ಆ್ಯಪ್ನಗರ

ಲೋಕಸಭಾ ಸಾರ್ವತ್ರಿಕ ಚುನಾವಣೆ: ಇಂದು ಪ್ರತಿಬಂಧಕಾಜ್ಞೆ ಜಾರಿ

ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಮೇ 23 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಗೆದ್ದ ಮತ್ತು ಸೋತ ಚುನಾವಣಾ ಅಭ್ಯರ್ಥಿಗಳ ಮತ್ತು ಅವರ ಬೆಂಬಲಿಗರ ನಡುವೆ ಗಲಾಟೆಗಳುಂಟಾಗಿ ...

Vijaya Karnataka 23 May 2019, 5:00 am
ಗದಗ: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಮೇ 23 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಗೆದ್ದ ಮತ್ತು ಸೋತ ಚುನಾವಣಾ ಅಭ್ಯರ್ಥಿಗಳ ಮತ್ತು ಅವರ ಬೆಂಬಲಿಗರ ನಡುವೆ ಗಲಾಟೆಗಳುಂಟಾಗಿ ಸಾರ್ವಜನಿಕ ಶಾಂತತೆಗೆ ಭಂಗ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿಪಾಲನೆಯ ಹಿತದೃಷ್ಟಿಯಿಂದ ಮೇ 23 ರಂದು ಬೆಳಗ್ಗೆ 6ರಿಂದ ಮಧ್ಯರಾತ್ರಿಯವರೆಗೆ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿದೆ.
Vijaya Karnataka Web lok sabha general election today inspection initiative
ಲೋಕಸಭಾ ಸಾರ್ವತ್ರಿಕ ಚುನಾವಣೆ: ಇಂದು ಪ್ರತಿಬಂಧಕಾಜ್ಞೆ ಜಾರಿ


ಜಿಲ್ಲಾ ವ್ಯಾಪ್ತಿಯಲ್ಲಿ ಮೇ 23 ರಂದು 4 ಹಾಗೂ 4 ಕ್ಕಿಂತ ಹೆಚ್ಚು ಜನರು, ಗುಂಪು ಕಟ್ಟಿಕೊಂಡು ಮಾರಕಾಸ್ತ್ರ ಹಿಡಿದುಕೊಂಡು ತಿರುಗಾಡುವುದನ್ನು ನಿಷೇಧಿಸಿದೆ. ಯಾವುದೇ ವಿಜಯೋತ್ಸವ , ಸಭೆ- ಸಮಾರಂಭ ಮೆರವಣಿಗೆ ಮಾಡುವುದನ್ನು, ಪಟಾಕಿ ಮಾರಾಟ ಹಾಗೂ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ಯಾವುದೇ ಮಾರಕಾಸ್ತ್ರ , ಸ್ಫೋಟಕ ವಸ್ತು ಕೊಂಡೊಯ್ಯುವುದು, ಯಾವುದೇ ಜೀವಂತ ಅಥವಾ ಮೃತ ವ್ಯಕ್ತಿಯ ಭಾವಚಿತ್ರ ಅಥವಾ ಪ್ರತಿರೂಪ ಪ್ರದರ್ಶಿಸುವ ಇಲ್ಲವೇ ಇತರೆ ಕಾರ‍್ಯವನ್ನು ನಿಷೇಧಿಸಲಾಗಿದೆ. ಸೂಕ್ತ ಅಧಿಕಾರ ಹೊಂದಿದ ಅಧಿಕಾರಿಗಳ ಅಭಿಪ್ರಾಯದಲ್ಲಿ ಸಾರ್ವಜನಿಕ ಹಿತಕ್ಕೆ, ನೈತಿಕ ಮಟ್ಟಕ್ಕೆ ಧಕ್ಕೆ ತರುವ ಅಥವಾ ಸುರಕ್ಷ ತೆಗೆ ಧಕ್ಕೆ ಬರುವುದೆಂದು ಪರಿಗಣಿಸುವ ಯಾವುದೇ ಸಾರ್ವಜನಿಕವಾಗಿ ಕೂಗಾಡುವುದು , ಹಾಡುವುದು, ವಾದ್ಯ ಬಾರಿಸುವುದು, ಅಣಕವಾಡುವುದು ಮುಂತಾದ ಕಾರ‍್ಯಗಳನ್ನು ನಿಷೇಧಿಸಲಾಗಿದೆ. ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ