ಆ್ಯಪ್ನಗರ

ಸಹಾಯ ಮಾಡುವ ಗುಣ ಹೊಂದಲಿ: ಪತ್ರಿವನ ಮಠದ ಶ್ರೀ

ಕೊಣ್ಣೂರ: ಸಹಾಯ ಮಾಡುವ ಗುಣ ಹೊಂದಲಿ. ಪತ್ರಿವನ ಮಠದ ಶ್ರೀ. ಈ ಪ್ರಪಂಚದಲ್ಲಿ ಅತ್ಯಂತ ಬುದ್ಧಿಶಾಲಿ ಪ್ರಾಣಿ ಎಂದೇ ಖ್ಯಾತಿ ಹೊಂದಿದ ಮನುಷ್ಯ. ಆದರೆ ಬುದ್ಧಿ ಹೊಂದಿದ ಪ್ರಾಣಿಗಳು ಇಂದಿನ ದಿನಗಳಲ್ಲಿ ಮನುಷ್ಯನ ಒಬ್ಬರನ್ನು ಕಂಡರೆ ಇನ್ನೂಬ್ಬರಿಗೆ ಆಗದು ಎನ್ನುವ ರೀತಿಯಲ್ಲಿ ಬದುಕುತ್ತಿರುವ ಕಾಲದಲ್ಲಿ ದೇವರ, ಸಮಾಜದ ಕಾರ್ಯಗಳು ಹಾಗೂ ಯಾವುದೇ ಕೈಕಾರ್ಯಗಳು ನಡೆಯುವಲ್ಲಿ ಅನಾನೂಕೂಲವಾಗುತ್ತದೆ ಎಂದು ನರಗುಂದ ಪತ್ರಿವನಮಠದ ಶ್ರೀ ಗುರುಸಿದ್ದ ವೀರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Vijaya Karnataka 17 May 2019, 5:00 am
ಕೊಣ್ಣೂರ: ಸಹಾಯ ಮಾಡುವ ಗುಣ ಹೊಂದಲಿ. ಪತ್ರಿವನ ಮಠದ ಶ್ರೀ. ಈ ಪ್ರಪಂಚದಲ್ಲಿ ಅತ್ಯಂತ ಬುದ್ಧಿಶಾಲಿ ಪ್ರಾಣಿ ಎಂದೇ ಖ್ಯಾತಿ ಹೊಂದಿದ ಮನುಷ್ಯ. ಆದರೆ ಬುದ್ಧಿ ಹೊಂದಿದ ಪ್ರಾಣಿಗಳು ಇಂದಿನ ದಿನಗಳಲ್ಲಿ ಮನುಷ್ಯನ ಒಬ್ಬರನ್ನು ಕಂಡರೆ ಇನ್ನೂಬ್ಬರಿಗೆ ಆಗದು ಎನ್ನುವ ರೀತಿಯಲ್ಲಿ ಬದುಕುತ್ತಿರುವ ಕಾಲದಲ್ಲಿ ದೇವರ, ಸಮಾಜದ ಕಾರ್ಯಗಳು ಹಾಗೂ ಯಾವುದೇ ಕೈಕಾರ್ಯಗಳು ನಡೆಯುವಲ್ಲಿ ಅನಾನೂಕೂಲವಾಗುತ್ತದೆ ಎಂದು ನರಗುಂದ ಪತ್ರಿವನಮಠದ ಶ್ರೀ ಗುರುಸಿದ್ದ ವೀರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Vijaya Karnataka Web GDG-16KNR PHOTO 2A


ಅವರು ಕೊಣ್ಣೂರ ಸಮೀಪದ ರಡ್ಡೇರನಾಗನೂರದ ಗ್ರಾಮದೇವತೆ ಆವರಣದಲ್ಲಿ 5ನೇ ವರ್ಷ ಗ್ರಾಮದೇವತೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಅದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಮಾನವೀಯತೆ ಎಂಬುವುದು ಮರೆತು ಹೋಗಿ ಯಾರನ್ನು ಯಾರು ನಂಬಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಮನುಷ್ಯನಲ್ಲಿ ಸಹಾಯದ ಗುಣ ಎಲ್ಲಿ ಹೋಗಿತು? ಆದರೆ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಕಾರ್ಯಕ್ರಮ ನಡೆಯುವುದರ ಜತೆಗೆ ಮನುಷ್ಯನಲ್ಲಿ ಇಗ್ಗಟ್ಟು, ಸಹಾಯ, ಮನುಷ್ಯತ್ವದಂತಹ ಗುಣಗಳು ಬರುತ್ತವೆ. ಯಜ್ಞ ಯಾಗಾದಿಗಳು ನಡೆಯುವುದರ ಮೂಲಕ ಸಮಾಜಕ್ಕೆ ಪರಿಸರಕ್ಕೆ ಓಳಿತಾಗುವುದು ಎಂದರು.

ಗ್ರಾಮ ದೇವತೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪ್ರಸಾದ ಸೇವೆಯಾಗಿ 2500 ಸುಳ್ಳಿ ಹೋಳಿಗೆ ಪ್ರಸಾದವನ್ನು ಗ್ರಾಮದ ಮುಖ್ಯಸ್ಥರು ನೆರವೇರಿಸಿದರು.

ರಡ್ಡರ ನಾಗನೂರ ಗ್ರಾಮದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹನಿಯರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಎಂ.ಎಚ್‌.ತಿಮ್ಮನಗೌಡ್ರ, ಎಫ್‌.ಎಚ್‌.ಕಗದಾಳ, ಗ್ರಾಪಂ ಅಧ್ಯಕ್ಷೆ ಪ್ರೇಮಾ ತಿಮ್ಮನಗೌಡ್ರ ಜಿ.ಎಚ್‌.ಕಗದಾಳ, ಶಂಕರಗೌಡ ಯಲ್ಲಪ್ಪಗೌಡ್ರ ಹಾಗೂ ಜಿ.ಎಪ್‌.ಕಗದಾಳ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ