ಆ್ಯಪ್ನಗರ

ಸಂಕಲ್ಪ, ಸಾಹಸ, ಸೇವೆ ಇದ್ದರೆ ಬದುಕು ಸುಂದರ

ಮುಂಡರಗಿ : ಸಂಕಲ್ಪ, ಸಾಹಸ, ಸೇವೆ ಇದ್ದರೆ ಮಾತ್ರ ಒಂದು ಸುಂದರ ಬದುಕು ನಿರ್ಮಾಣವಾಗುತ್ತದೆ. ಮನುಷ್ಯನಿಗೆ ಮೊದಲು ಸಂಕಲ್ಪ ಬೇಕು. ಆ ಸಂಕಲ್ಪ ಮಾಡಿದ್ದನ್ನು ಸಿದ್ದಿಸಲು ಶ್ರಮ, ಸಾಹಸ ಬೇಕು,ಹೀಗಿದ್ದಾಗ ಮಾತ್ರ ಮನುಷ್ಯನಿಗೆ ನಿಜವಾದ ಬೆಲೆ ಬರುತ್ತದೆ ಎಂದು ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

Vijaya Karnataka 21 Feb 2019, 5:00 am
ಮುಂಡರಗಿ : ಸಂಕಲ್ಪ, ಸಾಹಸ, ಸೇವೆ ಇದ್ದರೆ ಮಾತ್ರ ಒಂದು ಸುಂದರ ಬದುಕು ನಿರ್ಮಾಣವಾಗುತ್ತದೆ. ಮನುಷ್ಯನಿಗೆ ಮೊದಲು ಸಂಕಲ್ಪ ಬೇಕು. ಆ ಸಂಕಲ್ಪ ಮಾಡಿದ್ದನ್ನು ಸಿದ್ದಿಸಲು ಶ್ರಮ, ಸಾಹಸ ಬೇಕು,ಹೀಗಿದ್ದಾಗ ಮಾತ್ರ ಮನುಷ್ಯನಿಗೆ ನಿಜವಾದ ಬೆಲೆ ಬರುತ್ತದೆ ಎಂದು ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
Vijaya Karnataka Web GDG-20MDR1 KOPP SREE
ಮುಂಡರಗಿ ಜ.ಅನ್ನದಾನೀಶ್ವರ ಮಠದ 149 ನೇ ಯಾತ್ರಾ ಮಹೋತ್ಸವದ ಅಂಗವಾಗಿ ನಡೆದ ಭಕ್ತ ಹಿತ ಚಿಂತನಗೋಷ್ಠಿಯಲ್ಲಿ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಮಾತನಾಡಿದರು.


ಇಲ್ಲಿಯ ಅನ್ನದಾನೀಶ್ವರ ಮಠದಲ್ಲಿ ನಡೆದ ಜಗದ್ಗುರು ಅನ್ನದಾನೇಶ್ವರ 149ನೇ ಯಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ಭಕ್ತ ಹಿತ ಚಿಂತನಗೋಷ್ಠಿಯ ಸಾನ್ನಿಧ್ಯವಹಿಸಿ ಮಾತನಾಡಿದರು.

ಆಳುವ ವ್ಯಕ್ತಿಗಳಿಗೆ ಕಾಲು ಒರೆಸುವುದು ಸೇವೆಯಲ್ಲ, ಅಳುವ ವ್ಯಕ್ತಿಗಳ ಕಣ್ಣೀರಿಗೆ ಸ್ಪಂದಿಸಬೇಕು. ದೇವರು ನನಗೆ ಕೊಟ್ಟಿರುವುದನ್ನು ಜಗತ್ತಿಗೆ ಹಂಚಬೇಕು. ನೀ ಏನನ್ನು ಕೊಡುತ್ತೀಯೋ ಅದನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ದೇವರು ನಮಗೆ ಕೊಟ್ಟಿದ್ದನ್ನು ಇನ್ನೊಬ್ಬರಿಗೆ ಕೊಡುವುದೇ ನಿಜವಾದ ಸೇವೆ ಎಂದರು.

ಜಗತ್ತಿನಲ್ಲಿ ಸತ್ಯ ಎನ್ನುವುದು ಯಾವುದು ಇಲ್ಲ, ಒಂದು ವೇಳೆ ಸತ್ಯ ಎನ್ನುವುದು ಯಾವುದಾದರೂ ಇದ್ದರೆ ಅದು ಬದಲಾವಣೆ ಮಾತ್ರ. ಇದು ಜಗದ ನಿಯಮವಾಗಿದೆ. ಜಗತ್ತು ಎಂದರೆ ಇದ್ದದ್ದು ಇದ್ದ ಹಾಗೆ ಇರದಿರುವುದೇ ಜಗತ್ತು. ಇದು ಸದಾ ಬದಲಾವಣೆಯಾಗುತ್ತದೆ. ಬದಲಾವಣೆ ಪ್ರಕೃತಿಗೆ ಯಾವುದು ಒಳಗಾಗುತ್ತದೆಯೋ ಅದಕ್ಕೆ ಜಗತ್ತು ಎಂದು ಕರೆಯುತ್ತಾರೆ.

ಜಗತ್ತಿನಲ್ಲಿ ಇರುವುದೆಲ್ಲವೂ ಆವರ್ತನ ಶೀಲ. ಬೌದ್ಧರು ಇದನ್ನು ಜೀವನಚಕ್ರ ಎಂದು ಕರೆದಿದ್ದಾರೆ. ಈ ಜಗತ್ತು ಬದಲಾವಣೆಯ ನಿಯಮಕ್ಕೆ ಒಳಪಟ್ಟಿದೆ. ಇಲ್ಲಿ ಯಾವುದೂ ಸತ್ಯ ಎನ್ನುವುದಿಲ್ಲ. ಈ ಜಗದ ರೀತಿ ಅರಿತು ಬದುಕಿದವರು ಚನ್ನಾಗಿ ಬದುಕುತ್ತಾರೆ ಎಂದರು.

ಮುಂಡರಗಿ ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯವಹಿಸಿ,ಭಕ್ತ ಹಿತಚಿಂತನಾ ಗೋಷ್ಠಿಯಲ್ಲಿ ಕೊಪ್ಪಳ ಶ್ರೀಗಳು ಭಕ್ತರಿಗೆ ಒಳ್ಳೆಯ ಚಿಂತನೆ ನೀಡಿದ್ದಾರೆ. ಇಂದು ಸೇವೆ ಮಾಡುವ ಜನತೆ ಕಡಿಮೆಯಾಗಿದ್ದಾರೆ. ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಶಿವಶಕ್ತಿ ಗೀತಾಂಜಲಿ ಗ್ರಂಥ ಹಾಗೂ ದಿನಚರಿ 2019 ಬಿಡುಗಡೆಗೊಳಿಸಲಾಯಿತು. ಬಳಗಾನೂರಿನ ಚಿಕೇನಕೊಪ್ಪ ಮಠದ ಶಿವಶಾಂತವೀರ ಶರಣರು, ಹುಬ್ಬಳ್ಳಿ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಕರಬಸಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ, ಕೊಪ್ಪಳ ಮಾಜಿ ಜಿಪಂ ಅಧ್ಯಕ್ಷ ಪಿ.ಜನಾರ್ಧನ್‌, ಯಾತ್ರಾ ಕಮೀಟಿ ಅಧ್ಯಕ್ಷ ಕುಮಾರ ಬನ್ನಿಕೊಪ್ಪ, ಅಂದಪ್ಪ ಕುರುಡಗಿ, ಅನುಪಕುಮಾರ ಹಂಚಿನಾಳ, ಮಂಜುನಾಥ ಶಿವಶೆಟ್ಟರ, ಅಜ್ಜಪ್ಪ ಲಿಂಬಿಕಾಯಿ, ವೀರೇಶ ಸಜ್ಜನರ, ರವೀಂದ್ರಗೌಡ ಪಾಟೀಲ, ಬಸವರಾಜ ಬಿಸನಳ್ಳಿ, ಪ್ರದೀಪಗೌಡ ಗುಡದಪ್ಪನವರ, ರವಿ ಕುಂಬಾರ, ವಿಶ್ವನಾಥ ಗಡ್ಡದ, ದೇವು ಹಡಪದ, ನಾಗರಾಜ ಗುಡಿಮನಿ, ಮುತ್ತು ಅಳವಂಡಿ, ಮಂಜುನಾಥ ಇಟಗಿ, ವಿ.ಸಿ.ಹಂಚಿನಾಳ, ಶಂಕ್ರಪ್ಪ ಬಾರಿಕಾಯಿ, ಆರ್‌.ಆರ್‌.ಹೆಗ್ಗಡಾಳ ಇತರರು ಉಪಸ್ಥಿತರಿದ್ದರು. ಎಸ್‌.ಎಸ್‌.ಇನಾಮತಿ,ಎಸ್‌.ಆರ್‌.ರಿತ್ತಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ