಹೊನಕೇರಿ ಹೇಳಿದರು.

Vijaya Karnataka 31 Dec 2019, 5:24 pm
ಲಕ್ಷ್ಮೇಶ್ವರ : ಜನಿಸುವ ಪ್ರತಿ ಮಗುವು ವಿಶ್ವಮಾನವನೇ ಆ ನಂತರ ಆ ಮಗುವನ್ನು ಜಾತಿ ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು ಎಂದು ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಆರ್‌.ಎಂ.ಹೊನಕೇರಿ ಹೇಳಿದರು.
Vijaya Karnataka Web let man become great by his personality
ವ್ಯಕ್ತಿತ್ವದಿಂದ ಮನುಷ್ಯ ದೊಡ್ಡವನಾಗಲಿ


ತಾಲೂಕಿನ ಶಿಗ್ಲಿಗ್ರಾಮದ ಕೆ.ಜಿ.ಮುದಗಲ್ಲಪ್ರೌಢಶಾಲೆ, ಜಿ.ಎಫ್‌.ಉಪನಾಳ ಹಿರಿಯ ಪ್ರಾಥಮಿಕ ಶಾಲೆ, ಢವಳಗಿ ತಬ್ಬಣ್ಣಜ್ಜ ಪೂರ್ವಪ್ರಾಥಮಿಕ ಶಾಲೆ ಹಾಗೂ ಎಸ್‌.ಎ.ಹುಲಗೂರ ಆಂಗ್ಲಮಾದ್ಯಮ ಶಾಲೆ ಆಶ್ರಯದಲ್ಲಿವಿಶ್ವಮಾನವ ದಿನಾಚರಣೆ ಸಮಾರಂಭದಲ್ಲಿಅತಿಥಿಯಾಗಿ ಆಗಮಿಸಿ ಮಾತನಾಡಿದರು. ಹುಟ್ಟುವಾಗ ವಿಶ್ವಮಾನವನಾಗಿಯೇ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾದಿಗಳಿಂದ ಬದ್ದನನ್ನಾಗಿ ಮಾಡುತ್ತೇವೆ. ಕುವೆಂಪು ಅವರ ಜಾತ್ಯತೀತ ಮನೋಭಾವದಿಂದ ಮೂಡಿಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ ಎಂದರು.

ಮುಖ್ಯೋಪಾಧ್ಯಾಯ ಎಲ್‌.ಎಸ್‌.ಅರಳಹಳ್ಳಿ ಮಾತನಾಡಿ, ಮಾನವ ವಿಕಾಸದ ಹಾದಿಯಲ್ಲಿಆಯಾ ಕಾಲದ ಅಗತ್ಯ ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿಕೆಲವರ ವಾಣಿ ವಿಶಿಷ್ಟಧರ್ಮವಾಗಿ ರೂಪಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿಕೊಂಡ ಮಹಾತ್ಮರ ವಾಣಿ ಮಕ್ಕಳಿಗೆ ಬೆಳಕಾಗಲಿ ಎಂದರು.

ಸಂಸ್ಥೆ ಚೇರ್ಮನ್‌ ಎಸ್‌.ಎ.ಹುಲಗೂರ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಆಂಗ್ಲಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಚಾಮರಾಜ ಹುಲಗೂರ, ವೀರಣ್ಣ ಅಕ್ಕೂರ, ಶಾಲಾ ಗುರುಮಾತೆ ಎಂ.ಎಚ್‌.ಪಾಟೀಲ, ಮೇರಿ ಸಬೀನಾ, ಜೆ.ಸಿ.ದೇವಾಂಗಮಠ, ವಿ.ಸಿ.ಬೆಂಡಿಗೇರಿ, ಎಂ.ಬಿ.ಕಲ್ಲೂರ, ಟಿ.ಎಸ್‌.ಹೂಗಾರ, ಆರ್‌.ಜಿ.ಲಿಂಗಶೆಟ್ಟಿ, ಎಂ.ಜಿ.ಯಲವಗಿ, ಬಿ.ಚಂದ್ರಪ್ಪ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ