ಆ್ಯಪ್ನಗರ

ಶಿಕ್ಷಕರು ಮಕ್ಕಳಲ್ಲಿ ಕಲಿಕೆ ಆಸಕ್ತಿ ಹೆಚ್ಚಿಸಲಿ

ಶಿರಹಟ್ಟಿ: ಆಸಕ್ತಿ ಜ್ಞಾನ ಸಿದ್ಧಿಯ ಮಂತ್ರ. ಶಿಕ್ಷಕರು ನವೀನ ಬೋಧನಾ ತಂತ್ರಗಳ ಮೂಲಕ ಮಕ್ಕಳಲ್ಲಿಆಸಕ್ತಿ ಹೆಚ್ಚಿಸಬೇಕೆಂದು ಕ್ಷೇತ್ರ ಸಮನ್ವಯಾಧಿಕಾರಿ ವೈ.ಹೆಚ್‌.ನದಾಫ ಹೇಳಿದರು.

Vijaya Karnataka 22 Dec 2019, 5:00 am
ಶಿರಹಟ್ಟಿ: ಆಸಕ್ತಿ ಜ್ಞಾನ ಸಿದ್ಧಿಯ ಮಂತ್ರ. ಶಿಕ್ಷಕರು ನವೀನ ಬೋಧನಾ ತಂತ್ರಗಳ ಮೂಲಕ ಮಕ್ಕಳಲ್ಲಿಆಸಕ್ತಿ ಹೆಚ್ಚಿಸಬೇಕೆಂದು ಕ್ಷೇತ್ರ ಸಮನ್ವಯಾಧಿಕಾರಿ ವೈ.ಹೆಚ್‌.ನದಾಫ ಹೇಳಿದರು.
Vijaya Karnataka Web let teachers increase learning interest in children
ಶಿಕ್ಷಕರು ಮಕ್ಕಳಲ್ಲಿ ಕಲಿಕೆ ಆಸಕ್ತಿ ಹೆಚ್ಚಿಸಲಿ


ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯಲ್ಲಿಅಗಸ್ತತ್ರ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಸಂಚಾರಿ ವಿಜ್ಞಾನ ಪ್ರಯೋಗಾಲಯದಿಂದ ಅಕಮೈ ಫೌಂಡೇಶನ್‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿಶನಿವಾರ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿಆಸಕ್ತಿ ತುಂಬಿದರೆ ಅವರಲ್ಲಿಆತ್ಮವಿಶ್ವಾಸ ವೃದ್ಧಿಸಿ, ಕಲಿಕೆಯ ಹಂಬಲ ಮತ್ತು ಸಾಧಿಸುವ ಛಲ ಅವರನ್ನು ತಾನಾಗಿಯೇ ಆವರಿಸುತ್ತದೆ ಎಂದರು.

ಶಿಕ್ಷಕರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವ್ಹಿ.ವ್ಹಿ.ಸಾಲಿಮಠ, ಶಿಕ್ಷಕರು ವಿಜ್ಞಾನದ ಕುರಿತ ಸರಳ ಪ್ರಯೋಗಗಳನ್ನು ವಿಜ್ಞಾನ ಸಾಹಿತ್ಯ ರೂಪದಲ್ಲಿ$ಪಸರಿಸಬೇಕಿದೆ. ಶಿಕ್ಷಕರು ಪರಸ್ಪರ ಸಂವಹನ ನಡೆಸಿ ಸಂಪನ್ಮೂಲಗಳ ವಿನಿಮಯ ಮತ್ತು ವಿನಿಯೋಗ ಮಾಡಿಕೊಳ್ಳಬೇಕು. ಎಲ್ಲಶಾಲೆಗಳಲ್ಲಿಯೂ ಪ್ರಾಯೋಗ ಮತ್ತು ಚಟುವಟಿಕೆಯಾಧಾರಿತ ವಿಜ್ಞಾನ ಬೋಧನೆ ಹೆಚ್ಚಿಸಲು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ನೆರವು ಪಡೆಯಬೇಕು. ಈ ದಿಸೆಯಲ್ಲಿಅಗಸ್ತತ್ರ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನವು ಸಂಚಾರಿ ವಿಜ್ಞಾನ ಪ್ರಯೋಗಾಲಯದ ಮೂಲಕ ಶಾಲೆಗಳಿಗೆ ತೆರಳಿ ಪ್ರತಿ ಮಗು ಹಸ್ತಸ್ಪರ್ಶಿ ಪ್ರಯೋಗಗಳ ಮೂಲಕ ಅನುಭವಪೂರಿತ ಕಲಿಕೆಯನ್ನು ಆಶ್ವಾದಿಸಲು ನೆರವಾಗಿ, ಶಿಕ್ಷಣ ಇಲಾಖೆಯೊಂದಿಗೆ ಕೈ ಜೋಡಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಾಗಾರದಲ್ಲಿ30 ಸರಕಾರಿ ಶಾಲೆಗಳಿಂದ ಭಾಗವಹಿಸಿದ್ದ ಶಿಕ್ಷಕರನ್ನು ವಿಜ್ಞಾನ ಮಾದರಿ ನೀಡಿ ಸ್ವಾಗತಿಸಲಾಯಿತು. ವಿಜ್ಞಾನದ ವಿವಿಧ ಕ್ಲಿಷ್ಟ ಪರಿಕಲ್ಪನೆಗಳನ್ನು ಸರಳ ಪ್ರಯೋಗ ಮತ್ತು ಮಾದರಿ ತಯಾರಿಕೆ ಮೂಲಕ ಶಿಕ್ಷಕರು ವಿಷಯ ಪುನರ್ಬಲನ ಮಾಡಿಕೊಂಡರು. ಎನ್‌.ಎಸ್‌.ಬಂಕಾಪುರ, ಬಿ.ಎಮ್‌.ಯರಗುಪ್ಪಿ, ಎಂ.ಎನ್‌.ಭರಮಗೌಡ್ರ, ಆರ್‌.ಬಿ.ಜೋಶಿ, ಅಗಸ್ತತ್ರ್ಯ ಪ್ರತಿಷ್ಠಾನದ ಸಂಪನ್ಮೂಲ ವ್ಯಕ್ತಿಗಳಾದ ಸತೀಶ ಗೋಡಖಿಂಡಿ, ಸಂತೋಶ ಹಗರಟಗಿ, ನಿಂಗನಗೌಡ ಸತ್ತಿಗೌಡ್ರ, ರಾಮಪ್ಪ ತಳವಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ