ಆ್ಯಪ್ನಗರ

ಮಾಸ್ಕ್‌ ಶೀಲ್ಡ್‌ ವಿತರಣೆ

ಗದಗ: ಕೊರೊನಾ ವೈರಸ್‌ ಶಂಕಿತ ಪ್ರಕರಣಗಳ ಪರೀಕ್ಷೆ ಹಾಗೂ ಚಿಕಿತ್ಸೆಯಲ್ಲಿನಿರತರಾದ ವೈದ್ಯರು, ನರ್ಸ ಹಾಗೂ ಪ್ಯಾರಾ ಮೆಡಿಕಲ್‌ ಸಿಬ್ಬಂದಿ ಸುರಕ್ಷತೆಗೆ ಗದಗ ನಗರದ ಡಾ. ಸಂಕನೂರ ಆಸ್ಪತ್ರೆಯಿಂದ ತಯಾರಿಸಿದ ಮಾಸ್ಕ್‌ ಶೀಲ್ಡಗಳನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ವಿತರಣೆ ಮಾಡಿದರು.

Vijaya Karnataka 5 Apr 2020, 5:00 am
ಗದಗ: ಕೊರೊನಾ ವೈರಸ್‌ ಶಂಕಿತ ಪ್ರಕರಣಗಳ ಪರೀಕ್ಷೆ ಹಾಗೂ ಚಿಕಿತ್ಸೆಯಲ್ಲಿನಿರತರಾದ ವೈದ್ಯರು, ನರ್ಸ ಹಾಗೂ ಪ್ಯಾರಾ ಮೆಡಿಕಲ್‌ ಸಿಬ್ಬಂದಿ ಸುರಕ್ಷತೆಗೆ ಗದಗ ನಗರದ ಡಾ. ಸಂಕನೂರ ಆಸ್ಪತ್ರೆಯಿಂದ ತಯಾರಿಸಿದ ಮಾಸ್ಕ್‌ ಶೀಲ್ಡಗಳನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ವಿತರಣೆ ಮಾಡಿದರು.
Vijaya Karnataka Web 4SALIM1_25
ಗದಗನಲ್ಲಿವಿಧಾನಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಅವರು ತಮ್ಮ 3 ತಿಂಗಳ ವೇತನ ಹಾಗೂ ವೈಯಕ್ತಿಕ 50 ಸಾವಿರ ರೂ.ಗಳನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸಿದರು.


ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ರೂಪಿಸಿದ ಮಾಸ್ಕ್‌ಶೀಲ್ಡ್‌ಗಳನ್ನು ಸಂಕನೂರ ಆಸ್ಪತ್ರೆಯಿಂದ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.

ಡಾ. ಪ್ರಕಾಶ ಸಂಕನೂರ, ಸಂಕನೂರ ನರ್ಸಿಂಗ್‌ ಅಧೀಕ್ಷಕ ವಿನ್ಸೆಂಟ್‌ ಅವರ ಮಾರ್ಗದರ್ಶನದಲ್ಲಿಆಸ್ಪತ್ರೆ ಸಿಬ್ಬಂದಿಗಳು ಈ ಮಾಸ್ಕ್‌ ತಯಾರಿಸುತ್ತಿದ್ದು, ಸಧ್ಯ 1 ಸಾವಿರ ಮಾಸ್ಕ್‌ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಇದರಿಂದ ಕೊರೊನಾ ಶಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ನರ್ಸಿಂಗ್‌ ಸಿಬ್ಬಂದಿಯ ಸ್ವ ಸುರಕ್ಷತೆ ಸಾಧ್ಯವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಕೊರೊನಾ ಚಿಕಿತ್ಸೆಗಾಗಿ ಗುರುತಿಸಿದ ಜಿಲ್ಲೆಯ ಆಯುಷ ಆಸ್ಪತ್ರೆಯಲ್ಲಿಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗೆ ಎಸ್‌.ವಿ.ಸಂಕನೂರ ಮಾಸ್ಕ್‌ ಶೀಲ್ಡ ವಿತರಿಸಿದರು. ಜಿಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಡದ, ಜಿಮ್ಸ್‌ ನಿರ್ದೇಶಕ ಡಾ. ಪಿ.ಎಸ್‌. ಭೂಸರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಇತರರು ಉಪಸ್ಥಿತರಿದ್ದರು.

50 ಸಾವಿರ ರೂ. ದೇಣಿ :
ವಿಧಾನ ಪರಿಷತ ಸದಸ್ಯ ಎಸ್‌.ವಿ. ಸಂಕನೂರ ಅವರು ಕೊರೊನಾ ವೈರಸ್‌ ತಡೆಗೆ ತಮ್ಮ ಮೂರು ತಿಂಗಳ ವೇತನವನ್ನು ಮುಖ್ಯ ಮಂತ್ರಿಯವರ ಕೊವಿಡ್‌-19 ಪರಿಹಾರ ನಿಧಿಗೆ ಹಾಗೂ ವೈಯಕ್ತಿಕವಾಗಿ 50 ಸಾವಿರ ರೂ. ದೇಣಿಗೆಯನ್ನು ಪ್ರಧಾನ ಮಂತ್ರಿಗಳ ಕೊವಿಡ್‌-19 ರಾಷ್ಟ್ರೀಯ ಪರಿಹಾರ ನಿಧಿಗೆ ಅರ್ಪಿಸಿದರು. ಗದಗ ಜಿಲ್ಲಾಡಳಿತ ಭವನದಲ್ಲಿಜಿಲ್ಲಾಧಿಕಾರಿಗೆ ಚೆಕ್‌ ಹಸ್ತಾಂತರ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ