ಆ್ಯಪ್ನಗರ

ಮಹದಾಯಿ, ರಾಜ್ಯಪಾಲರಿಗೆ 10 ಸಾವಿರ ಪತ್ರ

ನರಗುಂದ: ಮಹದಾಯಿ ಕಳಸಾ ಬಂಡೂರಿ ಯೋಜಗೆ ಒತ್ತಾಯಿಸಿ ನಡೆದ ರೈತರ ಹೋರಾಟ ಶುಕ್ರವಾರ 1548ನೇ ದಿನಕ್ಕೆ ಕಾಲಿಟ್ಟಿದ್ದು, ರೈತರ ಹೋರಾಟಕ್ಕೆ ನ್ಯಾಯಾಧೀಕರಣ ತೀರ್ಪು ನೀಡಿದರೂ ರಾಜ್ಯ ಹಾಗೂ ಕೇಂದ್ರ ಸರಕಾರ ನಮ್ಮ ಪಾಲಿನ ನೀರು ತಂದುಕೊಡುವಲ್ಲಿಮುಂದಾಗದ ಕಾರಣ ಮಧ್ಯ ಪ್ರವೇಶಬೇಕು ಎಂಬ ಮನವಿಯ ಹತ್ತು ಸಾವಿರ ಪತ್ರಗಳು ರಾಜ್ಯಪಾಲರಿಗೆ ಕಳುಹಿಸಲಾಯಿತು.

Vijaya Karnataka 12 Oct 2019, 5:00 am
ನರಗುಂದ: ಮಹದಾಯಿ ಕಳಸಾ ಬಂಡೂರಿ ಯೋಜಗೆ ಒತ್ತಾಯಿಸಿ ನಡೆದ ರೈತರ ಹೋರಾಟ ಶುಕ್ರವಾರ 1548ನೇ ದಿನಕ್ಕೆ ಕಾಲಿಟ್ಟಿದ್ದು, ರೈತರ ಹೋರಾಟಕ್ಕೆ ನ್ಯಾಯಾಧೀಕರಣ ತೀರ್ಪು ನೀಡಿದರೂ ರಾಜ್ಯ ಹಾಗೂ ಕೇಂದ್ರ ಸರಕಾರ ನಮ್ಮ ಪಾಲಿನ ನೀರು ತಂದುಕೊಡುವಲ್ಲಿಮುಂದಾಗದ ಕಾರಣ ಮಧ್ಯ ಪ್ರವೇಶಬೇಕು ಎಂಬ ಮನವಿಯ ಹತ್ತು ಸಾವಿರ ಪತ್ರಗಳು ರಾಜ್ಯಪಾಲರಿಗೆ ಕಳುಹಿಸಲಾಯಿತು.
Vijaya Karnataka Web 11NRD2_25
ನರಗುಂದ ಅಂಚೆ ಡಬ್ಬಿಗೆ 10 ಸಾವಿರ ಪತ್ರಗಳನ್ನು ರೈತ ಹೋರಾಟಗಾರರು ಹಾಕಿದರು.


ಮಹದಾಯಿ ನದಿ ತಿರುವ ಯೋಜನೆಯಿಂದ 13.5 ಟಿಎಂಸಿ ನೀರನ್ನು ಬಳಸಿಕೊಳ್ಳುವಂತೆ ನ್ಯಾಯಾಧೀಕರಣ ತೀರ್ಪು ನೀಡಿ ವರ್ಷ ಮುಗಿದು ಎರಡು ತಿಂಗಳು ಗತಿಸಿದರೂ ಕೇಂದ್ರ ಸರಕಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿಲ್ಲ. ಈ ಭಾಗದ ಜನರ ಹೋರಾಟಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರ ಕಿವಿಗೊಡುತ್ತಿಲ್ಲ. ಕೂಡಲೆ ತಾವು ಮಧ್ಯ ಪ್ರವೇಶಿಸಿ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ರಾಜ್ಯದ ಪಾಲಿನ ನೀರು ಪಡೆಯಲು ಕಾಮಗಾರಿ ಆರಂಭಿಸಲು ಗೆಜೆಟ್‌ ನೋಟಿಫಿಕೇಶನ್‌ ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಪತ್ರ ಚಳವಳಿ ಮೂಲಕ ಉತ್ತರ ಕರ್ನಾಟಕ ಜನ ಮನವಿ ಮಾಡಿಕೊಂಡಿದ್ದಾರೆ.

ಒಂದು ವಾರದಿಂದ ನರಗುಂದ ತಾಲೂಕಿನ ರೈತರು,ಸಾರ್ವಜನಿಕರು ಮತ್ತು ಶಾಲೆ, ಕಾಲೇಜು ವಿದ್ಯಾರ್ಥಿಗಳು ರಾಜ್ಯಪಾಲರಿಗೆ ಬರೆದ ಹತ್ತು ಸಾವಿರ ಪತ್ರಗಳನ್ನು ರೈತ ಹೋರಾಟಗಾರರು ಅಂಚೆ ಡಬ್ಬಿಗೆ ಹಾಕುವ ಮೂಲಕ ರಾಜ್ಯಪಾಲರಿಗೆ ಪತ್ರ ಕಳುಹಿಸಿಕೊಟ್ಟರು. ಹುಬ್ಬಳ್ಳಿಯಿಂದ ಪತ್ರ ಚಳವಳಿಗೆ ಚಾಲನೆ ನೀಡಿ ಗಮನ ಸೆಳೆದಿದ್ದ ರೈತ ಹೋರಾಟಗಾರರು ಇದೆ ಅ.16 ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದ್ದು ಅದಕ್ಕೂ ಮೊದಲು ರಾಜ್ಯಪಾಲರಿಗೆ ಪತ್ರಗಳನ್ನು ತಲುಪಿಸುವ ಉದ್ದೇಶವಿದೆ ಎಂದು ರೈತ ಹೋರಾಟಗಾರರು ತಿಳಿಸಿದರು.

ವೀರಬಸಪ್ಪ ಹೂಗಾರ, ಎಸ್‌.ಬಿ.ಜೋಗಣ್ಣವರ, ಎಸ್‌.ಕೆ.ಗಿರೆಣ್ಣವರ, ಅರ್ಜುನ ಮಾನೆ,ಸೋಮಲಿಂಗಪ್ಪ ಆಯಟ್ಟಿ, ಸಿದ್ದಪ್ಪ ಚಂದ್ರತ್ನವರ, ಯಲ್ಲಪ್ಪ ಗುಡದರಿ,ಜಗನ್ನಾಥ ಮುಧೋಳೆ, ವಾಸು ಚವ್ಹಾಣ, ಹನಮಂತ ಸರನಾಯ್ಕರ, ಮಾರುತಿ ಯಾದವ, ರಾಮಪ್ಪ ಸಾಬಳೆ, ರುದ್ರಗೌಡ ಮುದಿಗೌಡ್ರ, ಶಿವಪ್ಪ ಸಾತನ್ನವರ, ಜಯಪಾಲ ಮುತ್ತಿನ, ಹಜರೆಸಾಬ ಮುಲ್ಲಾನವರ ಹಾಗೂ ರೈತ ಮಹಿಳೆಯರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ