ಆ್ಯಪ್ನಗರ

ಬದುವು ನಿರ್ಮಾಣ,ನೀರು ಇಂಗಿಸಲು ಆದ್ಯತೆ

ಸೊರಟೂರ : ಬರಗಾಲದಲ್ಲಿ ಉದ್ಯೋಗವಿಲ್ಲದೇ ಕೆಲಸ ಅರಸಿ ಪಟ್ಟಣ ಪ್ರದೇಶಗಳಿಗೆ ಗುಳೆ ಹೋಗುವುದು ತಪ್ಪಿಸುವ ಹಾಗೂ ಅಂತರ್ಜಲ ವೃದ್ಧಿ ಮತ್ತು ಭೂ ಸವಕಳಿ ತಪ್ಪಿಸಿ ಭೂಮಿಯ ಫಲವತ್ತತೆ ಕಾಪಾಡಲು ನರೇಗಾ ಯೋಜನೆಯಡಿ ಕೃಷಿ ಇಲಾಖೆ ಇಳಿಜಾರು ಬದುವು ಕಾರ್ಯ ಆರಂಭಿಸಿದೆ ಎಂದು ಗ್ರಾಪಂ ಅಧ್ಯಕ್ಷ ಸಿ.ಎಸ್‌.ಹಿರೇಮಠ ಹೇಳಿದರು.

Vijaya Karnataka 5 Jun 2019, 5:00 am
ಸೊರಟೂರ : ಬರಗಾಲದಲ್ಲಿ ಉದ್ಯೋಗವಿಲ್ಲದೇ ಕೆಲಸ ಅರಸಿ ಪಟ್ಟಣ ಪ್ರದೇಶಗಳಿಗೆ ಗುಳೆ ಹೋಗುವುದು ತಪ್ಪಿಸುವ ಹಾಗೂ ಅಂತರ್ಜಲ ವೃದ್ಧಿ ಮತ್ತು ಭೂ ಸವಕಳಿ ತಪ್ಪಿಸಿ ಭೂಮಿಯ ಫಲವತ್ತತೆ ಕಾಪಾಡಲು ನರೇಗಾ ಯೋಜನೆಯಡಿ ಕೃಷಿ ಇಲಾಖೆ ಇಳಿಜಾರು ಬದುವು ಕಾರ್ಯ ಆರಂಭಿಸಿದೆ ಎಂದು ಗ್ರಾಪಂ ಅಧ್ಯಕ್ಷ ಸಿ.ಎಸ್‌.ಹಿರೇಮಠ ಹೇಳಿದರು.
Vijaya Karnataka Web GDG-4MUL1
ಸೊರಟೂರದಲ್ಲಿ ನರೇಗಾ ಯೋಜನೆಯಡಿ ಕೃಷಿ ಇಲಾಖೆಯಿಂದ ಕೈಗೆತ್ತಿಕೊಂಡ ಬದುವು ನಿರ್ಮಾಣ ಕಾರ್ಯ ನಡೆಯಿತು.


ಈ ಕಾರ್ಯಕ್ಕೆ ಉಪಗ್ರಹ ಆಧಾರಿತ ಸಮೀಕ್ಷೆ ಮಾಡಿ ಸೊರಟೂರದಲ್ಲಿ ಜಲಾನಯನ ಪ್ರದೇಶ ಗುರುತಿಸಿ ರೈತರ ಜಮಿನಿನಲ್ಲಿ ಬದುವು ನಿಮಾರ್ಣ ಕಾರ್ಯ ಆರಂಭಿಸಲಾಗಿದೆ. ಸೊರಟೂರ ಗ್ರಾಮದಲ್ಲಿ ಸುಮಾರು 100 ಕುಲಿ ಕಾರ್ಮಿಕರು ಬದುವು ನಿರ್ಮಾಣ ಕಾರ್ಯದಲ್ಲಿ ತೋಡಗಿದ್ದಾರೆ ಎಂದರು.

ಗ್ರಾಪಂ ಉಪಾಧ್ಯಕ್ಷ ಶಾರದಾ ಜಂಗವಾಡ ಮಾತನಾಡಿ,ಮಳೆಗಾಲದಲ್ಲಿ ಮೇಲ್ಭಾಗದಿಂದ ಹರಿದು ಹೋಗುವ ನೀರು ಭೂಮಿಯ ಮೇಲ್ಪದರು ಕೊಚ್ಚಿ ಮಣ್ಣಿನ ಸವಕಳಿ ಜತೆಗೆ ಫಲವತ್ತತೆಯನ್ನು ಕುಂಠಿತಗೋಳಿಸುತ್ತದೆ. ಇದನ್ನು ತಡೆಯುವ ಉದ್ದೇಶದಿಂದ ಭೂಮಿಯ ಇಳಿಜಾರುಗಳಲ್ಲಿ ಅಲ್ಲಲ್ಲಿ ಅಡ್ಡಲಾಗಿ ಬದುವು ಹಾಗೂ ಗುಂಡಿಗಳನ್ನು ನಿರ್ಮಾಣ ಮಾಡಿ ನೀರು ಇಂಗಿಸುವಿಕೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಭದ್ರೇಶ ಕುಸ್ಲಾಪೂರ ಮಾತನಾಡಿ, ಕಳೆದ 2-3 ವರ್ಷಗಳಿಂದ ಬರಗಾಲದಿಂದ ಆರ್ಥಿಕ ಮುಗ್ಗಟ್ಟನ್ನು ರೈತರು ಎದುರಿಸುತ್ತಿದ್ದು ರೈತರು ಬದುವು ನಿರ್ಮಾಣ ಮಾಡಿಕೊಳ್ಳಲು ಅಸಮರ್ಥರಾಗಿದ್ದ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಬದುವು ನಿರ್ಮಾಣ ಮಾಡುತ್ತಿದ್ದು ಅತ್ಯಂತ ಉಪಯುಕ್ತವಾಗಿದೆ ಎಂದರು.

ಗ್ರಾಪಂ ಅಧ್ಯಕ್ಷ ಸಿ.ಎಸ್‌.ಹಿರೇಮಠ, ಗ್ರಾಪಂ ಉಪಾಧ್ಯಕ್ಷ ಶಾರದಾ ಜಂಗವಾಡ, ಗ್ರಾಪಂ ಸದಸ್ಯರಾದ ಜನ್ನತಬಿ ಅಬ್ಬಿಗೇರಿ, ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ ಅಳವಂಡಿ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ