ಆ್ಯಪ್ನಗರ

ಲಕ್ಕಿ ಡ್ರಾ ಕಂಪನಿ ಏಜೆಂಟರ ಮೇಲೆ ಹಲ್ಲೆ

ಗದಗ : ಜಿಲ್ಲೆಯ ರೋಣ ಪಟ್ಟಣದಲ್ಲಿ ಲಕ್ಕಿ ಡ್ರಾ ನಡೆಸುವ ಪ್ರಣೀತಿ ಎಂಟರಪ್ರೈಸಸ್‌ ಜನರನ್ನು ವಂಚಿಸುತ್ತಿದೆ ಎಂದು ಆರೋಪಿಸಿರುವ ಗ್ರಾಹಕರು, ಸಂಸ್ಥೆಯ ಏಜೆಂಟರ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಡ್ರಾ ಸಂದರ್ಭದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊತ್ತೊಯ್ದ ಘಟನೆ ಭಾನುವಾರ ನಡೆದಿದೆ.

Vijaya Karnataka 10 Jun 2019, 5:00 am
ಗದಗ : ಜಿಲ್ಲೆಯ ರೋಣ ಪಟ್ಟಣದಲ್ಲಿ ಲಕ್ಕಿ ಡ್ರಾ ನಡೆಸುವ ಪ್ರಣೀತಿ ಎಂಟರಪ್ರೈಸಸ್‌ ಜನರನ್ನು ವಂಚಿಸುತ್ತಿದೆ ಎಂದು ಆರೋಪಿಸಿರುವ ಗ್ರಾಹಕರು, ಸಂಸ್ಥೆಯ ಏಜೆಂಟರ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಡ್ರಾ ಸಂದರ್ಭದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊತ್ತೊಯ್ದ ಘಟನೆ ಭಾನುವಾರ ನಡೆದಿದೆ.
Vijaya Karnataka Web GDG-9SALIM15
ರೋಣದಲ್ಲಿ ಪ್ರಣೀತಿ ಸಂಸ್ಥೆ ನಡೆಸಿದ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಯಾಗಿರುವುದು.


ಕೆಲ ವರ್ಷಗಳಿಂದ ರೋಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಣೀತಿ ಎಂಟರ್‌ಪ್ರೈಸಸ್‌ ಸಂಸ್ಥæ್ಥ ಪ್ರಗತಿ ಬಂಧು ಹೆಸರಿನಲ್ಲಿ ಪ್ರತಿ ತಿಂಗಳು ನಡೆಸುವಂತೆ ಭಾನುವಾರವೂ ಲಕ್ಕಿ ಡ್ರಾ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಕಂಪೆನಿ ಮಾಲೀಕರು, ಏಜೆಂಟರು ಮತ್ತು ಗ್ರಾಹಕರ ನಡುವೆ ಗೊಂದಲ ಉಂಟಾಗಿದೆ. ಈ ವೇಳೆ ಆಕ್ರೋಶಗೊಂಡ ಗ್ರಾಹಕರು ಕಂಪನಿ ಏಜೆಂಟರ ಮೇಲೆ ಹಲ್ಲೆ ನಡೆಸಿದ್ದಾರೆ. ತಕ್ಷಣ ಮಧ್ಯಪ್ರವೇಶಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

ಡ್ರಾ ಸಂದರ್ಭದಲ್ಲಿ ಕಂಪನಿ ಈಗಾಗಲೇ ತಿಳಿಸಿದ ನಿಯಮದಂತೆ ಡ್ರಾ ನಡೆಸದ ಕಾರಣ ಮತ್ತು ಡ್ರಾ ಬಿಲ್ಲೆಗಳ ಬಗ್ಗೆ ಅನುಮಾನಗೊಂಡ ಗ್ರಾಹಕರು ಕಂಪನಿ ಮಾಲೀಕರ ಜತೆ ವಾಗ್ವಾದಕ್ಕೆ ಮುಂದಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ಆಕ್ರೋಶಗೊಂಡ ಗ್ರಾಹಕರು ಕಂಪನಿ ಏಜೆಂಟರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡು ಕೆಲ ಗ್ರಾಹಕರು 600ಕ್ಕೂ ಹೆಚ್ಚಿನ ಕುರ್ಚಿಗಳನ್ನು ಹೊತ್ತೊಯ್ದಿದ್ದಾರೆ. ಈ ಕುರಿತು ರೋಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡ್ರಾ ವೇಳೆ ಅನುಮಾನ:

ಪ್ರಣೀತಿ ಕಂಪನಿಯಲ್ಲಿ ಸಾವಿರಾರು ಜನ ಸದಸ್ಯರಿದ್ದಾರೆ. ಪ್ರತಿಯೊಬ್ಬರಿಂದ 650 ರೂ. ಸಂಗ್ರಹ ಮಾಡಲಾಗಿದೆ. ಡ್ರಾ ಮತ್ತು ಡ್ರಾ ನಡೆಸುವ ಬಿಲ್ಲೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದರೆ ಕಂಪನಿ ಮಾಲೀಕ ಗ್ರಾಹಕರನ್ನು ದಬಾಯಿಸುತ್ತಿದ್ದಾರೆ. ಈ ವೇಳೆ ಆಕ್ರೋಶಗೊಂಡ ಗ್ರಾಹಕರು ಕೈ ಕೈ ಮಿಲಾಯಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೋಸ ಆಗಿಲ್ಲ :

''ಪ್ರಣೀತಿ ಕಂಪನಿಯಿಂದ ಯಾವುದೇ ಗ್ರಾಹಕರಿಗೆ ಮೋಸ ಆಗಿಲ್ಲ. ಆದರೆ ಗ್ರಾಹಕರು ಸಮಾಧಾನದಿಂದ ವರ್ತಿಸದ ಕಾರಣ ಗೊಂದಲ ಸೃಷ್ಟಿಯಾಗಿದೆ'' ಎಂದು ಕಂಪನಿಯ ಮಾಲೀಕ ಸೋಮನಗೌಡ ಪಾಟೀಲ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ