ಆ್ಯಪ್ನಗರ

ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ

ಗದಗ: ಶಿಕ್ಷಕರು ಮಕ್ಕಳೊಂದಿಗೆ ಭಾವನಾತ್ಮಕವಾಗಿ ಅನುಕಂಪ, ಪ್ರೀತಿ ತೋರಿಸುವುದರ ಜತೆಗೆ ಆತ್ಮಸ್ಥೆತ್ರೖರ್ಯ ತುಂಬುವ ಕೆಲಸವಾಗಬೇಕು. ಪಾಠ ಬೋಧಿಸುವ ಮೊದಲು ಮಕ್ಕಳ ಮನೋಭೂಮಿಕೆ, ಆಸಕ್ತಿಯ ಬಗ್ಗೆ ತಿಳಿದುಕೊಂಡಾಗ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣÜ ಇಲಾಖೆ ಕಛೇರಿಯ ನಿರ್ದೇಶಕ ಡಾ.ಬಿ.ಕೆ.ಎಸ್‌. ವರ್ಧನ ಹೇಳಿದರು.

Vijaya Karnataka 19 Feb 2020, 5:00 am
ಗದಗ: ಶಿಕ್ಷಕರು ಮಕ್ಕಳೊಂದಿಗೆ ಭಾವನಾತ್ಮಕವಾಗಿ ಅನುಕಂಪ, ಪ್ರೀತಿ ತೋರಿಸುವುದರ ಜತೆಗೆ ಆತ್ಮಸ್ಥೆತ್ರೖರ್ಯ ತುಂಬುವ ಕೆಲಸವಾಗಬೇಕು. ಪಾಠ ಬೋಧಿಸುವ ಮೊದಲು ಮಕ್ಕಳ ಮನೋಭೂಮಿಕೆ, ಆಸಕ್ತಿಯ ಬಗ್ಗೆ ತಿಳಿದುಕೊಂಡಾಗ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣÜ ಇಲಾಖೆ ಕಛೇರಿಯ ನಿರ್ದೇಶಕ ಡಾ.ಬಿ.ಕೆ.ಎಸ್‌. ವರ್ಧನ ಹೇಳಿದರು.
Vijaya Karnataka Web make the children feel confident
ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ


ಮಂಗಳವಾರ ಜಿಲ್ಲಾಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿಕನ್ನಡ ಸಾಹಿತ್ಯ ಭವನದಲ್ಲಿನಡೆದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಉತ್ತಮ ಫಲಿತಾಂಶಕ್ಕಾಗಿ ಜಿಲ್ಲೆಯಲ್ಲಿಕೈಗೊಂಡಿರುವ ಹಲವು ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪ್ರತಿ ವ್ಯಕ್ತಿಯ ಜೀವನದಲ್ಲಿಪ್ರೌಢ ಶಿಕ್ಷಣ ಮಹತ್ವದ್ದಾಗಿದೆ. ಮುಖ್ಯ ಶಿಕ್ಷಕರು ತಾವು ಕರ್ತವ್ಯ ನಿರ್ವಹಿಸುವ ಸಂಸ್ಥೆಯ ಮೂಲಾಧಾರರಾಗಿದ್ದು, ಸಹ ಶಿಕ್ಷಕರ ಜತೆಗೆ ಉತ್ತಮ ಸಂಬಂಧ ಹೊಂದುವ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಯಾವುದೇ ಸಾಧನೆಗೂ ಮುನ್ನ ಗುರಿಯ ಬಗ್ಗೆ ಸ್ಪಷ್ಟ ಅರಿವಿರಬೇಕು. ಶಿಕ್ಷಣದ ಆಶಯಗಳನ್ನು ಶಿಕ್ಷಕರು ಈಡೇರಿಸಬೇಕು. ಶಾಲೆಯ ಮುನ್ನೋಟದ ಬಗ್ಗೆ ಮುಖ್ಯ ಶಿಕ್ಷಕರು ಸ್ಪಷ್ಟ ಚಿತ್ರಣ ಹೊಂದಿರಬೇಕು ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್‌.ಎಚ್‌.ನಾಗೂರ ಮಾತನಾಡಿ, ಜಿಲ್ಲೆಯ 285 ಪ್ರೌಢಶಾಲೆಗಳಲ್ಲಿಬಾಲಕ, ಬಾಲಕಿಯರು ಸೇರಿ 13,404 ವಿದ್ಯಾರ್ಥಿಗಳು ಇದ್ದು, ಈ ಬಾರಿ ಮಾ.27ರಿಂದ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ