ಯುವ ಸಮುದಾಯ ದೇಶ ರಕ್ಷ ಣೆಗೆ ನಿಲ್ಲಲಿ
ನರಗುಂದ : ದೇಶ ಸೇವೆಯೇ ಈಶ ಸೇವೆ ಎಂದು ಅರಿತು ರಾಷ್ಟ್ರ ನಮಗೇನು ನೀಡಿದೆ ಎನ್ನುವ ಬದಲು ರಾಷ್ಟ್ರಕ್ಕಾಗಿ ನಾವೇನು ಕೊಡುಗೆ ನೀಡಿದ್ದೇವೆ ಎಂಬುದನ್ನು ಇಂದಿನ ಯುವ ಸಮುದಾಯ ಮನಗಂಡು ರಾಷ್ಟ್ರ ರಕ್ಷ ಣೆಗೆ ಮುಂದಾಗಬೇಕು ಎಂದು ಕಾರ್ಗಿಲ್ ಹೋರಾಟಗಾರ ಪಂಚಯ್ಯ ವಿರಕ್ತಮಠ ಹೇಳಿದರು.
Vijaya Karnataka 28 Jul 2019, 5:00 am
ನರಗುಂದ : ದೇಶ ಸೇವೆಯೇ ಈಶ ಸೇವೆ ಎಂದು ಅರಿತು ರಾಷ್ಟ್ರ ನಮಗೇನು ನೀಡಿದೆ ಎನ್ನುವ ಬದಲು ರಾಷ್ಟ್ರಕ್ಕಾಗಿ ನಾವೇನು ಕೊಡುಗೆ ನೀಡಿದ್ದೇವೆ ಎಂಬುದನ್ನು ಇಂದಿನ ಯುವ ಸಮುದಾಯ ಮನಗಂಡು ರಾಷ್ಟ್ರ ರಕ್ಷ ಣೆಗೆ ಮುಂದಾಗಬೇಕು ಎಂದು ಕಾರ್ಗಿಲ್ ಹೋರಾಟಗಾರ ಪಂಚಯ್ಯ ವಿರಕ್ತಮಠ ಹೇಳಿದರು.
ಇಲ್ಲಿನ ಎಸ್ವೈಎಸ್ ಕಾಲೇಜನಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿ ಹಾಗೂ ಎಸ್ವೈಎಸ್ ಶಿಕ್ಷ ಣ, ಪದವಿ ಮಹಾವಿದ್ಯಾಲಯ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿ ದೇಶಕ್ಕಾಗಿ ಹುತಾತ್ಮರಾಗಿ ವೀರಸ್ವರ್ಗ ಸೇರಿದ ಭಾರತದ ಹೆಮ್ಮೆಯ ಯೋಧರ ತ್ಯಾಗ ಬಲಿದಾನದ ಕುರಿತು ಪಾಲಕರು ತಮ್ಮ ಮಕ್ಕಳಿಗೆ ತಿಳಿಸುವ ಮೂಲಕ ಅವರಲ್ಲಿ ರಾಷ್ಟ್ರಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಆಧುನಿಕ ಭಾರತದ ಇತಿಹಾಸದ ಮೈಲುಗಲ್ಲು. ಶಾಂತಿ ಒಪ್ಪಂದವಾಗಿದ್ದರೂ ಕಪಟತನ ತೋರಿ ಭಾರತದ ಮೇಲೆ ರಹಸ್ಯ ಆಕ್ರಮಣ ಮಾಡಿದ ಪಾಕಿಸ್ತಾನದ ಹೇಯ ಕೃತ್ಯಕ್ಕೆ ಭಾರತೀಯ ಸೈನ್ಯ ತಕ್ಕ ಉತ್ತರ ನೀಡಿ ಆ ಯುದ್ದದಲ್ಲಿ ಜಯಶಾಲಿಯಾದ ದಿನವೇ ಜು.26 ಎಂದು ತಮ್ಮ ಕಾರ್ಗಿಲ್ ಹೋರಾಟದ ಅನುಭವ ಹಂಚಿಕೊಂಡರು.
ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿ, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ, ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ದ ಎಂಬ ಮಾತನ್ನು ಸಾಬೀತು ಪಡಿಸಿ, ಭಾರತೀಯ ಸೇನೆಯ ತಾಕತ್ತನ್ನು ವಿಶ್ವಕ್ಕೆ ತೋರಿಸಿದ ದಿನವೇ ಕಾರ್ಗಿಲ್ ವಿಜಯದಿನ. ಇಂದು ಕಾರ್ಗಿಲ್ ವಿಜಯದ 20 ನೇ ವರ್ಷಾಚರಣೆಯಲ್ಲಿದ್ದರೂ ಸಹಿತ ಆ ಯುದ್ದಲ್ಲಿ ಸುಮಾರು 550ಕ್ಕೂ ಹೆಚ್ಚು ಸೈನಿಕರ ತ್ಯಾಗ ಬಲಿದಾನಗಳ ಸಂಕೇತ ಇದಾಗಿದೆ ಎಂದು ಹುತಾತ್ಮ ಯೋಧರನ್ನು ಸ್ಮರಿಸಿದರು.
ಪ್ರೊ.ಬಿ.ಸಿ.ಹನಮಂತಗೌಡ್ರ, ಉಪನ್ಯಾಸಕಿ ಎಸ್.ಎನ್.ಬಾರಕೇರ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆ ಅಧ್ಯಕ್ಷ ವೀರನಗೌಡ ಪಾಟೀಲ, ಶ್ರೀಕಾಂತ ಮೇಟಿ ಉಪಸ್ಥಿತರಿದ್ದರು. ರೇಖಾ ಸವದತ್ತಿ ನಿರೂಪಿಸಿದರು. ಲಕ್ಷ ್ಮಣ ಹೊಂಗಲ್ ಸ್ವಾಗತಿಸಿ, ವಂದಿಸಿದರು.
ಇಲ್ಲಿನ ಎಸ್ವೈಎಸ್ ಕಾಲೇಜನಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿ ಹಾಗೂ ಎಸ್ವೈಎಸ್ ಶಿಕ್ಷ ಣ, ಪದವಿ ಮಹಾವಿದ್ಯಾಲಯ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿ ದೇಶಕ್ಕಾಗಿ ಹುತಾತ್ಮರಾಗಿ ವೀರಸ್ವರ್ಗ ಸೇರಿದ ಭಾರತದ ಹೆಮ್ಮೆಯ ಯೋಧರ ತ್ಯಾಗ ಬಲಿದಾನದ ಕುರಿತು ಪಾಲಕರು ತಮ್ಮ ಮಕ್ಕಳಿಗೆ ತಿಳಿಸುವ ಮೂಲಕ ಅವರಲ್ಲಿ ರಾಷ್ಟ್ರಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಆಧುನಿಕ ಭಾರತದ ಇತಿಹಾಸದ ಮೈಲುಗಲ್ಲು. ಶಾಂತಿ ಒಪ್ಪಂದವಾಗಿದ್ದರೂ ಕಪಟತನ ತೋರಿ ಭಾರತದ ಮೇಲೆ ರಹಸ್ಯ ಆಕ್ರಮಣ ಮಾಡಿದ ಪಾಕಿಸ್ತಾನದ ಹೇಯ ಕೃತ್ಯಕ್ಕೆ ಭಾರತೀಯ ಸೈನ್ಯ ತಕ್ಕ ಉತ್ತರ ನೀಡಿ ಆ ಯುದ್ದದಲ್ಲಿ ಜಯಶಾಲಿಯಾದ ದಿನವೇ ಜು.26 ಎಂದು ತಮ್ಮ ಕಾರ್ಗಿಲ್ ಹೋರಾಟದ ಅನುಭವ ಹಂಚಿಕೊಂಡರು.
ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿ, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ, ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ದ ಎಂಬ ಮಾತನ್ನು ಸಾಬೀತು ಪಡಿಸಿ, ಭಾರತೀಯ ಸೇನೆಯ ತಾಕತ್ತನ್ನು ವಿಶ್ವಕ್ಕೆ ತೋರಿಸಿದ ದಿನವೇ ಕಾರ್ಗಿಲ್ ವಿಜಯದಿನ. ಇಂದು ಕಾರ್ಗಿಲ್ ವಿಜಯದ 20 ನೇ ವರ್ಷಾಚರಣೆಯಲ್ಲಿದ್ದರೂ ಸಹಿತ ಆ ಯುದ್ದಲ್ಲಿ ಸುಮಾರು 550ಕ್ಕೂ ಹೆಚ್ಚು ಸೈನಿಕರ ತ್ಯಾಗ ಬಲಿದಾನಗಳ ಸಂಕೇತ ಇದಾಗಿದೆ ಎಂದು ಹುತಾತ್ಮ ಯೋಧರನ್ನು ಸ್ಮರಿಸಿದರು.
ಪ್ರೊ.ಬಿ.ಸಿ.ಹನಮಂತಗೌಡ್ರ, ಉಪನ್ಯಾಸಕಿ ಎಸ್.ಎನ್.ಬಾರಕೇರ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆ ಅಧ್ಯಕ್ಷ ವೀರನಗೌಡ ಪಾಟೀಲ, ಶ್ರೀಕಾಂತ ಮೇಟಿ ಉಪಸ್ಥಿತರಿದ್ದರು. ರೇಖಾ ಸವದತ್ತಿ ನಿರೂಪಿಸಿದರು. ಲಕ್ಷ ್ಮಣ ಹೊಂಗಲ್ ಸ್ವಾಗತಿಸಿ, ವಂದಿಸಿದರು.