ಆ್ಯಪ್ನಗರ

ಬಸ್‌ ನಿಲ್ದಾಣದ ಶುಚಿತ್ವ ಕಾಪಾಡಿ

ರೋಣ: ನೂತನ ಬಸ್‌ ತಂಗುದಾಣದ ಶುಚಿತ್ವ ಕಾಪಾಡುವುದು,ಕಟ್ಟಡ ಹಾಳಾಗದಂತೆ ನೋಡಿಕೊಳ್ಳುವುದು ಸಾರ್ವಜನಿಕರ ಕರ್ತವ್ಯ.ಇದು ಸರಕಾರ ಆಸ್ತಿಯಾದರೂ,ಸಾರ್ವಜನಿಕರ ಸ್ವತ್ತು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು. ಅವರು ತಾಲೂಕಿನ ಹಿರೇಹಾಳದಲ್ಲಿನಿರ್ಮಿಸಲಾಗಿದ್ದ ನೂತನ ಬಸ್‌ ತಂಗುದಾಣವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

Vijaya Karnataka 25 Sep 2019, 5:00 am
ರೋಣ: ನೂತನ ಬಸ್‌ ತಂಗುದಾಣದ ಶುಚಿತ್ವ ಕಾಪಾಡುವುದು,ಕಟ್ಟಡ ಹಾಳಾಗದಂತೆ ನೋಡಿಕೊಳ್ಳುವುದು ಸಾರ್ವಜನಿಕರ ಕರ್ತವ್ಯ.ಇದು ಸರಕಾರ ಆಸ್ತಿಯಾದರೂ,ಸಾರ್ವಜನಿಕರ ಸ್ವತ್ತು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು. ಅವರು ತಾಲೂಕಿನ ಹಿರೇಹಾಳದಲ್ಲಿನಿರ್ಮಿಸಲಾಗಿದ್ದ ನೂತನ ಬಸ್‌ ತಂಗುದಾಣವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
Vijaya Karnataka Web maintain the cleanliness of the bus station
ಬಸ್‌ ನಿಲ್ದಾಣದ ಶುಚಿತ್ವ ಕಾಪಾಡಿ


ಸರಕಾರದಿಂದ ಜನಸಾಮಾನ್ಯರಿಗೆ ಮೂಲ ಸೌಕರ್ಯ ಒದಗಿಸುವುದು ನಮ್ಮ ಕರ್ತವ್ಯ. ಈ ಭಾಗದಲ್ಲಿಉತ್ತಮ ರೀತಿಯ ನೂತನ ಬಸ್‌ ತಂಗುದಾಣವನ್ನು ಸಾರ್ವಜನಿಕರ ಬಳಕೆಗೆ ನೀಡಿದ್ದು,ಇದರಲ್ಲಿಯಾವುದೇ ರೀತಿಯ ಕೆಟ್ಟ ಬರಹ ಬರೆಯುವುದು, ಕಟ್ಟಡ ಹಾಳು ಮಾಡುವುದು ಶೋಭೆ ತರುವ ಕೆಲಸವಲ್ಲ. ಬಸ್‌ ನಿಲ್ದಾಣದ ಶುಚಿತ್ವ ಕಾಪಾಡಿಕೊಂಡು ದೀರ್ಘ ಕಾಲದವರೆಗೂ ಬಾಳಿಕೆಗೆ ಬರುವಂತೆ ನೋಡಿಕೊಳ್ಳುವುದು,ಪ್ರಮಾಣಿಕರಿಗೆ ಅನುಕೂಲವಾಗುವ ತಾಣ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಈ ಹಿಂದೆ ಇದೆ ಸ್ಥಳದಲ್ಲಿಹಳೆಯದಾದ ಬಸ್‌ ತಂಗುದಾಣವಿತ್ತು. ರಸ್ತೆ ಅಗಲಿಕರಣ ವೇಳೆ ಅದನ್ನು ಕೆಡವಲಾಗಿತ್ತು. ಇದರಿಂದ ಶಾಲಾ,ಕಾಲೇಜು ವಿದ್ಯಾರ್ಥಿಗಳು,ಇತರ ಪ್ರಯಾಣಿಕರು ,ಕೆಲಸ ಕಾರ್ಯಗಳಿಗೆ ನಿತ್ಯ ಸಂಚರಿಸುವ ಕಾರ್ಮಿಕರು ರಸ್ತೆ ಬದಿಯಲ್ಲಿಬಿಸಿಲು,ಮಳೆಯಲ್ಲಿನಿಂತು ವಾಹನ ಕಾಯಬೇಕಾದ ಪರಿಸ್ಥಿತಿ ಇತ್ತು. ಅದರ ಸಮಸ್ಯೆಯನ್ನು ಸ್ಥಳೀಯ ಆಡಳಿತ ಮುತುವರ್ಜಿ ವಹಿಸಿ ಪರಿಹಾರ ಮಾಡಿದೆ ಎಂದರು.

ಹಿರೇಹಾಳ ಬಸ್‌ ತಂಗುದಾಣವನ್ನು ತಾಪಂ ಉಪಾಧ್ಯಕ್ಷೆ ಇಂದಿರಾ ತೇಲಿ ಉದ್ಘಾಟಿಸಿದರು.ತಾಪಂ ಅಧ್ಯಕ್ಷೆ ಪ್ರೇಮಾ ನಾಯಕ, ಗ್ರಾಪಂ ಅಧ್ಯಕ್ಷ ರಮೇಶ ಬೇವಿನಗಿಡದ, ವೀರುಪಾಕ್ಷಗೌಡ ಪಾಟೀಲ, ಮುತ್ತಣ್ಣ ಲಿಂಗನಗೌಡ್ರ, ಭೀಮಪ್ಪ ಮಾದರ, ಹೇಮಾವತಿ ಕಡದಳ್ಳಿ, ಹುಲಿಗೆಮ್ಮ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ