ಆ್ಯಪ್ನಗರ

ಆಯುರ್ವೇದದಿಂದ ಹಲವು ರೋಗ ಮಾಯ

ಲಕ್ಷ್ಮೇಶ್ವರ : ಆಯುರ್ವೇದ ಔಷಧ ಪುರಾತನ ಕಾಲದಿಂದಲೂ ಬಳಕೆಯಲ್ಲಿದ್ದು, ಗಿಡಮೂಲಿಕೆ ಬಳಸಿ ಔಷಧ ನೀಡುವುದರಿಂದ ಸಾಕಷ್ಟು ಜನರು ಗುಣಮುಖರಾಗಿರುವ ಉದಾಹರಣೆಗಳಿವೆ ಇಂತಹ ಆಯುರ್ವೇದ ಔಷಧ ಮೂಲಕ ಪಟ್ಟಣದ ಕೀರ್ತಿ ಬೆಳಗುವಂತೆ ಮಾಡಿದ ದಿ. ವೈದ್ಯ ಬಾಬುರಾವ್‌ ಕುಲಕರ್ಣಿಯವರ ಸೇವೆ ಸ್ಮರಣೀಯ ಎಂದು ಕರೇವಾಡಿಮಠದ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

Vijaya Karnataka 10 Jun 2019, 5:00 am
ಲಕ್ಷ್ಮೇಶ್ವರ : ಆಯುರ್ವೇದ ಔಷಧ ಪುರಾತನ ಕಾಲದಿಂದಲೂ ಬಳಕೆಯಲ್ಲಿದ್ದು, ಗಿಡಮೂಲಿಕೆ ಬಳಸಿ ಔಷಧ ನೀಡುವುದರಿಂದ ಸಾಕಷ್ಟು ಜನರು ಗುಣಮುಖರಾಗಿರುವ ಉದಾಹರಣೆಗಳಿವೆ ಇಂತಹ ಆಯುರ್ವೇದ ಔಷಧ ಮೂಲಕ ಪಟ್ಟಣದ ಕೀರ್ತಿ ಬೆಳಗುವಂತೆ ಮಾಡಿದ ದಿ. ವೈದ್ಯ ಬಾಬುರಾವ್‌ ಕುಲಕರ್ಣಿಯವರ ಸೇವೆ ಸ್ಮರಣೀಯ ಎಂದು ಕರೇವಾಡಿಮಠದ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
Vijaya Karnataka Web GDG-09LXR01
ಲಕ್ಷ್ಮೇಶ್ವರದಲ್ಲಿ ನಡೆದ ಉಚಿತ ಔಷಧ ವಿತರಣೆ ಕಾರ್ಯಕ್ರಮವನ್ನು ಮಳೆಮಲ್ಲಿಕಾರ್ಜುನ ಶ್ರೀಗಳು ಉದ್ಘಾಟಿಸಿದರು.


ಅವರು ಪಟ್ಟಣದ ಪ್ರಾಥಮಿಕ ಶಾಲೆ ನಂ.1 ರ ಆವರಣದಲ್ಲಿ 55 ನೇ ವರ್ಷದ ಅಸ್ತಮಾ ಯಜ್ಞದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೃಗಶಿರಾ ಮಳೆ ನಕ್ಷ ತ್ರದ ವೇಳೆಗೆ ನೀಡುವ ಅಸ್ತಮಾ ರೋಗಿಗಳಿಗೆ ಉಚಿತ ಔಷಧ ನೀಡುವ ಮೂಲಕ ಲಕ್ಷಾಂತರ ಜನರು ಈ ರೋಗದಿಂದ ವಾಸಿ ಮಾಡಿದ ಕೀರ್ತಿ ಬಾಬುರಾವ ಅವರಿಗೆ ಸಲ್ಲುತ್ತದೆ ಎಂದರು.

ಹುಬ್ಬಳ್ಳಿ ಆಯುರ್ವೇದಿಕ್‌ ಕಾಲೇಜು ಪ್ರಾಚಾರ್ಯ ಡಾ.ಬಿ.ಬಿ.ಜೋಶಿ ಮಾತನಾಡಿ, ಜನರ ನೋವಿಗೆ ಸ್ಪಂದಿಸುವ ಕಾರ್ಯ ಮಾಡುವುದು ಬಹು ಕಠಿಣವಾದ ಕಾರ್ಯ. ಈ ನಿಟ್ಟಿನಲ್ಲಿ ಬಾಬುರಾವ್‌ ಅವರ ಕಾರ್ಯ ಲಕ್ಷ್ಮೇಶ್ವರಕ್ಕೆ ಕೀರ್ತಿ ತಂದಿದೆ. ಯಾವುದೇ ಸ್ವಹಿತಾಸಕ್ತಿ ಇಲ್ಲದೆ ಮಾಡುವ ಸೇವೆಗಳು ಸಮಾಜದ ಒಳಿತಿಗಾಗಿ ನಡೆಯುತ್ತಿದೆ ಎಂದರು.

54 ವರ್ಷಗಳಿಂದ ಉಚಿತವಾಗಿ ಔಷಧವನ್ನು 16 ಗಿಡಮೂಲಿಕೆಗಳು ಹಾಗೂ ರಾಘವೇಂದ್ರಸ್ವಾಮಿಗಳ ಬೃಂದಾವನ ಮೃತ್ತಿಕಾ ಜತೆಗೆ ದನ್ವಂತರಿ ಹೋಮದ ಪ್ರಾರ್ಥನೆಗಳ ಶಕ್ತಿಯಿಂದ ಈ ಔಷಧವನ್ನು ವೈದ್ಯರು ತಯಾರಿಸುತ್ತಿದ್ದರು ಎಂದರು.

ಡಾ.ಎಂ.ಎಸ್‌.ಕೌಲಗುಡ್ಡ , ಡಾ.ಹರೀಶ ಕುಲಕರ್ಣಿ ಮಾತನಾಡಿ, ಔಷಧ ಪಡೆದವರು ಅನುಸರಿಸಬೇಕಾದ ಪಥ್ಯದ ಮಾಹಿತಿ ನೀಡಿದರು. ಶ್ರೀನಿವಾಸ ಕುಲಕರ್ಣಿ(ತಂಗೋಡ)ಅಧ್ಯಕ್ಷ ತೆವಹಿಸಿದ್ದರು. ಎಲ್‌.ಸಿ.ಲಿಂಬಯ್ಯಸ್ವಾಮಿಮಠ, ಎನ್‌.ಕೆ.ಪಡಸಲಗಿ, ಪುರಸಭೆ ಮಾಜಿ ಅಧ್ಯಕ್ಷ ವಿ.ಜಿ.ಪಡಗೇರಿ, ನಿಂಗಪ್ಪ ಬನ್ನಿ, ಗೋಪಾಲ ಪಡ್ನೀಸ್‌, ವಿ.ಎಲ್‌.ಪೂಜಾರ, ಅನಿಲ ಕುಲಕರ್ಣಿ, ನಿಂಗಪ್ಪ ತಹಸೀಲ್ದಾರ ಮುಂತಾದವರಿದ್ದರು. ಕೃಷ್ಣ ಕುಲಕರ್ಣಿ ನಿರೂಪಿಸಿದರು. ಡಿ.ಎಂ.ಪೂಜಾರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ