ಆ್ಯಪ್ನಗರ

ಮುದ್ರಾ ಯೋಜನೆಯಡಿ ನೇಕಾರರಿಗೆ ಸಾಲ ಮಂಜೂರ

ಗದಗ : ಮುದ್ರಾ ಯೋಜನೆಯಡಿ ಕೈಮಗ್ಗ ನೇಕಾರರಿಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಬೆಟಗೇರಿ ಶಾಖೆಯಲ್ಲಿ ಸಾಲ ಮಂಜೂರು ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಖೆಯ ವ್ಯವಸ್ಥಾಪಕ ಎಂ.ಎಲ್‌. ಹೆಗ್ಗಡೆ, ನೇಕಾರರಿಗೆ, ಬಡವರಿಗೆ, ರೈತರಿಗೆ, ಉದ್ದಿಮೆದಾರರಿಗೆ ನಮ್ಮ ಬ್ಯಾಂಕಿನಿಂದ ಸಾಕಷ್ಟು ಅನುಕೂಲ ಕಲ್ಪಿಸಲಾಗುತ್ತಿದ್ದು, ಸರಕಾರದ ಎಲ್ಲ ಯೋಜನೆಗಳನ್ನು ಜನಸಾಮಾನ್ಯರಿಗೆ ಮಂಜೂರ ಮಾಡುತ್ತಾ ಬಂದಿದೆ. ಅದೇ ರೀತಿ ಮುದ್ರಾ ಯೋಜನೆಯಡಿ ಕೈಮಗ್ಗ ನೇಕಾರರಿಗೆ ಸಾಲ ಮಂಜೂರು ಮಾಡಲಾಗಿದೆ ಎಂದರು.

Vijaya Karnataka 26 Nov 2018, 5:00 am
ಗದಗ : ಮುದ್ರಾ ಯೋಜನೆಯಡಿ ಕೈಮಗ್ಗ ನೇಕಾರರಿಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಬೆಟಗೇರಿ ಶಾಖೆಯಲ್ಲಿ ಸಾಲ ಮಂಜೂರು ಪತ್ರ ವಿತರಿಸಲಾಯಿತು.
Vijaya Karnataka Web loans to the weavers under the mudra scheme
ಮುದ್ರಾ ಯೋಜನೆಯಡಿ ನೇಕಾರರಿಗೆ ಸಾಲ ಮಂಜೂರ

ಈ ಸಂದರ್ಭದಲ್ಲಿ ಮಾತನಾಡಿದ ಶಾಖೆಯ ವ್ಯವಸ್ಥಾಪಕ ಎಂ.ಎಲ್‌. ಹೆಗ್ಗಡೆ, ನೇಕಾರರಿಗೆ, ಬಡವರಿಗೆ, ರೈತರಿಗೆ, ಉದ್ದಿಮೆದಾರರಿಗೆ ನಮ್ಮ ಬ್ಯಾಂಕಿನಿಂದ ಸಾಕಷ್ಟು ಅನುಕೂಲ ಕಲ್ಪಿಸಲಾಗುತ್ತಿದ್ದು, ಸರಕಾರದ ಎಲ್ಲ ಯೋಜನೆಗಳನ್ನು ಜನಸಾಮಾನ್ಯರಿಗೆ ಮಂಜೂರ ಮಾಡುತ್ತಾ ಬಂದಿದೆ. ಅದೇ ರೀತಿ ಮುದ್ರಾ ಯೋಜನೆಯಡಿ ಕೈಮಗ್ಗ ನೇಕಾರರಿಗೆ ಸಾಲ ಮಂಜೂರು ಮಾಡಲಾಗಿದೆ ಎಂದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿ ಅನುಪಮಾ ಹಿರೇಮಠ ಮಾತನಾಡಿ, ನೇಕಾರರಿಗೆ ಇಲಾಖೆಯಿಂದ ಸರಕಾರದ ಯೋಜನೆಗಳನ್ನು ಮಂಜೂರು ಮಾಡಲು ಪ್ರಯತ್ನಿಸಲಾಗುತ್ತಿದೆ. ಮುದ್ರಾ ಯೋಜನೆಯಲ್ಲಿ ಸಾಲ ಮಂಜೂರಾದವರಿಗೆ ಮಾರ್ಜಿನ್‌ ಮನಿ ಹಾಗೂ ರಿಯಾಯಿತಿ ದರದಲ್ಲಿ ಬಡ್ಡಿಯನ್ನು ಸರಕಾರ ನೀಡಲಿದೆ ಎಂದರು.

ಕೈಮಗ್ಗ ನೇಕಾರರ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಬಣ್ಣದ ಮಾತನಾಡಿದರು. ಬ್ಯಾಂಕಿನ ಫೀಲ್ಡ್‌ ಆಫೀಸರ್‌ ಶಿವಶಂಕರ ಹಾಜರಿದ್ದರು. ಕಿರಣ ಬಣ್ಣದ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ