ಆ್ಯಪ್ನಗರ

ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡಲಿ

ಗದಗ :ಇಂದಿನ ವಿದ್ಯಾರ್ಥಿಗಳು ಸುಭದ್ರ ರಾಷ್ಟ್ರ ಕಟ್ಟುವಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟು ಶ್ರೇಷ್ಠ ಸಂವಿಧಾನದ ಅನುಕರಣೆ ಮಾಡಿ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಡಾ.ಬಿ.ಎಫ್‌.ದಂಡಿನ ಹೇಳಿದರು.

Vijaya Karnataka 6 Aug 2019, 5:00 am
ಗದಗ :ಇಂದಿನ ವಿದ್ಯಾರ್ಥಿಗಳು ಸುಭದ್ರ ರಾಷ್ಟ್ರ ಕಟ್ಟುವಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟು ಶ್ರೇಷ್ಠ ಸಂವಿಧಾನದ ಅನುಕರಣೆ ಮಾಡಿ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಡಾ.ಬಿ.ಎಫ್‌.ದಂಡಿನ ಹೇಳಿದರು.
Vijaya Karnataka Web let the students study continuously
ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡಲಿ


ನಗರದ ಕೆವಿಎಸ್‌ಆರ್‌ ಮಹಾವಿದ್ಯಾಲಯ ಸಂಸತ್‌ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಬೇಕೆಂದರು.

ಡಾ.ಮಹೇಶ ಜೋಶಿ ಮಾತನಾಡಿ, ವಿದ್ಯಾರ್ಥಿಗಳು ಬದುಕಿನಲ್ಲಿ ಆತ್ಮವಿಶ್ವಾಸದಿಂದ ಬದುಕು ಎದುರಿಸಬೇಕು. ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಬೇಕು ಎಂದರು.ನಿವೃತ್ತರಾದ ಕವಿತಾ ಕಾಶಪ್ಪನವರನ್ನು ಸನ್ಮಾನಿಸಲಾಯಿತು.

ಸಂಕೇತ ಕಾಲೇಜು ಪ್ರಾ. ನವೀನ ಕಂಬಾರ, ಸ್ಕೌಟ್‌ ಮತ್ತು ಗೈಡ್ಸ್‌ ಸಂಘದ ಅಧ್ಯಕ್ಷ ಮಹಾದೇವಯ್ಯನವರು, ಪ್ರೊ. ಜಿ.ಎಂ. ಹಕಾರಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಹಂಚಿನಾಳ ಪ್ರಾರ್ಥಿಸಿದರು. ಶಾರದಾ ಸ್ವಾಗತ ಗೀತೆ ಹಾಡಿದರು.ಪ್ರಾ. ಅನಿಲ ವೈದ್ಯ ಸ್ವಾಗತಿಸಿದರು. ಪ್ರೊ.ಶಶಿಧರ ಕುರಿ ನಿರೂಪಿಸಿದರು. ಪ್ರೊ.ಸತೀಶ ಪಾಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ