ಆ್ಯಪ್ನಗರ

ಸರಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಿ

ಗದಗ: ರೋಣ ತಾಲೂಕಿನ ಕೌಜಗೇರಿ ಗ್ರಾಮದ ಎನ್‌.ಬಿ. ಮೇಟಿ ಸರಕಾರಿ ಪ್ರೌಢ ಶಾಲೆಯಲ್ಲಿಇತ್ತೀಚೆಗೆ 8ನೇ ತರಗತಿ ಮಕ್ಕಳಿಗಾಗಿ ಉಚಿತ ಸೈಕಲ್‌ ವಿತರಣೆ ಸಮಾರಂಭ ನಡೆಯಿತು.

Vijaya Karnataka 20 Dec 2019, 5:00 am
ಗದಗ: ರೋಣ ತಾಲೂಕಿನ ಕೌಜಗೇರಿ ಗ್ರಾಮದ ಎನ್‌.ಬಿ. ಮೇಟಿ ಸರಕಾರಿ ಪ್ರೌಢ ಶಾಲೆಯಲ್ಲಿಇತ್ತೀಚೆಗೆ 8ನೇ ತರಗತಿ ಮಕ್ಕಳಿಗಾಗಿ ಉಚಿತ ಸೈಕಲ್‌ ವಿತರಣೆ ಸಮಾರಂಭ ನಡೆಯಿತು.
Vijaya Karnataka Web make use of government planning
ಸರಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಿ


ಅಧ್ಯಕ್ಷತೆ ವಹಿಸಿದ್ದ ಎಚ್‌.ಎಫ್‌. ಹೊಸೂರ ಮಾತನಾಡಿ, ಮಕ್ಕಳಿಗೆ ಸರಕಾರ ಸೈಕಲ್‌ ನೀಡಿರುವುದು ಸ್ವಾಗತಾರ್ಹ. ಅದನ್ನು ನಿತ್ಯ ಮಕ್ಕಳು ಶಾಲೆಗೆ ತರಬೇಕು. ಸಕಾರದ ಯೋಜನೆಗಳು ಉತ್ತಮವಾಗಿದ್ದು ಅವುಗಳನ್ನು ಉತ್ತಮ ರೀತಿಯಲ್ಲಿಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಶಿಕ್ಷಕ ವಿ.ಆರ್‌.ಪುಣ್ಯವಂತರ ಮಾತನಾಡಿ, ಮಕ್ಕಳೇ ನೀವೇ ದೇಶದ ಅಸ್ತಿ. ಸರಕಾರದ ಯೋಜನೆಗಳು ನಿಮಗಾಗಿ ಇವೆ. ಅವುಗಳನ್ನು ನಿಮ್ಮ ಭವ್ಯ ಭವಿಷತ್ತಿಗಾಗಿ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಪ್ರಭಾರಿ ಮುಖ್ಯೋಪಾಧ್ಯಯ ಎಸ್‌.ಆರ್‌. ಬಡಿಗೇರ ಮಾತನಾಡಿ, ಎಲ್ಲಮಕ್ಕಳು ಸರಿಯಾದ ಸಮಯಕ್ಕೆ ಹಾಜರಾಗಿ ನಿತ್ಯ ಜ್ಞಾನಾರ್ಜನೆ ಕೈಗೊಳ್ಳಲು ಸಹಕಾರಿಯಾಗುವುದು. ಸರಕಾರದ ಹಲವಾರು ಯೋಜನೆಗಳು ಇದ್ದು ಅವೆಲ್ಲನಿಮ್ಮ ಭಾವಿ ಭವಿಷ್ಯದ ಒಳಿತಿಗಾಗಿ ಇವೆ ಎಂದರು.

ಅಂದಾನಗೌಡ್ರ ಮೇಟಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌.ಎ.ಮಾಲಗಿತ್ತಿ, ಶಬನಮ್‌ ನದಾಫ್‌, ವೀರಪ್ಪ ತಳವಾರ, ಶೇಖಪ್ಪ ಡಂಗರಿ, ಭೀಮಪ್ಪ ತಳವಾರ, ಮಾಗುಂಡಪ್ಪ ಬಿರನೂರ, ಎಲ್ಲಪ್ಪ ಕುರಿ ಇದ್ದರು. ಎಸ್‌.ಬಿ.ಕಂದಗಲ್‌ ನಿರೂಪಿಸಿದರು. ಎಸ್‌.ಬಿ.ಮಲಬಾದಿ ಸ್ವಾಗತಿಸಿದರು. ಐ.ಎಸ್‌. ತಳವಾರ ಪ್ರಾರ್ಥಿಸಿದರು. ಆರ್‌.ಎಸ್‌. ಗೌಡರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ