ಗಜೇಂದ್ರಗಡ : ನಿಯಮಿತವಾಗಿ ಪೌಷ್ಟಿಕ ಆಹಾರ ಸೇವಿಸುವುದರಿಂದ ಆನಿಮಿಯಾ, ತಾಯಂದಿರ ಮರಣ, ಶಿಶುಮರಣ, ತಡೆಗಟ್ಟಬಹುದು. ಗರ್ಭಿಣಿಯರು ಅಗತ್ಯವಾಗಿ ನಾಲ್ಕು ಬಾರಿಯಾದರು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕಿರಿಯ ಆರೋಗ್ಯ ಸಹಾಯಕ ಮಹೇಶ ಹಿರೇಮಠ ಹೇಳಿದರು.
ಸಮೀಪದ ಸೂಡಿ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತಾಯಂದಿರ ಸಭೆ, ಪೌಷ್ಟಿಕ ಆಹಾರ ಶಿಬಿರದಲ್ಲಿ ಮಾತನಾಡಿದರು.
ಪ್ರಸವ ನಂತರ ಮಗುವಿಗೆ ಒಂದು ತಾಸಿನೊಳಗೆ ಎದೆಹಾಲು ಕೊಡಬೇಕು. ಇದು ಅಮೃತಕ್ಕೆ ಸಮಾನ ಮತ್ತು ಹೆರಿಗೆ ಆದಮೇಲೆ ನಂತರದ ಮಗುವಿಗೆ ಕನಿಷ್ಠ ಮೂರು ವರ್ಷವಾದರೂ ಅಂತರವಿರಬೇಕು ಎಂದರು.
ಹಿರಿಯ ಆರೋಗ್ಯ ಸಹಾಯಕ ಎಂ.ಆರ್. ಕಣ್ಣಿ ಮಾತನಾಡಿ, ಗರ್ಭಿಣಿಯಾದ ಮೂರು ತಿಂಗಳಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕು. ಅಂಗನವಾಡಿಯಲ್ಲಿ ದೊರೆಯುವ ಮತ್ತು ಆರೋಗ್ಯ ಇಲಾಖೆಯಿಂದ ಚುಚ್ಚುಮದ್ದುಗಳನ್ನು, ಮಾತ್ರೆಗಳನ್ನು ತೆಗೆದುಕೊಂಡು ಆರೋಗ್ಯವಂತ ಮಗು ಪಡೆಯಬೇಕು ಎಂದರು.
ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ದಿಲಶಾದ್ ಮುಲ್ಲಾ ಮಾತನಾಡಿ, ಆರೋಗ್ಯ ಇಲಾಖೆಯಿಂದ ತಾಯಿಕಾರ್ಡ, ಹಾಗೂ ದೊರೆಯುವ ಸೌಲಭ್ಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಗ್ರಾಪಂ ಸದಸ್ಯ ಸರೋಜಾ ಕೋಳುರು ಉದ್ಘಾಟಿಸಿದರು. ಕಿರಿಯ ಆರೋಗ್ಯ ಸಹಾಯಕಿ ವಹೀದಾ ನಮಾಜಿ, ಅಂಗನವಾಡಿ ಕಾರ್ಯಕರ್ತೆ ಶೋಭಾ ಕುಲಕರ್ಣಿ, ಸುಮಂಗಲಾ ಕ್ವಾರಿ, ಅನುರಾಧ ಸೊಬಗಿನ, ಸುವರ್ಣ ಹಳ್ಳಿಕೇರಿ, ತಾಯವ್ವ ಭಜಂತ್ರಿ, ಲಲಿತಾ ಜುಂಜಿ, ಮಂಜುಳಾ ಮದಕಟ್ಟಿ, ನಿರ್ಮಲಾ ಕರಭಿಷ್ಠೆ, ಮಹಾದೇವಿ ಜುಂಜಿ, ಆಶಾ ಲಂಕೇಶ, ಗೀತಾ ಮಾರನಬಸರಿ, ಸುಶಿಲಾ ಬಾರಕೇರ, ಅಕ್ಕಮ್ಮ ಪಟ್ಟಣಶೆಟ್ಟಿ ಇದ್ದರು.
ಸಮೀಪದ ಸೂಡಿ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತಾಯಂದಿರ ಸಭೆ, ಪೌಷ್ಟಿಕ ಆಹಾರ ಶಿಬಿರದಲ್ಲಿ ಮಾತನಾಡಿದರು.
ಪ್ರಸವ ನಂತರ ಮಗುವಿಗೆ ಒಂದು ತಾಸಿನೊಳಗೆ ಎದೆಹಾಲು ಕೊಡಬೇಕು. ಇದು ಅಮೃತಕ್ಕೆ ಸಮಾನ ಮತ್ತು ಹೆರಿಗೆ ಆದಮೇಲೆ ನಂತರದ ಮಗುವಿಗೆ ಕನಿಷ್ಠ ಮೂರು ವರ್ಷವಾದರೂ ಅಂತರವಿರಬೇಕು ಎಂದರು.
ಹಿರಿಯ ಆರೋಗ್ಯ ಸಹಾಯಕ ಎಂ.ಆರ್. ಕಣ್ಣಿ ಮಾತನಾಡಿ, ಗರ್ಭಿಣಿಯಾದ ಮೂರು ತಿಂಗಳಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕು. ಅಂಗನವಾಡಿಯಲ್ಲಿ ದೊರೆಯುವ ಮತ್ತು ಆರೋಗ್ಯ ಇಲಾಖೆಯಿಂದ ಚುಚ್ಚುಮದ್ದುಗಳನ್ನು, ಮಾತ್ರೆಗಳನ್ನು ತೆಗೆದುಕೊಂಡು ಆರೋಗ್ಯವಂತ ಮಗು ಪಡೆಯಬೇಕು ಎಂದರು.
ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ದಿಲಶಾದ್ ಮುಲ್ಲಾ ಮಾತನಾಡಿ, ಆರೋಗ್ಯ ಇಲಾಖೆಯಿಂದ ತಾಯಿಕಾರ್ಡ, ಹಾಗೂ ದೊರೆಯುವ ಸೌಲಭ್ಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಗ್ರಾಪಂ ಸದಸ್ಯ ಸರೋಜಾ ಕೋಳುರು ಉದ್ಘಾಟಿಸಿದರು. ಕಿರಿಯ ಆರೋಗ್ಯ ಸಹಾಯಕಿ ವಹೀದಾ ನಮಾಜಿ, ಅಂಗನವಾಡಿ ಕಾರ್ಯಕರ್ತೆ ಶೋಭಾ ಕುಲಕರ್ಣಿ, ಸುಮಂಗಲಾ ಕ್ವಾರಿ, ಅನುರಾಧ ಸೊಬಗಿನ, ಸುವರ್ಣ ಹಳ್ಳಿಕೇರಿ, ತಾಯವ್ವ ಭಜಂತ್ರಿ, ಲಲಿತಾ ಜುಂಜಿ, ಮಂಜುಳಾ ಮದಕಟ್ಟಿ, ನಿರ್ಮಲಾ ಕರಭಿಷ್ಠೆ, ಮಹಾದೇವಿ ಜುಂಜಿ, ಆಶಾ ಲಂಕೇಶ, ಗೀತಾ ಮಾರನಬಸರಿ, ಸುಶಿಲಾ ಬಾರಕೇರ, ಅಕ್ಕಮ್ಮ ಪಟ್ಟಣಶೆಟ್ಟಿ ಇದ್ದರು.