ಆ್ಯಪ್ನಗರ

ಸರಕಾರಿ ಸೌಲಭ್ಯ ಪಡೆದು ಭವಿಷ್ಯ ರೂಪಿಸಿಕೊಳ್ಳಿ

ಲಕ್ಕುಂಡಿ: ಶಿಕ್ಷಣದ ಅಭಿವೃದ್ಧಿಗಾಗಿ ಸರಕಾರ ನೀಡುವ ಪ್ರತಿಯೊಂದು ಸೌಲಭ್ಯ ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.

Vijaya Karnataka 14 Sep 2019, 5:00 am
ಲಕ್ಕುಂಡಿ: ಶಿಕ್ಷಣದ ಅಭಿವೃದ್ಧಿಗಾಗಿ ಸರಕಾರ ನೀಡುವ ಪ್ರತಿಯೊಂದು ಸೌಲಭ್ಯ ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.
Vijaya Karnataka Web make government a future
ಸರಕಾರಿ ಸೌಲಭ್ಯ ಪಡೆದು ಭವಿಷ್ಯ ರೂಪಿಸಿಕೊಳ್ಳಿ


ಇಲ್ಲಿಯ ಮಾರುತಿ ನಗರದ ಜನತಾ ವಿದ್ಯಾವರ್ಧಕ ಸಂಸ್ಥೆಯ ಬಿ.ಎಚ್‌ ಪಾಟೀಲ ಪ್ರೌಢಶಾಲೆಯ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಿಸಿ ಮಾತನಾಡಿದರು. ಎಲ್ಲವರ್ಗದ ಜನರು ಶಿಕ್ಷಣವಂತರಾಗಬೇಕು ಎಂದು ಸರಕಾರ ಪಠ್ಯ, ಸಮವಸ್ತ್ರ, ಶೂ, ಕಾಲುಚೀಲ, ಬಿಸಿಯೂಟ, ಸೈಕಲ್‌, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಮೂಲ ಸೌಲಭ್ಯ ಒದಗಿಸಿದೆ. ಇವುಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಅಭಿರುಚಿ ಕ್ಷೇತ್ರದ ಸಾಧಕರಾಗಬೇಕು. ಈ ನಿಟ್ಟಿನಲ್ಲಿಪಾಲಕರು ಮತ್ತು ಶಿಕ್ಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಶಿಕ್ಷಣ ಬೆಳೆಸುವ ಪರಿಸರ ನಿರ್ಮಿಸಬೇಕು ಎಂದರು.

ಜನತಾ ವಿದ್ಯಾವರ್ಧಕ ಸಂಸ್ಥೆ ಅಧ್ಯಕ್ಷ ಈಶ್ವರಪ್ಪ ಕುಂಬಾರ ಅಧ್ಯಕ್ಷತೆ ವಹಿಸಿ, ಈ ಶಾಲೆಗೆ ಕೊರೆತೆಯಿರುವ ಸೌಲಭ್ಯಗಳನ್ನು ಸಚಿವರು ಒದಗಿಸಿಕೊಡಬೇಕೆಂದು ವಿನಂತಿಸಿಕೊಂಡರು. ಸಂಸ್ಥೆಯಿಂದ ಸಚಿವರನ್ನು ಸನ್ಮಾನಿಸಲಾಯಿತು.

ಜಿಪಂ ಸದಸ್ಯ ಸಿದ್ದು ಪಾಟೀಲ, ತಾಪಂ ಉಪಾಧ್ಯಕ್ಷೆ ಸುಜಾತಾ ಖಂಡು, ಗ್ರಾಪಂ ಅಧ್ಯಕ್ಷ ಎಸ್‌.ಎಂ.ಬೂದಿಹಾಳ, ಉಪಾಧ್ಯಕ್ಷೆ ಪ್ರೇಮಾ ಮಟ್ಟಿ, ಎಸ್‌.ಬಿ.ಕಲಕೇರಿ, ವಸಂತ ಮೇಟಿ, ಮಹೇಶ ಮುಸ್ಕಿನಬಾವಿ, ವೀರಯ್ಯ ಗಂಧದ, ಮಲ್ಲಪ್ಪ ಕಮತರ, ತಿಪ್ಪಣ್ಣ ಅಂಬಕ್ಕಿ, ಪ್ರಕಾಶ ತೋಫಿನ, ಎಂ.ಎ ರೆಡ್ಡೇರ, ಎಚ್‌.ಎಸ್‌. ಜನಗಾ, ಗ್ರಾಪಂ ಸದಸ್ಯರು ವೇದಿಕೆಯಲ್ಲಿದ್ದರು. ಎಸ್‌.ಎಸ್‌.ದೊಡ್ಡಮನಿ ಪ್ರಾರ್ಥಿಸಿದರು. ಬಿ.ಎಸ್‌.ಕಣವಿ ಸ್ವಾಗತಿಸಿದರು. ಡಿ. ಎಸ್‌. ಮಾದರ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ