ಆ್ಯಪ್ನಗರ

ಮಹಿಳೆಯರು ಮುಖ್ಯ ವಾಹಿನಿಗೆ ಬರಲಿ

ಲಕ್ಕುಂಡಿ: ಪ್ರಸ್ತುತ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿಮಹಿಳೆಯರಿಗೆ ಎಲ್ಲರೀತಿಯ ಸೌಲಭ್ಯಗಳಿದ್ದು ಈ ಸೌಲಭ್ಯಗಳನ್ನು ಪಡೆಯಲು ಹೋರಾಟ ಮಾಡಬೇಕಾಗಿದೆ ಎಂದು ಶಿರಹಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜ್‌ ಉಪನ್ಯಾಸಕಿ ಪ್ರಿಯಾಂಕ ನಡುವಲಮನಿ ಅಭಿಪ್ರಾಯಪಟ್ಟರು.

Vijaya Karnataka 8 Nov 2019, 5:31 pm
ಲಕ್ಕುಂಡಿ: ಪ್ರಸ್ತುತ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿಮಹಿಳೆಯರಿಗೆ ಎಲ್ಲರೀತಿಯ ಸೌಲಭ್ಯಗಳಿದ್ದು ಈ ಸೌಲಭ್ಯಗಳನ್ನು ಪಡೆಯಲು ಹೋರಾಟ ಮಾಡಬೇಕಾಗಿದೆ ಎಂದು ಶಿರಹಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜ್‌ ಉಪನ್ಯಾಸಕಿ ಪ್ರಿಯಾಂಕ ನಡುವಲಮನಿ ಅಭಿಪ್ರಾಯಪಟ್ಟರು.
Vijaya Karnataka Web let women come to the mainstream
ಮಹಿಳೆಯರು ಮುಖ್ಯ ವಾಹಿನಿಗೆ ಬರಲಿ


ಇಲ್ಲಿಯ ಅನ್ನದಾನೀಶ್ವರ ಸಮುದಾಯ ಭವನದಲ್ಲಿ ಗದಗ ಕನಕದಾಸ ಶಿಕ್ಷಣ ಸಮಿತಿಯ ಕೆವಿಎಸ್‌ಆರ್‌ ಕಾಲೇಜ್‌ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್‌ ಶಿಬಿರದಲ್ಲಿಮಹಿಳಾ ಸಬಲೀಕರಣ ಕುರಿತು ಅವರು ಮಾತನಾಡಿದರು.

ಶಿಕ್ಷಣ , ಉದ್ಯೋಗ, ಪಡೆಯುವ ಮುಖಾಂತರ ಸಾಮಾಜಿಕ ಕಳಕಳಿ ಮಹಿಳೆಯರಿಗೆ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿಪಾಲಕರು ಪ್ರತಿಯೊಬ್ಬ ಹೆಣ್ಣು ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಬೇಕು. ಸಾಮಾಜಿಕ, ರಾಜಕೀಯ ಆರ್ಥಿಕ ಕ್ಷೇತ್ರಗಳು ಸೇರಿದಂತೆ ತಮ್ಮ ಮೂಲ ಹಕ್ಕು ಮತ್ತು ಸೌಲಭ್ಯ ಪಡೆಯಲು ನಿರಂತರ ಹೋರಾಟ ಮಾಡಬೇಕಾಗಿದೆ ಎಂದರು. ಅಧ್ಯಕ್ಷತೆ ಕವಿತಾ ನಾಗಪ್ಪನವರ ಮಾತನಾಡಿದರು.

ಉಪ ಪ್ರಾಚಾರ್ಯ ಸತೀಶ ಪಾಸಿ, ಪ್ರೋ. ವಿ.ಎನ್‌ ಮರೆಗುದ್ದಿ, ಡಾ ಸೋಮಶೇಖರಯ್ಯ ಗುಲಬುರ್ಗಾ, ಪಿ.ಎಂ. ಪ್ರೋ. ಬಸಲಿಂಗಯ್ಯ ಕೊಟ್ಟೂರು, ಗ್ರಾಪಂ ಸದಸ್ಯೆ ಅಂದವ್ವ ಸೋಮನಕಟ್ಟಿ, ಪ್ರೋ. ಕೃಷ್ಣಾ ರವೋಳೊಜಿ ಉಪಸ್ಥಿತರಿದ್ದರು.

ಶಿಬಿರಾಧಿಕಾರಿ ಮಹಾದೇವಯ್ಯ ಎನ್‌.ಎಂ ಪ್ರಸ್ತಾವಿಕ ಮಾತನಾಡಿದರು. ಸತೀಶ ಭಾವಿಕಟ್ಟಿ ನಿರೂಪಿಸಿದರು. ಸಹನಾ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ