ಆ್ಯಪ್ನಗರ

ರೋಟರಿಯಿಂದ ಹಲವಾರು ಶ್ಲಾಘನೀಯ ಕಾರ‍್ಯ

ಗದಗ: ರೋಟರಿಯ ವಾಹಿನಿಯಲ್ಲಿಬಂದವರಿಗೆ ರೋಟರಿ ಬದುಕಿನ ಸವಾಲು ಎದುರಿಸುವಿಕೆ, ಬದುಕನ್ನು ಉನ್ನತ್ತೀಕರಣ ಮಾಡುವ ಬಗೆಯನ್ನು ಕಲಿಸುವ ಮೂಲಕ ಸಮಾಜ ಸೇವೆಗೆ ಅಣಿಗೊಳಿಸುತ್ತದೆ ಎಂದು ರೋಟೇರಿಯನ್‌ ಪಿಡಿಜಿ ಡಾ.ರಾಜನ್‌ ದೇಶಪಾಂಡೆ ಅಭಿಪ್ರಾಯಪಟ್ಟರು.

Vijaya Karnataka 6 Dec 2019, 5:00 am
ಗದಗ: ರೋಟರಿಯ ವಾಹಿನಿಯಲ್ಲಿಬಂದವರಿಗೆ ರೋಟರಿ ಬದುಕಿನ ಸವಾಲು ಎದುರಿಸುವಿಕೆ, ಬದುಕನ್ನು ಉನ್ನತ್ತೀಕರಣ ಮಾಡುವ ಬಗೆಯನ್ನು ಕಲಿಸುವ ಮೂಲಕ ಸಮಾಜ ಸೇವೆಗೆ ಅಣಿಗೊಳಿಸುತ್ತದೆ ಎಂದು ರೋಟೇರಿಯನ್‌ ಪಿಡಿಜಿ ಡಾ.ರಾಜನ್‌ ದೇಶಪಾಂಡೆ ಅಭಿಪ್ರಾಯಪಟ್ಟರು.
Vijaya Karnataka Web many commendable work by rotary
ರೋಟರಿಯಿಂದ ಹಲವಾರು ಶ್ಲಾಘನೀಯ ಕಾರ‍್ಯ


ನಗರದ ಉಷಾದೇವಿ ಜಿ.ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್‌ ಸೆಂಟರ್‌ದಲ್ಲಿಗದಗ-ಬೆಟಗೇರಿ ರೋಟರಿ ಕ್ಲಬ್‌ನ ಸುವರ್ಣ ಮಹೋತ್ಸವ ವರ್ಷಾಚರಣೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ರೋಟರಿ ಕ್ಲಬ್‌ ಗದಗ ಪರಿಸರದಲ್ಲಿಹಲವಾರು ಜನಪರ ಕಾರ್ಯಗಳನ್ನು ಮಾಡಿದೆ, ಉಚಿತ ನೇತ್ರ ಚಿಕಿತ್ಸೆಯ ಶಿಬಿರಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವುದಲ್ಲದೆ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ಮಾಹಿತಿಯೊಂದಿಗೆ ಉದ್ಯೋಗ ಅವಕಾಶ ಒದಗಿಸಲು ಕೊಂಡಿಯಾಗಿ ಕಾರ್ಯ ಮಾಡಿದೆ. ವೀರೇಶ್ವರ ಪುಣ್ಯಾಶ್ರಮಕ್ಕೆ ಹಣಕಾಸಿನ ನೆರವು ಒದಗಿಸುವ ಮೂಲಕ ಅಂಧರ ವಸತಿ ನಿಲಯ, ರೋಟರಿ ಐಕೇರ್‌ ಸೆಂಟರ್‌ ಸ್ಥಾಪಿಸಿದೆ. ಉತ್ತರ ಕರ್ನಾಟಕದಲ್ಲಿಯೇ ರೋಟರಿಯಂತಹ ಸಂಸ್ಥೆ ಸ್ವತಂತ್ರ ಕಟ್ಟಡದಲ್ಲಿಜನಮುಖಿಯಾಗಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.

ರೋಟರಿಯಲ್ಲಿವಿವಿಧ ಹುದ್ದೆಗಳಲ್ಲಿದ್ದು ಸಾಧನೆ ಮಾಡಿದವರು ಇಂದು ನಮ್ಮೊಂದಿಗೆ ಇಲ್ಲ. ಆದರೆ ಆ ಹಿರಿಯ ಜೀವಿಗಳು ಜನಪರ, ಸಮಾಜಪರ ಮಾಡಿದ ಕಾರ್ಯ ಎಂದಿಗೂ ಜೀವಂತ ಎಂದರು.

ಡಾ.ರವಿ ಹುಂಜೆ ಮಾತನಾಡಿದರು. ಇದೇ ಸಂದರ್ಭದಲ್ಲಿಡಾ.ರಾಜನ್‌ ದೇಶಪಾಂಡೆ, ಡಾ.ರವಿ ಹುಂಜೆ, ಗುರುಪಾದಪ್ಪ ಹೊಂಗಲ, ಡಾ.ಎ.ಡಿ.ಪಾಟೀಲ, ಡಾ.ಆರ್‌.ಎಸ್‌.ಬಳ್ಳಾರಿ, ಡಾ.ಟಿ.ಡಿ.ಮೇರವಾಡೆ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಸಂಸ್ಥೆಯ ಅಧ್ಯಕ್ಷ ಶಿವಾಚಾರ್ಯ ಹೊಸಳ್ಳಿಮಠ, ವಿ.ಎಸ್‌.ಹೊಸಳ್ಳಿಮಠ, ಡಾ.ಜಿ.ಬಿ.ಪಾಟೀಲ, ವಿಶ್ವನಾಥ ಯಳಮಲಿ, ಶ್ರೀಧರ ಸುಲ್ತಾನಪೂರ, ಡಾ.ಎಸ್‌.ಡಿ.ಸಜ್ಜನರ, ಡಾ.ರಾಜೇಂದ್ರ ಗಚ್ಚಿನಮಠ, ಕಿಶೋರ ರೇವಣಕರ, ನರೇಶ ಜೈನ್‌, ರೋಟರಿ ಕ್ಲಬ್‌, ರೋಟರಿ ಸೆಂಟ್ರಲ್‌, ಪ್ರೋಬಸ್‌ ಕ್ಲಬ್‌, ಇನ್ನರ್‌ವ್ಹೀಲ್‌ ಕ್ಲಬ್‌ ಪದಾಧಿಕಾರಿಗಳು, ಸದಸ್ಯರು, ಗಣ್ಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ