ಆ್ಯಪ್ನಗರ

ಭದ್ರತಾ ಸಿಬ್ಬಂದಿಯಿಂದ ಪತ್ರ ಚಳವಳಿ

ಮುಂಡರಗಿ : ತಾಲೂಕಿನ ಕಂಪನಿಯೊಂದರ ಭದ್ರತಾ ಸಿಬ್ಬಂದಿಗಳನ್ನು ಕಂಪನಿ ಏಕಾಏಕಿ ತೆಗೆದುಹಾಕುವ ಕ್ರಮ ವಿರೋಧಿಸಿ ಉತ್ತರ ಕರ್ನಾಟಕ ಮಹಾಸಭಾ, ಹಾಗೂ ಸುಜಲಾನ್‌ ಕಂಪನಿ ಭದ್ರತಾ ಸಿಬ್ಬಂದಿ ಹೋರಾಟ ಸಮಿತಿ ಆಶ್ರಯದಲ್ಲಿ ಪತ್ರ ಚಳವಳಿ ಹಮ್ಮಿಕೊಂಡಿದ್ದರು.

Vijaya Karnataka 18 Jun 2019, 5:00 am
ಮುಂಡರಗಿ : ತಾಲೂಕಿನ ಕಂಪನಿಯೊಂದರ ಭದ್ರತಾ ಸಿಬ್ಬಂದಿಗಳನ್ನು ಕಂಪನಿ ಏಕಾಏಕಿ ತೆಗೆದುಹಾಕುವ ಕ್ರಮ ವಿರೋಧಿಸಿ ಉತ್ತರ ಕರ್ನಾಟಕ ಮಹಾಸಭಾ, ಹಾಗೂ ಸುಜಲಾನ್‌ ಕಂಪನಿ ಭದ್ರತಾ ಸಿಬ್ಬಂದಿ ಹೋರಾಟ ಸಮಿತಿ ಆಶ್ರಯದಲ್ಲಿ ಪತ್ರ ಚಳವಳಿ ಹಮ್ಮಿಕೊಂಡಿದ್ದರು.
Vijaya Karnataka Web GDG-17MDR1 SUJ PATRA
ಮುಂಡರಗಿ ತಾಲೂಕಿನ ಬಾಗೇವಾಡಿ ಬಳಿ ಖಾಸಗಿ ಕಂಪನಿಯೊಂದರ ಭದ್ರತಾ ಸಿಬ್ಬಂದಿ ಹೋರಾಟ ಸಮಿತಿ ಉಕ ಮಹಾಸಭಾ ಆಶ್ರಯದಲ್ಲಿ ಭದ್ರತಾ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕುವ ಕ್ರಮ ವಿರೋಧಿಸಿ ಪತ್ರ ಚಳವಳಿ ನಡೆಸಲಾಯಿತು.


13 ವರ್ಷಗಳಿಂದ ಸಿಬ್ಬಂದಿಗಳಿಂದ ದುಡಿಸಿಕೊಂಡು ದಿಢೀರ್‌ ಕೆಲಸದಿಂದ ತೆಗೆಯುವ ಹುನ್ನಾರ ನಡೆದಿದ್ದರೂ ಕೆಲಸದ ಸಂದರ್ಭದಲ್ಲಿ ಮೂಲ ಸಮಸ್ಯೆಗೆ ಸ್ಪಂದಿಸದೆ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ವಯಕ್ತಪಡಿಸಿದರು.

ರಾಜ್ಯ ಯುವ ಒಕ್ಕೂಟಗಳ ಸಂಘದ ಅಧ್ಯಕ್ಷ ಡಾ.ಎಸ್‌.ಬಾಲಾಜಿ ಮಾತನಾಡಿ, ನಾಡಿನ ನೆಲ, ಜಲ ಬಳಸಿಕೊಂಡು ಸ್ಥಳೀಯರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಲಾಗುವುದು ಎಂದು ಹೇಳಿ ಈಗ ಕೆಲಸದಿಂದ ತೆಗೆಯಲಾಗುತ್ತಿದ್ದು ಖಂಡನೀಯ ಎಂದರು.

ಉಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಈ ಭಾಗದ 130 ಭದ್ರತಾ ಸಿಬ್ಬಂದಿಗಳನ್ನು ಬೀದಿಗೆ ತಳ್ಳಲಾಗುತ್ತಿದೆ ಇದಕ್ಕೆ ಅವಕಾಶ ಕೊಡುವುದಿಲ್ಲ, ಸಿಬ್ಬಂದಿ ಕುಟುಂಬ ಬೀದಿಗೆ ಬರಲು ಕಾರಣವಾದ ಕಂಪನಿ ವಿರುದ್ಧ ಹೋರಾಟ ನಿರಂತರ ಇರುತ್ತದೆ ಎಂದರು.

ಹಾರೋಗೇರಿ, ಮುರಡಿ, ಚಿಕ್ಕವಡ್ಡಟ್ಟಿ, ತಾಂಡಾ, ಕೆಲೂರ, ಬಾಗೇವಾಡಿ ಸೇರಿದಂತೆ ಇತರ ಗ್ರಾಮಗಳ ಸಿಬ್ಬಂದಿ ಕುಟುಂಬದವರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಎಂ.ಯು.ಮಕಾನದಾರ, ಡಿ.ಎಂ.ತಾಮ್ರಗುಂಡಿ, ಲೋಕಪ್ಪ ನಂದಿಕೋಲ,ಬಸವರಾಜ ಕೊಪ್ಪಣ್ಣವರ, ಕಲ್ಲಯ್ಯ ಓದಿಸೋಮಠ, ವಸಂತ ಮಾಳಗಿಮನಿ,ಶಿವಪ್ಪ ಪವಾರ, ಸಿದ್ದೇಶ ತಳವಾರ,ಗುಡದಯ್ಯ ಯಳವತ್ತಿ, ಹನುಮಂತ ಹುಚ್ಚಣ್ಣವರ,ಪುಟ್ಟಣಗೌಡ ಪಾಟೀಲ, ಈಶ್ವರಪ್ಪ ರಂಗಾಪೂರ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ