ಆ್ಯಪ್ನಗರ

ವಿದ್ಯಾರ್ಥಿಗಳು ದೇಶ ಸೇವೆಯಲ್ಲಿ ತೊಡಗಲಿ

ಲಕ್ಕುಂಡಿ: ವಿಜ್ಞಾನ, ತಂತ್ರಜ್ಞಾನ ಹಾಗೂ ಆಧ್ಯಾತ್ಮಿಕವಾಗಿ ಮುಂದುವರಿಯುತ್ತಿರುವ ಭಾರತ ಇನ್ನೂ ಕೆಲವೇ ವರ್ಷಗಳಲ್ಲಿವಿಶ್ವ ಗುರು ಆಗುವ ಎಲ್ಲಲಕ್ಷಣಗಳು ಇವೆ ಎಂದು ಪ್ರೊ. ವಿಶ್ವನಾಥ ಮಾನೆ ಹೇಳೆದರು.

Vijaya Karnataka 4 Nov 2019, 5:00 am
ಲಕ್ಕುಂಡಿ: ವಿಜ್ಞಾನ, ತಂತ್ರಜ್ಞಾನ ಹಾಗೂ ಆಧ್ಯಾತ್ಮಿಕವಾಗಿ ಮುಂದುವರಿಯುತ್ತಿರುವ ಭಾರತ ಇನ್ನೂ ಕೆಲವೇ ವರ್ಷಗಳಲ್ಲಿವಿಶ್ವ ಗುರು ಆಗುವ ಎಲ್ಲಲಕ್ಷಣಗಳು ಇವೆ ಎಂದು ಪ್ರೊ. ವಿಶ್ವನಾಥ ಮಾನೆ ಹೇಳೆದರು.
Vijaya Karnataka Web let the students engage in country service
ವಿದ್ಯಾರ್ಥಿಗಳು ದೇಶ ಸೇವೆಯಲ್ಲಿ ತೊಡಗಲಿ


ಗದಗ ಕೆವಿಎಸ್‌ಆರ್‌ ಕಾಲೇಜು ಆಶ್ರಯದಲ್ಲಿಇಲ್ಲಿಯ ಅನ್ನದಾನೀಶ್ವರ ಸಮುದಾಯ ಭವನದಲ್ಲಿನಡೆದ ಎನ್‌ಎಸ್‌ಎಸ್‌ ಶಿಬಿರದ ಎರಡನೇ ದಿನದ ಕಾರ್ಯಕ್ರಮದಲ್ಲಿಉಪನ್ಯಾಸ ನೀಡಿದ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿವಿಜ್ಞಾನಿಗಳು ನೂತನ ಅವಿಷ್ಕಾರ ಮಾಡುತ್ತಿದ್ದಾರೆ. ಆರ್ಥಿಕವಾಗಿ ಬಲಾಢ್ಯವಾಗಲು ಈಗಾಗಲೇ ಕೇಂದ್ರ ಸರಕಾರ ಹಲವು ಯೋಜನೆಗಳ ಮೂಲಕ ಸಾಧನೆ ಮಾಡುತ್ತಿದ್ದು ಯುವಕರು ವಿದ್ಯಾರ್ಥಿ ಜೀವನದಿಂದ ದೇಶ ಸೇವೆಯಲ್ಲಿತೊಡಗಿಕೊಳ್ಳಬೇಕು. ಯಾವುದಾದರೂ ಒಂದು ವಿಷಯದಲ್ಲಿಸಾಧನೆ ಮಾಡಲು ಪ್ರಯತ್ನಿಸಬೇಕು. ಎಂದ ಅವರು ಆಧ್ಯಾತ್ಮಿಕವಾಗಿ ಹೆಸರು ಪಡೆದಿರುವ ಈ ದೇಶದ ಶರಣ, ಸಂತರ ತತ್ವಗಳನ್ನು ಜೀವನದಲ್ಲಿಅಳವಡಿಸಿಕೊಂಡು ಸಾಧನೆ ಮಾಡಬೇಕು ಎಂದರು.

ಸತೀಶ ಪಾಸಿ ಅಧ್ಯಕ್ಷತೆ ವಹಿಸಿ,ಈ ದೇಶದಲ್ಲಿಅಧಿಕ ಸಂಖ್ಯೆಯಲ್ಲಿರುವ ಯುವ ಸಮೂಹ ಸದೃಢ ಭಾರತ ನಿರ್ಮಾಣ ಮಾಡಲು ಕಂಕಣ ಬದ್ಧರಾಗಬೇಕು. ಸಮಯ ಪಾಲನೆಯೊಂದಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಇದಕ್ಕೂ ಪೂರ್ವ ಮುಂಜಾನೆ ಶಿಬಿರಾರ್ಥಿಗಳು ಅನ್ನದಾನೀಶ್ವರ ಮಠದ ಸುತ್ತಲೂ ಸ್ವಚ್ಛತೆಯ ಶ್ರಮದಾನ ಮಾಡಿದರು.

ರುದ್ರಯ್ಯ ಮುನವಳ್ಳಿಮಠ, ಬಸವರಾಜ ಮುಳ್ಳಾಳ, ವೀರೇಶ, ಬಸವರಾಜ ವೇದಿಕೆಯಲ್ಲಿದ್ದರು. ಶಿಬಿರಾಧಿಕಾರಿ ಮಹಾದೇವಯ್ಯ ಎನ್‌. ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಿಯಾಂಕ ಹಂಚಿನಾಳ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ