ಆ್ಯಪ್ನಗರ

ಮಲ್ಲಾಪೂರ ಮಾರುತೇಶ್ವರ ಜಾತ್ರೆ ಇಂದು

ರೋಣ : ಏಳೂರಿನ ಒಡೆಯ ಇವನೊಬ್ಬನೇ ಮಲ್ಲಾಪೂರ ಮಾರುತೇಶ್ವರ. ಸಂಕಷ್ಟಗಳಿಂದ ಪಾರು ಮಾಡಿ, ಇಷ್ಟಾರ್ಥ ಈಡೇರಿಸುವನೆಂಬ ಪ್ರತೀತಿಯಿದೆ. ಅಂತೆಯೇ ಲಕ್ಷಾಂತರ ಭಕ್ತರ ಆರಾಧ್ಯ ದೈವನಾಗಿರುವ ಶ್ರೀ ಮಾರುತೇಶ್ವರ ರಥೋತ್ಸವವು ಮೇ 18 ರಂದು ಸಾಯಂಕಾಲ 6 ಗಂಟೆಗೆ ನಡೆಯಲಿದೆ.

Vijaya Karnataka 18 May 2019, 5:00 am
ರೋಣ : ಏಳೂರಿನ ಒಡೆಯ ಇವನೊಬ್ಬನೇ ಮಲ್ಲಾಪೂರ ಮಾರುತೇಶ್ವರ. ಸಂಕಷ್ಟಗಳಿಂದ ಪಾರು ಮಾಡಿ, ಇಷ್ಟಾರ್ಥ ಈಡೇರಿಸುವನೆಂಬ ಪ್ರತೀತಿಯಿದೆ. ಅಂತೆಯೇ ಲಕ್ಷಾಂತರ ಭಕ್ತರ ಆರಾಧ್ಯ ದೈವನಾಗಿರುವ ಶ್ರೀ ಮಾರುತೇಶ್ವರ ರಥೋತ್ಸವವು ಮೇ 18 ರಂದು ಸಾಯಂಕಾಲ 6 ಗಂಟೆಗೆ ನಡೆಯಲಿದೆ.
Vijaya Karnataka Web GDG-17 RON 8
ಏಳೂರಿನ ಒಡೆಯ ಮಲ್ಲಾಪೂರ ಮಾರುತೇಶ್ವರನಿಗೆ ಎಲಿಪೂಜೆ.


ಒಂದಿಲ್ಲೊಂದು ಅಪೇಕ್ಷೆ ಇಟ್ಟುಕೊಂಡು ದೇವರ ಪೂಜೆ, ಹೋಮ-ಹವನ ಮಾಡುವುದು ಸಾಮಾನ್ಯ. ಆದರೆ ಯಾವುದೇ ಅಪೇಕ್ಷೆಗಳಿಲ್ಲದೆ ನಿಸ್ವಾರ್ಥದಿಂದ ಮಲ್ಲಾಪೂರ ಮಾರುತೇಶ್ವರನ ಸನ್ನಧಿಯಲ್ಲಿ ಗ್ರಾಮದ ಪ್ರತಿ ಕುಟುಂಬಗಳು ಭಕ್ತರಿಗೆ ಸೇವೆ ಸಲ್ಲಿಸುತ್ತಾರೆ.

ಈ ದೇವಸ್ಥಾನಕ್ಕೆ ಪ್ರತಿ ಶನಿವಾರ,ಅಮವಾಸ್ಯೆ ಮತ್ತು ವಿಶೇಷ ದಿನಗಳಲ್ಲಿ ಭಕ್ತಸಾಗರವೇ ಹರಿದುಬರುತ್ತದೆ. ಇನ್ನು ಕಾರ್ತಿಕೋತ್ಸವ ಹಾಗೂ ರಥೋತ್ಸವ ಸಂದರ್ಭದಲ್ಲಿ ಅಗಣಿತ ಜನ ಸೇರುತ್ತಾರೆ.

ಇಷ್ಠಾರ್ಥ ಕರುಣಾಮಯಿ:
ರಥೋತ್ಸವ ಹಾಗೂ ಕಾರ್ತಿಕೋತ್ಸವದಲ್ಲಿ ಮಹಾಪೂಜೆ ನಂತರ ಬೆಳಗ್ಗೆ ಮಾರುತೇಶ್ವರನಿಗೆ ವಿಳ್ಯದೆಲೆಯಿಂದ ಅಲಂಕರಿಸಲಾಗುತ್ತದೆ. ಆಗ ಭಕ್ತರು ಮಾರುತೇಶ್ವರನ ಮುಂದೆ ನಿಂತು ತಮ್ಮ ಇಷ್ಟಾರ್ಥಗಳ ಬಗ್ಗೆ ಪ್ರಶ್ನೆ ಕೇಳುವ ಸಂಪ್ರದಾಯವಿದೆ. ಆಗ ದೇವರ ಮೂರ್ತಿಯ ನಾನಾ ಭಾಗಗಳಿಂದ ಕೆಳಗೆ ಬೀಳುವ ಹೂವು, ಪತ್ರಿಯಿಂದ ಕೆಲಸ ಆಗುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂಬುದು ಭಕ್ತರ ಅಭಿಪ್ರಾಯ.

ಇನ್ನು ಈ ಭಾಗದ ಕೆಲ ಭಕ್ತರು ಯಾವುದೇ ಕಾರ್ಯ ಕೈಗೊಳ್ಳುವ ಮುನ್ನ ಹನುಮಪ್ಪನ ಆದೇಶ ಪಡೆಯುವ ಸಂಪ್ರದಾಯವಿದೆ. ದೇವರ ಆಜ್ಞೆಯಂತೆ ಕೆಲಸವಾದ ಭಕ್ತರು ಇಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ದೇವಸ್ಥಾನ ಧರ್ಮದರ್ಶಿ ಅಶೋಕ ಕುಲಕರ್ಣಿ ಅವರ ಮನೆಯಿಂದ ಕಳಸ, ತೇರಿನ ಮನೆಯಿಂದ ಹಗ್ಗ, ನಂದಿಕೋಲ ಇತ್ಯಾದಿಗಳು ಮೆರವಣಿಗೆಯ ಮೂಲಕ ದೇವಸ್ಥಾನದ ಆವರಣ ತಲುಪುತ್ತವೆ. ಸತತ ಐದು ದಿನಗಳ ಕಾಲ ಲಘು ರಥೋತ್ಸವ ನಡೆಯುವ ಸಂಪ್ರದಾಯ ಹಿಂದಿನಿಂದಲೂ ಚಾಲ್ತಿಯಲ್ಲಿದೆ ಎಂದು ತಾಪಂ ಸದಸ್ಯ ವಿ.ಎಸ್‌.ಪಾಟೀಲ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ