ಆ್ಯಪ್ನಗರ

ಪ್ಲಾಸ್ಟಿಕ್‌ ಮುಕ್ತರಾಗಿ ಆರೋಗ್ಯ ಕಾಪಾಡಿಕೊಳ್ಳಿ

ಗದಗ: ಮನುಷ್ಯ ಪ್ರತಿ ಹಂತದಲ್ಲಿಯೂ ಪ್ಲಾಸ್ಟಿಕ್‌ ಅವಲಂಬಿಸಿ, ತನ್ನ ಆರೋಗ್ಯವನ್ನು ತಾನೇ ಕಳೆದುಕೊಳ್ಳುತ್ತಿದ್ದಾನೆ. ಪ್ಲಾಸ್ಟಿಕ್‌ ಬಳಕೆ ವಿಪುಲವಾಗುತ್ತಿದೆ. ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ, ವಿಷಕಾರಿ ಪ್ಲಾಸ್ಟಿಕ್‌ ನಿರ್ಮೂಲನೆ ಮಾಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ಎಚ್‌.ನಾಗೂರ ಹೇಳಿದರು.

Vijaya Karnataka 29 Sep 2019, 4:55 pm
ಗದಗ: ಮನುಷ್ಯ ಪ್ರತಿ ಹಂತದಲ್ಲಿಯೂ ಪ್ಲಾಸ್ಟಿಕ್‌ ಅವಲಂಬಿಸಿ, ತನ್ನ ಆರೋಗ್ಯವನ್ನು ತಾನೇ ಕಳೆದುಕೊಳ್ಳುತ್ತಿದ್ದಾನೆ. ಪ್ಲಾಸ್ಟಿಕ್‌ ಬಳಕೆ ವಿಪುಲವಾಗುತ್ತಿದೆ. ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ, ವಿಷಕಾರಿ ಪ್ಲಾಸ್ಟಿಕ್‌ ನಿರ್ಮೂಲನೆ ಮಾಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ಎಚ್‌.ನಾಗೂರ ಹೇಳಿದರು.
Vijaya Karnataka Web 28RUDRAGOUD18_25
ಗದಗ ಬಸವೇಶ್ವರ ಪ್ರೌಢಶಾಲೆಯಲ್ಲಿನಡೆದ ಪ್ಲಾಸ್ಟಿಕ್‌ ನಿಷೇಧ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳ ಜಾಥಾ ಕಾರ್ಯಕ್ರಮದಲ್ಲಿಡಿಡಿಪಿಐ ಎನ್‌.ಎಚ್‌.ನಾಗೂರ ಮಾತನಾಡಿದರು.


ಇಲ್ಲಿನ ಬಸವೇಶ್ವರ ಪ್ರೌಢಶಾಲೆಯಲ್ಲಿನಡೆದ ಪ್ಲಾಸ್ಟಿಕ್‌ ನಿಷೇಧ ದಿನಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರು ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಬೇಕು. ಮುಂಬರುವ ದಿನಗಳಲ್ಲಿಅದರ ದುಷ್ಪರಿಣಾಮ ಎದುರಿಸಬೇಕಾಗುತ್ತಿದೆ ಎಂದರು.ಕೆ.ವಿ.ಕೋರಡ್ಡಿ ಮಾತನಾಡಿದರು.

ನಂತರ ಪ್ಲಾಸ್ಟಿಕ್‌ ನಿಷೇಧ ದಿನಾಚರಣೆ ಅಂಗವಾಗಿ ನಡೆದ ಜಾಥಾ ಬಸವೇಶ್ವರ ಪ್ರೌಢಶಾಲೆಯಿಂದ ಮುಳಗುಂದ ನಾಕಾ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಕಿತ್ತೂರ ಚನ್ನಮ್ಮನ ಸರ್ಕಲ್‌ ಮೂಲಕ ಹಾಯ್ದು ಸಿದ್ಧಲಿಂಗ ನಗರದ ವಿವಿಧ ಬಡಾವಣೆಗಳ ಮೂಲಕ ಹಾಯ್ದು ಜನರಲ್ಲಿಜಾಗೃತಿ ಮೂಡಿಸಿದರು. ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ಅಧ್ಯಕ್ಷತೆ ವಹಿಸಿದ್ದರು.ಬಿಇಒ ಎಸ್‌.ಎಸ್‌.ಕೆಳದಿಮಠ, ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್‌.ಎಸ್‌.ಮುಳಗುಂದಮಠ, ಡಿಡಿಪಿಐ.ಕಚೇರಿ ವಿಷಯ ಪರಿವೀಕ್ಷಕ ರಡ್ಡೇರ, ಸಿಆರ್‌ಸಿ ಸಂಯೋಜಕ ಬಂಡಿಹಾಳ, ಜೇವರಗಿ, ಮಡಿವಾಳರ ಇತರರು ಭಾಗವಹಿಸಿದ್ದರು. ಶಿವಾನಂದ ಗಿಡ್ಡಕೆಂಚಣ್ಣವರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ