ಆ್ಯಪ್ನಗರ

ಜೈನ ಕವಿಗಳಿಂದ ಸಾಹಿತ್ಯ ಸಮೃದ್ಧಿ

ನರಗುಂದ: ಸಂಪತ್ತು ಅಧಿಕಾರ ಶಾಶ್ವತವಲ್ಲ, ಅವು ಮುಂಜಾನೆಯ ಮಂಜಿನಂತೆ. ಆದರೆ ಕನ್ನಡ ಸಾಹಿತ್ಯ ಈ ಜಗತ್ತಿನ ಇತಿಹಾಸದಲ್ಲಿಕನ್ನಡ ಸಾಹಿತ್ಯ ಅಜರಾಮರ ಎಂದು ಕನ್ನಡ ಸಾಹಿತ್ಯ ಅಕಾಡಮಿ ಸದಸ್ಯ ಡಾ.ಜೀನದತ್ತ ಹಡಗಲಿ ಹೇಳಿದರು.

Vijaya Karnataka 15 Nov 2019, 5:00 am
ನರಗುಂದ: ಸಂಪತ್ತು ಅಧಿಕಾರ ಶಾಶ್ವತವಲ್ಲ, ಅವು ಮುಂಜಾನೆಯ ಮಂಜಿನಂತೆ. ಆದರೆ ಕನ್ನಡ ಸಾಹಿತ್ಯ ಈ ಜಗತ್ತಿನ ಇತಿಹಾಸದಲ್ಲಿಕನ್ನಡ ಸಾಹಿತ್ಯ ಅಜರಾಮರ ಎಂದು ಕನ್ನಡ ಸಾಹಿತ್ಯ ಅಕಾಡಮಿ ಸದಸ್ಯ ಡಾ.ಜೀನದತ್ತ ಹಡಗಲಿ ಹೇಳಿದರು.
Vijaya Karnataka Web literary prosperity by jain poets
ಜೈನ ಕವಿಗಳಿಂದ ಸಾಹಿತ್ಯ ಸಮೃದ್ಧಿ


ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಭೈರನಹಟ್ಟಿ ಆಶ್ರಯದಲ್ಲಿಇಲ್ಲಿನ ಶ್ರೀ ಯಡೆಯೂರು ಸಿದ್ಧಲಿಂಗೇಶ್ವರ ಪದವಿ ಪೂರ್ವ ಮಹಾವಿದ್ಯಾಲದಲ್ಲಿಹಮ್ಮಿಕೊಂಡ ಕನ್ನಡೋತ್ಸವ-2019 ಕನ್ನಡ ಜಾಗೃತಿ ಉಪನ್ಯಾಸ ಸರಣಿ-1 ಉದ್ಘಾಟಿಸಿ ಮಾತನಾಡಿದರು.

ಛಂದಸ್ಸಿನ ನಿಯಮ ಆಧರಿಸಿ ವ್ಯಾಕರಣಬದ್ಧವಾಗಿ ಕೃತಿ ರಚಿಸಿದ ಮೊದಲಿಗ ಆದಿ ಕವಿ ಪಂಪ. ಕನ್ನಡದ ಸಮಸ್ತ ಸಾಹಿತ್ಯವನ್ನು ಮೆಟ್ಟಿ ನಿಲ್ಲುವ ಶಕ್ತಿ ಪಂಪನ ಆದಿಪುರಾಣಕ್ಕಿದೆ ಎಂದರು.

ಶಬ್ದಮಣಿ ದರ್ಪಣ ಇಡಿ ಕನ್ನಡ ಸಾಹಿತ್ಯಕ್ಕೆ ವ್ಯಾಕರಣ ಹೇಳಿ ಕೊಟ್ಟಂತಹ ಕೃತಿಯಾಗಿದೆ. ಅಲ್ಲದೆ ಮಾನವೀಯ ಮೌಲ್ಯ ಬಿತ್ತುವಂತಹ ಕಾವ್ಯ ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಜೈನ ಸಾಹಿತಿಗಳು ಎಂದರು.

ದೊರೆಸ್ವಾಮಿಮಠದ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಆದಿ ಕವಿ ಪಂಪನ ವಾಣಿಯಾದ ಮಾನವಕುಲಂ ತಾನೊಂದೆ ವಲಂ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಉದ್ಘೋಷವನ್ನಾಗಿ ಇಟ್ಟುಕೊಂಡಿದೆ. ಪಂಪನ ಕಾವ್ಯಶಕ್ತಿಯನ್ನು ತೋರಿಸುತ್ತದೆ. 9 ರಿಂದ 10 ನೇ ಶತಮಾನದ ಕಾಲವು ಜೈನ ಸಾಹಿತ್ಯದ ಸುವರ್ಣಯುಗವಾಗಿತ್ತು. ಅಂದಿನ ಅರಸರು ಜೈನ ಕವಿಗಳಿಗೆ ರಾಜಾಶ್ರಯ ನೀಡಿ ಸಾಹಿತ್ಯಿಕ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದರಿಂದ ಜೈನ ಸಾಹಿತ್ಯ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಉಚ್ಛ್ರಾಯಸ್ಥಿಯಲ್ಲಿತ್ತು ಎಂದರು.

ಆಡು ಭಾಷೆಯಾಗಿದ್ದ ಕನ್ನಡವನ್ನು ಸಾಹಿತ್ಯಿಕ ಭಾಷೆಯನ್ನಾಗಿ ರೂಪಿಸಿದ ಹೆಗ್ಗಳಿಕೆ ಜೈನರದು. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನವು ಕನ್ನಡಿಗರ ಮನಸ್ಥಿತಿ ಹೇಳುವುದರ ಜತೆಗ ಅದು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದೆ ಎಂದರು.

ಧಾರವಾಡ ಡಯಟ್‌ ನಿವೃತ್ತ ಅಧಿಕಾರಿ ಮಂಗಳಾ ಪಾಟೀಲ, ಅಜ್ಜುಗೌಡ ಪಾಟೀಲ ಮಾತನಾಡಿದರು. ವೇದಿಕೆ ಮೇಲೆ ಸಂಸ್ಥೆ ಕಾರ್ಯದರ್ಶಿ ಮಹೇಶಗೌಡ ಪಾಟೀಲ, ಪ್ರಾ. ಎಂ.ಜಿ.ಬೋಗಾರ, ಪ್ರವೀಣ ಕಗದಾಳ ಉಪಸ್ಥಿತರಿದ್ದರು. ಪ್ರೊ.ಆರ್‌.ಕೆ.ಐನಾಪೂರ ನಿರೂಪಿಸಿದರು, ಪ್ರೊ.ಬಾರಕೇರ ಸ್ವಾಗತಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ