ಆ್ಯಪ್ನಗರ

ಸ್ವಚ್ಛತೆ ಕಲ್ಪನೆ ಎಲ್ಲರಲ್ಲಿ ಮೂಡಲಿ

ಲಕ್ಷ್ಮೇಶ್ವರ : ಸ್ವಚ್ಛ ಭಾರತ ಕಲ್ಪನೆ ದೇಶದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿದ್ದು, ಅದಕ್ಕೆ ಎಲ್ಲ ಕಡೆಗಳಲ್ಲಿನ ಜನರು ಕೈಜೋಡಿಸಬೇಕಾಗಿದೆ. ಸ್ವಚ್ಛತೆ ಕಲ್ಪನೆ ಎಲ್ಲರಲ್ಲಿ ಬಂದಾಗ ಮಾತ್ರ ಈ ಯೋಜನೆ ಸಂಪೂರ್ಣ ಸಾಕಾರಗೊಳ್ಳಲು ಸಹಕಾರಿಯಾಗುತ್ತದೆ ಎಂದು ಶಿವಯೋಗಿ ಮಾನ್ವಿ ಹೇಳಿದರು.

Vijaya Karnataka 9 Jul 2019, 5:00 am
ಲಕ್ಷ್ಮೇಶ್ವರ : ಸ್ವಚ್ಛ ಭಾರತ ಕಲ್ಪನೆ ದೇಶದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿದ್ದು, ಅದಕ್ಕೆ ಎಲ್ಲ ಕಡೆಗಳಲ್ಲಿನ ಜನರು ಕೈಜೋಡಿಸಬೇಕಾಗಿದೆ. ಸ್ವಚ್ಛತೆ ಕಲ್ಪನೆ ಎಲ್ಲರಲ್ಲಿ ಬಂದಾಗ ಮಾತ್ರ ಈ ಯೋಜನೆ ಸಂಪೂರ್ಣ ಸಾಕಾರಗೊಳ್ಳಲು ಸಹಕಾರಿಯಾಗುತ್ತದೆ ಎಂದು ಶಿವಯೋಗಿ ಮಾನ್ವಿ ಹೇಳಿದರು.
Vijaya Karnataka Web let the idea of cleanliness come up in everyone
ಸ್ವಚ್ಛತೆ ಕಲ್ಪನೆ ಎಲ್ಲರಲ್ಲಿ ಮೂಡಲಿ


ಅವರು ಪಟ್ಟಣದ ಟಿ.ಬಿ.ಮಾನ್ವಿ ಪೆಟ್ರೋಲ್‌ ಬಂಕ್‌ನಲ್ಲಿ ಭಾರತ ಪೆಟ್ರೋಲಿಯಂ ವತಿಯಿಂದ ಸ್ವಚ್ಛ ಭಾರತ ಅಭಿಯಾನದಡಿ ಉಚಿತ ಆರೋಗ್ಯ ತಪಾಸಣೆ, ಚಿಕ್ಕ ಮಕ್ಕಳಿಗೆ ಪರಿಸರ ಕುರಿತ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ನಂತರ ವಿಜೇತ ಮಕ್ಕಳಿಗೆ ಹಾಗೂ ಭಾಗವಹಿಸಿದ್ದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪ್ರದೇಶಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಸ್ವಚ್ಛ ಭಾರತ ಅಭಿಯಾನಕ್ಕೆ ಭಾರತ ಪೆಟ್ರೋಲಿಯಂ ಸಹಕಾರ ನೀಡಿದ್ದು, ಎಲ್ಲರೂ ಕೈಜೋಡಿಸಿ ಈ ಯೋಜನೆ ಯಶಸ್ವಿಗೊಳಿಸೋಣ ಎಂದರು.

ಗಂಗಾಧರ ಮೆಣಸಿನಕಾಯಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಗೆ ಭಾರತ ಪೆಟ್ರೋಲಿಯಂನವರು ಏರ್ಪಡಿಸಿರುವ ಈ ಚಿತ್ರಕಲಾ ಸ್ಪರ್ಧೆ ಉತ್ತಮ ಕಾರ್ಯವಾಗಿದೆ. ಮಕ್ಕಳಲ್ಲಿರುವ ಪ್ರತಿಭೆಯ ಜತೆಗೆ ಸ್ವಚ್ಛ ಭಾರತದ ಕಲ್ಪನೆ ಸಣ್ಣ ಮಕ್ಕಳಲ್ಲಿ ಬಿತ್ತುವ ಕಾರ್ಯ ಕೈಗೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಪರಿಸರ ಸ್ವಚ್ಛತೆ, ಗಿಡಮರ ಬೆಳೆಸುವ ಕಾರ್ಯದಲ್ಲಿ ಮಕ್ಕಳು, ಸಮಾಜದ ಪ್ರತಿಯೊಬ್ಬರು ಪಾಲ್ಗೊಳ್ಳಬೇಕಾಗಿದೆ ಎಂದರು.

ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ಸುಮಾರು 50 ಕ್ಕೂ ಹೆಚ್ಚು ಮಕ್ಕಳು ಪರಿಸರ ಸಂರಕ್ಷ ಣೆ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸುಮಾರು 2 ಗಂಟೆಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ಮಕ್ಕಳು ಪರಿಸರ ಕುರಿತು ಅನೇಕ ಚಿತ್ರಗಳನ್ನು ಬಿಡಿಸಿದರು. ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು.

ವೀರೇಶ ಮಾನ್ವಿ, ಜಗದೀಶ ಆಚಾರಿ, ಸತೀಶ ಪಾಟೀಲ, ಪ್ರಭು ಬೋಮಲೆ, ಶ್ರೀಕಾಂತ ಬೇವಿನಮರದ, ಸುರೇಶ ವೇರ್ಣೆಕರ, ರಾಜು ಉಮಚಗಿ, ಪ್ರವೀಣ ಗಾಯಕರ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ