ಆ್ಯಪ್ನಗರ

ಸರಕಾರ ಭದ್ರತೆ ಒದಗಿಸಲಿ

ನರಗುಂದ: ರಾಜ್ಯದಲ್ಲಿರುವ 40ಸಾವಿರಕ್ಕೂ ಹೆಚ್ಚು ಪತ್ರಿಕಾ ವಿತರಕರಿಗೆ ಜೀವನ ಭದ್ರತೆ ಒದಗಿಸಲು ಸರಕಾರ ಮುಂದಾಗಬೇಕು ಎಂದು ಭೈರನಹಟ್ಟಿ ದೊರೆಸ್ವಾಮಿಮಠದ ಶಾಂತಲಿಂಗ ಸ್ವಾಮಿಗಳು ಆಗ್ರಹಿಸಿದರು.

Vijaya Karnataka 20 Jan 2020, 5:00 pm
ನರಗುಂದ: ರಾಜ್ಯದಲ್ಲಿರುವ 40ಸಾವಿರಕ್ಕೂ ಹೆಚ್ಚು ಪತ್ರಿಕಾ ವಿತರಕರಿಗೆ ಜೀವನ ಭದ್ರತೆ ಒದಗಿಸಲು ಸರಕಾರ ಮುಂದಾಗಬೇಕು ಎಂದು ಭೈರನಹಟ್ಟಿ ದೊರೆಸ್ವಾಮಿಮಠದ ಶಾಂತಲಿಂಗ ಸ್ವಾಮಿಗಳು ಆಗ್ರಹಿಸಿದರು.
Vijaya Karnataka Web 19NRD1_25
ನರಗುಂದದಲ್ಲಿನಡೆದ ಪತ್ರಿಕಾ ವಿತರಕರ ಸಂಘದ ಉದ್ಘಾಟನೆಯನ್ನು ಸಿದ್ದಲಿಂಗ ಶಿವಾಚಾರ್ಯರು ನೆರವೇರಿಸದಿರು.


ಇಲ್ಲಿನ ತಾಪಂ ಸಭಾ ಭವನದಲ್ಲಿಜರುಗಿದ ಕಾರ್ಯನಿರತ ಪತ್ರಿಕಾ ವಿತರಕರ ಸಂಘದ ಉದ್ಘಾಟನೆಯ ಸಾನಿಧ್ಯವಹಿಸಿ ಮಾತನಾಡಿದರು. ಪ್ರಜಾಪ್ರಭುತ್ವ ದೇಶದ ಬೆನ್ನೆಲುಬು ಆಗಿರುವ ಅಸಂಘಟಿತ ವಲಯದಲ್ಲಿರುವ ಪತ್ರಿಕಾ ವಿತರಕರಣನ್ನು, ಪತ್ರಕರ್ತರನ್ನು ಸಂಘಟಿತ ವಲಯಕ್ಕೆ ಸೇರಿಸಿ ಅವರಿಗೆ ಭದ್ರತೆ, ಆರ್ಥಿಕ ಸಹಾಯ ಒದಗಿಸಬೇಕಾಗಿದೆ ಎಂದರು.

ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ನಡೆದ ಸುದೀರ್ಘ ಹೋರಾಟಕ್ಕೆ ಹೆಚ್ಚಿನ ಪ್ರಚಾರ ನೀಡಿದ ಪತ್ರಿಕೆಗಳ ಕಾರ್ಯವನ್ನು ಅಭಿನಂದಿಸಿದರು.

ಧಾರವಾಡ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಧ್ಯಾಪಕ ಡಾ.ವೈ.ಎಂ.ಭಜಂತ್ರಿ ಮಾತನಾಡಿ,ಪ್ರತಿ ಮನೆಗೆ ಪತ್ರಿಕೆ ಹಂಚುವ ಮೂಲಕ ಜ್ಞಾನದ ದೀಪ ಹಚ್ಚುವ ಕೆಲಸ ಮಾಡುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯವಾದುದು. ಸೈಕಲ್‌ ಮೇಲೆ ಪತ್ರಿಕೆಗಳನ್ನು ಹಂಚಿ ಜ್ಞಾನದ ದೀಪ ಬೆಳಗಿಸಿದ ಅಬ್ದುಲ್‌ ಕಲಾಂ ಅವರು ದೇಶದ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದರು ಎಂದರು.

ಪತ್ರಿಕೆ ಎಂದರೆ ಶಿವನ ಮೂರನೇ ಕಣ್ಣು. ಭ್ರಷ್ಟಾಚಾರದ ಮೇಲೆ ದೃಷ್ಠಿ ಬಿದ್ದರೆ ಸುಟ್ಟು ಭಸ್ಮಮಾಡಿಬಿಡುವ ಶಕ್ತಿ ಪತ್ರಿಕೆಗಳಿಗೆ ಇದೆ. ಇಂತಹ ಮಹತ್ತರ ಸೇವಾ ಕಾರ್ಯದಲ್ಲಿರುವ ವಿತರಕರು, ಪತ್ರಕರ್ತರಿಗೆ ನೆರವು ಬೇಕಿದೆ ಎಂದರು.

ಸಿಪಿಐ ಡಿ.ಬಿ.ಪಾಟೀಲ ಮಾತನಾಡಿ,ಮನೆ ಮನೆಗೆ ತಲುಪಿಸುವ ಕೆಲಸದಲ್ಲಿರುವ ಪತ್ರಿಕಾ ವಿತರಕರ ಸಂಘಕ್ಕೆ ಸಹಾಯ, ಸಹಕಾರದ ಭರವಸೆ ನೀಡಿದರು.

ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿದರು.ಯುವ ಕಾಂಗ್ರೆಸ್‌ ಅಧ್ಯಕ್ಷ ಪ್ರವೀಣ ಯಾವಗಲ್ಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕುರ್ತಕೋಟಿ, ಜಿಲ್ಲಾವಿತರಕರ ಸಂಘದ ಅಧ್ಯಕ್ಷ ಶಿವಕುಮಾರ ಕುದರಿಮೊತಿ, ಬಸವರಾಜ ಹಲಕುರ್ಕಿ ಮಾತನಾಡಿದರು. ಉಮೇಶ ಬೋಳಶೆಟ್ಟಿ ಸ್ವಾಗತಿಸಿದರು. ಜೆ.ಎಂ.ಖಾಜಿ ನಿರೂಪಿಸಿದರು. ಸಿ.ಬಿ.ಸುಬೇದಾರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ