ಆ್ಯಪ್ನಗರ

ಮಣ್ಣಿನ ಗಡಿಗೆಗೂ ಬಂತೂ ಜೀವ ಕಳೆ

ಗಜೇಂದ್ರಗಡ : ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮದಲ್ಲಿ ಶಿವರಾತ್ರಿ ಮುಗಿದಿದೆ. ಶಿವ ಶಿವಾ ಎನಿಸುವಷ್ಟು ಬಿಸಿಲು ಅಟ್ಟಹಾಸ ಮೆರೆಯಲಾರಂಭಿಸಿದೆ. ಬಿಸಿಲ ತಾಪದಿಂದ ಬಸವಳಿಯುತ್ತಿರುವ ಜನರು ತಣ್ಣನೆಯ ನೀರು ಕುಡಿಯಲು ಗಡಿಗೆಗೆ ಮೊರೆ ಹೋಗಿದ್ದಾರೆ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಪ್ರಖರವಾಗುತ್ತಿದ್ದ ಬಿಸಿಲು ಮಾರ್ಚ್‌ನಲ್ಲಿ ಹೆಚ್ಚಿದೆ. ಬಿಸಿಲಿನ ಝಳದಿಂದ ರಕ್ಷ ಣೆ ಪಡೆ ಯಲು ಜನ ಕೂಲಿಂಗ್‌ ಕನ್ನಡಕ, ಟೊಪ್ಪಿಗಳ ಮೊರೆ ಹೊಗಿದ್ದಾರೆ. ಮನೆಯಲ್ಲಿ ಫ್ರೀಜ್‌ ಇದೆ. ಅದರಲ್ಲಿ ತಣ್ಣಗಾದ ನೀರು ಕುಡಿದರೆ ಆ ಕ್ಷ ಣಕ್ಕೆ ಹಾಯ್‌ ಎನಿಸಬಹುದು.

Vijaya Karnataka 6 Mar 2019, 5:00 am
ಗಜೇಂದ್ರಗಡ : ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮದಲ್ಲಿ ಶಿವರಾತ್ರಿ ಮುಗಿದಿದೆ. ಶಿವ ಶಿವಾ ಎನಿಸುವಷ್ಟು ಬಿಸಿಲು ಅಟ್ಟಹಾಸ ಮೆರೆಯಲಾರಂಭಿಸಿದೆ. ಬಿಸಿಲ ತಾಪದಿಂದ ಬಸವಳಿಯುತ್ತಿರುವ ಜನರು ತಣ್ಣನೆಯ ನೀರು ಕುಡಿಯಲು ಗಡಿಗೆಗೆ ಮೊರೆ ಹೋಗಿದ್ದಾರೆ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಪ್ರಖರವಾಗುತ್ತಿದ್ದ ಬಿಸಿಲು ಮಾರ್ಚ್‌ನಲ್ಲಿ ಹೆಚ್ಚಿದೆ. ಬಿಸಿಲಿನ ಝಳದಿಂದ ರಕ್ಷ ಣೆ ಪಡೆ ಯಲು ಜನ ಕೂಲಿಂಗ್‌ ಕನ್ನಡಕ, ಟೊಪ್ಪಿಗಳ ಮೊರೆ ಹೊಗಿದ್ದಾರೆ. ಮನೆಯಲ್ಲಿ ಫ್ರೀಜ್‌ ಇದೆ. ಅದರಲ್ಲಿ ತಣ್ಣಗಾದ ನೀರು ಕುಡಿದರೆ ಆ ಕ್ಷ ಣಕ್ಕೆ ಹಾಯ್‌ ಎನಿಸಬಹುದು.
Vijaya Karnataka Web GDG-5GJD1
ಗಜೇಂದ್ರಗಡದ ಸಂತೆಯಲ್ಲಿ ಬಡವರ ಗಡಿಗೆ ಮಾರಾಟ ಭರದಿಂದ ನಡೆಯಿತು.


ಗಡಿಗೆ ಖರೀದಿಸಲು ಉತ್ಸುಕ :

ಬಿಸಿಲಿನ ವಿಪರೀತ ತಾಪಕ್ಕೆ ಬಸವಳಿದ ಜನ ಬಾಯಾರಿಕೆ ನೀಗಿಸುವ ಸಾಧನಗಳಲ್ಲಿ ಅತ್ಯಂತ ಮಹತ್ವದ್ದು ಎನಿಸಿರುವ ಪ್ರಾಕೃತಿಕವಾಗಿ ನೀರನ್ನು ತಂಪಾಗಿಸುವ ಗಡಿಗೆ ಖರೀದಿಸಲು ಜನ ಉತ್ಸುಕರಾಗಿದ್ದಾರೆ. ಗಡಿಗೆ ಉಪಯೋಗಿಸಲು ಚೌಕಾಸಿ ಮಾಡಿ ನಿಗದಿಪಡಿಸಿದ ದರಕ್ಕೆ ಖರೀದಿಸುತ್ತಿದ್ದಾರೆ. ಗಡಿಗೆ ಕಡು ಬಡವರು ಮಾತ್ರ ಬಳಕೆ ಮಾಡುತ್ತಿದ್ದರು. ಉಳ್ಳವರ ಪ್ರಿಜ್‌ನಲ್ಲಿ ನೀರನ್ನಿಟ್ಟು ಬೆಸಿಗೆ ದಾಹ ತೀರಿಸಿಕೊಳ್ಳುತ್ತಿದ್ದಾರೆ. ವಿದ್ಯುತ್‌ ಕೈಕೊಟ್ಟಾಗ ಎಲ್ಲರೂ ಗಡಿಗೆಗಳಿಗೆ ಮಾರು ಹೋಗುತ್ತಿದ್ದಾರೆ.

ಕುಂಬಾರರಿಗೆ ಬೇಸಿಗೆ ನೆರವು :

ಮೊದಲು ಪಾತ್ರೆಗಳ ಇಲ್ಲದ ವೇಳೆಯಲ್ಲಿ ಗಡಿಗೆಯಲ್ಲಿ ಆಹಾರ ಬೇಯಿಸುತ್ತಿದ್ದರು. ಆದರೆ ವಿಕಸನ ಎನ್ನುವ ತಾಂತ್ರಿಕತೆ ಸೌಕರ‍್ಯಗಳ ಉಪಯೋಗದ ಬದಲಾವಣೆಯಿಂದ ಗುಡಿಕೈಗಾರಿಕೆ ಗಡಿಗೆಗಳ ಉತ್ಪಾದನೆ ಕ್ಷೀಣಿಸಿತ್ತು. ಇದರಿಂದ ಸಹಸ್ರಾರು ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಿದ್ದ ಕುಂಬಾರರ ಬದುಕು ಬೀದಿಗೆ ಬಿದ್ದು ನರಳುವಂತಾಗಿತ್ತು.

ಬಿಸಿಲು ಇನ್ನೂ ಅಟ್ಟಹಾಸ ಮೆರೆಯಲಾರಂಭಿಸಿದೆ. ಬರುವ ದಿನ ನೆನೆದು ಜನ ಬೆಚ್ಚಿ ಬೀಳುವಂತಾಗಿದೆ. ತಂಪುಪಾನೀಯ ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಎಳನೀರು ಕಬ್ಬಿನ ಹಾಲುಗಳಿಗೆ ದುಬಾರಿ ಬೆಲೆ ಕೊಟ್ಟು ಬಾಯಾರಿಕೆ ನೀಗಿಸಿ ಕೊಳ್ಳು ತ್ತಿದ್ದಾರೆ.

ಆಧುನಿಕತೆ ಸೌಕರ‍್ಯ ಕ್ರಾಂತಿಯ ಇಂದಿನ ಯುಗದಲ್ಲೂ ಮಣ್ಣಿನಿಂದ ಸುಟ್ಟು ಬೆವರು ಸುರಿಸಿ ತಯಾರಿಸ್ಪಟ್ಟಿರುವ ಗುಡಿ ಕೈಗಾರಿಕೆಯ ಮಡಿಕೆಗಳು ಇನ್ನಿಲ್ಲದ ಮಹತ್ವದವನ್ನು ಇನ್ನೂ ಉಳಿಸಿಕೊಂಡಿವೆ.

ಪಟ್ಟಣದ ಸಂತೆಗೆ ಬಂದಿರುವ ಸುತ್ತಲಿನ ಗ್ರಾಮಗಳ ಜನತೆ ಬಿಸಿಲಿನ ಪ್ರಖರತೆ ತಡೆಯಲು ನೆರಳಿನ ಮರದ ಆಶ್ರಯ ಪಡೆಯುತ್ತಿದ್ದಾರೆ. ಬಡ ನಿವಾಸಿಗಳು ಗೂಡು ಸೇರಿದ್ದ ಬೀಸಣಿಕೆಗಳನ್ನು ಹೊರತೆಗೆದು ಉಪಯೋಗಿಸುತ್ತಿದ್ದಾರೆ. ಕೆಲವರು ಫ್ಯಾನ್‌ ಗಾಳಿಯಿಂದ ನೆಮ್ಮದಿ ಕಂಡುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ