ಆ್ಯಪ್ನಗರ

ತ್ಯಾಗ ಸೇವೆಯಿಂದ ಜೀವನ ಸಾರ್ಥಕತೆ

ಮುಂಡರಗಿ :ಪ್ರತಿ ಮನುಷ್ಯ ಜೀವನ ಸಾರ್ಥಕತೆ ಪಡೆಯಬೇಕಾದರೆ ತ್ಯಾಗ ಮತ್ತು ಸೇವೆ ಮೂಲಕ ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ ಹೇಳಿದರು.

Vijaya Karnataka 14 Sep 2020, 5:00 am
ಮುಂಡರಗಿ :ಪ್ರತಿ ಮನುಷ್ಯ ಜೀವನ ಸಾರ್ಥಕತೆ ಪಡೆಯಬೇಕಾದರೆ ತ್ಯಾಗ ಮತ್ತು ಸೇವೆ ಮೂಲಕ ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ ಹೇಳಿದರು.
Vijaya Karnataka Web 13MDR3 SEVA MI_25
ಮುಂಡರಗಿಯಲ್ಲಿಸೇವಾಭಾರತಿ ಕರ್ನಾಟಕ ಸಂಸ್ಥೆಯಿಂದ ಪೌರಕಾರ್ಮಿಕರು, ಕ್ಷೌರಿಕರಿಗೆ ಕಷಾಯ ಪುಡಿ ವಿತರಿಸಲಾಯಿತು.


ಇಲ್ಲಿಯ ಪುರಸಭೆ ಪೌರಕಾರ್ಮಿಕರಿಗೆ ಹಾಗೂ ಕ್ಷೌರಿಕರಿಗೆ ಸೇವಾ ಭಾರತಿ ಕರ್ನಾಟಕ ಸಂಸ್ಥೆಯಿಂದ ಹಮ್ಮಿಕೊಂಡ ಕಷಾಯಿ ಪುಡಿ ವಿತರಣೆಯಲ್ಲಿಪಾಲ್ಗೊಂಡು ಮಾತನಾಡಿದರು.

ಕೋವಿಡ್‌ -19 ಮಹಾಮಾರಿ ನಿಯಂತ್ರಣಕ್ಕೆ ವ್ಯಾಧಿ ಕ್ಷಮತ್ವವನ್ನು ರೋಗನಿರೋಧಕ ಶಕ್ತಿ ಹೆಚ್ಚಿಸಲು ಪ್ರಾಚೀನ ಆಯುರ್ವೇದ ವನಸ್ಪತಿಗಳ ಮೂಲಕ ತಯಾರಿಸಿದ ಈ ಕಷಾಯ ಪುಡಿ ಸಹಾಯವಾಗಲಿದೆ ಎಂದರು.

ಪುರಸಭೆ ಸದಸ್ಯ ನಾಗೇಶ ಹುಬ್ಬಳ್ಳಿ,ಪವನ ಮೇಟಿ ಮಾತನಾಡಿ, ಸೇವಾಭಾರತಿ ಸಂಸ್ಥೆ ಕೊರೊನಾ ಸಂಕಷ್ಟ ಸಮಯದಲ್ಲಿಅನೇಕ ಕಿಟ್‌, ಆಹಾರ ದಿನಸಿ,ಮಾಸ್ಕ್‌ ,ಸ್ಯಾನಿಟೈಜರ್‌ ಉಚಿತವಾಗಿ ನೀಡಿದೆ ಎಂದರು.

ಶ್ರೀನಿವಾಸ ಕಟ್ಟಿಮನಿ, ಯಲ್ಲಪ್ಪ ಅರ್ಕಸಾಲಿ, ಚಂದ್ರಶೇಖರ ಹಿರೇಮಠ, ಅನಂತ ಚಿತ್ರಗಾರ, ಮಂಜುನಾಥ ಮುಧೋಳ, ಸುರೇಶ ರಾಮೇನಹಳ್ಳಿ, ಯಲ್ಲಪ್ಪ ಕರಡಿ, ನಾಗರಾಜ ಪತ್ತಾರ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ