ಆ್ಯಪ್ನಗರ

ನಾರಾಯಣರಾಯರ ಸಾಹಿತ್ಯ ಎಲ್ಲರಿಗೂ ತಲುಪಲಿ

ರೋಣ: ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು. ನಾಡಗೀತೆಯ ರಚನೆಕಾರ, ನಾಡಕವಿ ನಾರಾಯಣರಾಯರ ಬದುಕು,ಸಾಧನೆ ಕುರಿತು ನಾಡ ಜನರಲ್ಲಿಅರಿವು, ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರಂತರವಾಗಬೇಕು. ಅದು ನಾಡಿನ ಪ್ರತಿ ಜನತೆಗೆ ತಲುಪುವಂತಾಗಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಈಶ್ವರಪ್ಪ ರೇವಡಿ ಹೇಳಿದರು

Vijaya Karnataka 13 Oct 2019, 5:00 am
ರೋಣ: ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು. ನಾಡಗೀತೆಯ ರಚನೆಕಾರ, ನಾಡಕವಿ ನಾರಾಯಣರಾಯರ ಬದುಕು,ಸಾಧನೆ ಕುರಿತು ನಾಡ ಜನರಲ್ಲಿಅರಿವು, ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರಂತರವಾಗಬೇಕು. ಅದು ನಾಡಿನ ಪ್ರತಿ ಜನತೆಗೆ ತಲುಪುವಂತಾಗಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಈಶ್ವರಪ್ಪ ರೇವಡಿ ಹೇಳಿದರು
Vijaya Karnataka Web let the literature of narayanarayas reach everyone
ನಾರಾಯಣರಾಯರ ಸಾಹಿತ್ಯ ಎಲ್ಲರಿಗೂ ತಲುಪಲಿ


ಅವರು ಪಟ್ಟಣದ ಕಸಾಪ ಭವನದಲ್ಲಿತಾಲೂಕು ಸಾಹಿತ್ಯ ಪರಿಷತ್‌ ಹಾಗೂ ರೋಣ ಹೋಬಳಿ ಘಟಕ ಜಂಟಿಯಾಗಿ ಆಯೋಜಿಸಿದ್ದ ವಾರದ ಸಾಹಿತ್ಯ ಚಿಂತನ ಗೋಷ್ಠಿಯಲ್ಲಿನಾಡಕವಿ ಹುವಿಲಗೋಳ ನಾರಾಯಣರಾವ್‌ ಅವರ ಜೀವನ ಹಾಗೂ ಸಂದೇಶ ಕುರಿತು ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹುಯಿಲಗೋಳ ನಾರಾಯಣರಾವ್‌ ಅವರು ವಕೀಲರಾಗಿದ್ದರು, ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣದಲ್ಲಿಪಾಲ್ಗೊಂಡಿದ್ದರು. ಅವರಿಗೆ ನಾಡು,ನುಡಿ ಬಗ್ಗೆ ಅಪರಿಮಿತ ಕಳಕಳಿ ಇತ್ತು. ಸಾಹಿತಿಗಳಾಗಿದ್ದ ಅವರಿಂದ ರಚಿತ ನಾಟಕ,ಕವನ ಇತ್ಯಾದಿ ಸಾಹಿತ್ಯದ ಪ್ರಕಾರಗಳು ನಾಡಿನ ಯುವಜನತೆಗೆ ತಲುಪುವಂತಾಗಬೇಕಿದೆ ಎಂದರು

ನಾರಾಯಣರಾವ್‌ ಅವರು ಮೊದಲು ನಾಟಕಕಾರರು, ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ,ಐತಿಹಾಸಿಕ,ಪೌರಾಣಿಕ,ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕ ರಚಿಸಿ ಪ್ರದರ್ಶಿಸಿದರು. ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನು ರಚಿಸಿದ್ದರು.ಕನ್ನಡ ನೆಲ,ಜಲ,ಭಾಷೆ,ಸಂಸ್ಕೃತಿ ರಕ್ಷಣೆಗೆ ಹೆಸರಾಗಿದ್ದ ನಾರಾಯಣರಾಯರ ಪ್ರತಿ ಕಾರ್ಯಗಳು ಇಂದಿನ ಯುವ ಜನಾಂಗಕ್ಕೆ ತಲುಪಿಸುವ ಕಾರ್ಯ ಮಾಡಬೇಕು ಎಂದರು

ವೇದಿಕೆಯಲ್ಲಿಎಂ.ಎಸ್‌.ಹೊನ್ನವಾಡ, ತಹಸೀಲ್ದಾರ, ಗೀತಾ ಮಾಡಲಗೇರಿ, ಬಸವರಾಜ ಕೊರ್ಲಹಳ್ಳಿ, ಮಹೇಶ ಕುರಿ, ರಮಾಕಾಂತ ಕಮತಗಿ, ಮಂಜುನಾಥ ಘಾಳಿ, ಎಂ.ಎನ್‌.ಅರಳಿ, ಪಿ.ಆರ್‌.ಹಿರೇಮಠ, ಕೆ.ಎಸ್‌.ಬಾರಕೇರ, ಎಸ್‌.ಎಸ್‌.ಖ್ಯಾತನಗೌಡ್ರ, ವೈ.ಆರ್‌.ಬೆನಹಾಳ, ಎಸ್‌.ಟಿ.ಪಾಲ್ಮೀಕಿ, ಎಚ್‌.ಆರ್‌. ಓಲೇಕಾರ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ