ಆ್ಯಪ್ನಗರ

ಅಧ್ಯಾತ್ಮದಿಂದ ಬದುಕು ಕಟ್ಟಿಕೊಳ್ಳಿ

ಕೊಣ್ಣೂರ: ಇಂದಿನ ಯಾಂತ್ರಿಕ ಮತ್ತು ತಾಂತ್ರಿಕ ಜೀವನಶೈಲಿಯಿಂದ ಯುವ ಜನತೆ ದಾರಿ ತಪ್ಪುತ್ತಿದ್ದಾರೆ ಸಂಸ್ಕೃತಿ ಸಂಸ್ಕಾರ ಮಾಯವಾಗಿ ಯಾರಿಗೂ ಗೌರವ ನೀಡದೆ ಕ್ಷಣಿಕ ಸುಖದತ್ತ ಸಾಗುತ್ತಿದ್ದಾರೆ ಎಂದು ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.

Vijaya Karnataka 20 Nov 2019, 5:00 am
ಕೊಣ್ಣೂರ: ಇಂದಿನ ಯಾಂತ್ರಿಕ ಮತ್ತು ತಾಂತ್ರಿಕ ಜೀವನಶೈಲಿಯಿಂದ ಯುವ ಜನತೆ ದಾರಿ ತಪ್ಪುತ್ತಿದ್ದಾರೆ ಸಂಸ್ಕೃತಿ ಸಂಸ್ಕಾರ ಮಾಯವಾಗಿ ಯಾರಿಗೂ ಗೌರವ ನೀಡದೆ ಕ್ಷಣಿಕ ಸುಖದತ್ತ ಸಾಗುತ್ತಿದ್ದಾರೆ ಎಂದು ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.
Vijaya Karnataka Web live by the spirit
ಅಧ್ಯಾತ್ಮದಿಂದ ಬದುಕು ಕಟ್ಟಿಕೊಳ್ಳಿ


ಅವರು ಇಲ್ಲಿನ ಸ್ಥಳೀಯ ಹಿರೇಮಠದ ಮುರುNೕಂದ್ರ ಶಿವಾಚಾರ್ಯ ಸ್ವಾಮಿಗಳ 35ನೇ ಪುಣ್ಯ ಸ್ಮರಣೋತ್ಸವ ಮತ್ತು ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ ದ್ವಿತೀಯ ವರ್ಷದ ಪಟ್ಟಾಧಿಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಧರ್ಮ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು. ಈ ನಾಡಿನಲ್ಲಿಜ್ಞಾನದ ಪ್ರವಾಹ ಹರಿಸಿದ ಬಸವಣ್ಣನ ಹಾಗೂ ಬ್ರಹ್ಮಾನಂದರಂತಹ ಸಾಧು-ಸಂತರು, ಋುಷಿಮುನಿಗಳು, ಆದ್ಯಾತ್ಮ ಚಿಂತನೆಯ ಬೀಜ ಬಿತ್ತಿ ಬೆಳೆಸಿ ಹೋಗಿದ್ದಾರೆ. ಚಿಂತನೆಯ ಬೇರುಗಳಲ್ಲಿಬದುಕು ಕಟ್ಟಿಕೊಂಡರೆ ನಮ್ಮ ಜೀವನ ಸಾರ್ಥಕ. ಜಗತ್ತು ಸಾಮಾನ್ಯವಲ್ಲ, ನಾಲ್ಕುದಿನ ಬಾಳಿ ಬದುಕಿ ಎಲ್ಲವನ್ನು ಇಲ್ಲಿಯೇ ಬಿಟ್ಟು ಮರಳಿ ಮಣ್ಣು ಸೇರುವ ಈ ದೇಹಕ್ಕೆ ದುರಾಸೆ ಅಂಟಿಕೊಂಡಿದೆ ಎಂದರು.

ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಇಂದಿನ ಮಕ್ಕಳಿಗೆ ಹುಟ್ಟಿನಿಂದಲೇ ನಮ್ಮ ಸಂಸ್ಕೃತಿ ಸಂಪ್ರದಾಯ ಆಚಾರ-ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಈ ಜಗತ್ತನ್ನು ಸ್ವರ್ಗವನ್ನಾಗಿ ಮಡುವ ಸಾಮರ್ಥ್ಯ ಧರ್ಮಕ್ಕಿದೆ. ಎಷ್ಟೆಲ್ಲಆಸ್ತಿ-ಅಂತಸ್ತು ಗಳಿಸಿದರೂ ಮನಸ್ಸು, ಆತ್ಮ ಮಾತ್ರ ನೆಮ್ಮದಿಯಿಂದಿರುವುದಿಲ್ಲ. ಕಾರಣ ಯಾರಲ್ಲಿನಿಜವಾದ ನೆಮ್ಮದಿ, ಶಾಂತಿಗಳಿರುತ್ತವೆಯೋ ಅವರೇ ನೀಜವಾದ ದೇವಮಾನವ ಎಂದರು.

ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು,ಮಹಾಂತ ದೇವರು,ರುದ್ರಮುನಿ ದೇವರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ