ಆ್ಯಪ್ನಗರ

ಸಾಮೂಹಿಕ ವಿವಾಹ ಶ್ಲಾಘನೀಯ ಕಾರ‍್ಯ

ರೋಣ : ದೇಶದ ಶೋಷಿತರು ಬೌದ್ಧ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಪರಿವರ್ತನೆಯಲ್ಲಿ ಬದಲಾಗುತ್ತಿರುವುದು ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಕನಸು ನನಸಾಗಿಸುತ್ತಿರುವುದು ಮಹತ್ವದ ಕಾರ್ಯವಾಗಿದೆ ಎಂದು ಸಮತಾ ಸೈನಿಕ ದಳದ ಬೆಳಗಾವಿ ವಿಭಾಗೀಯ ಅಧ್ಯಕ್ಷ ಪಿತ್ರಾಂಬಪ್ಪ ಬಿಳಾರ ಹೇಳಿದರು

Vijaya Karnataka 2 Jun 2019, 5:00 am
ರೋಣ : ದೇಶದ ಶೋಷಿತರು ಬೌದ್ಧ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಪರಿವರ್ತನೆಯಲ್ಲಿ ಬದಲಾಗುತ್ತಿರುವುದು ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಕನಸು ನನಸಾಗಿಸುತ್ತಿರುವುದು ಮಹತ್ವದ ಕಾರ್ಯವಾಗಿದೆ ಎಂದು ಸಮತಾ ಸೈನಿಕ ದಳದ ಬೆಳಗಾವಿ ವಿಭಾಗೀಯ ಅಧ್ಯಕ್ಷ ಪಿತ್ರಾಂಬಪ್ಪ ಬಿಳಾರ ಹೇಳಿದರು
Vijaya Karnataka Web GDG-1 RON 6
ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ಅಂಬೇಡ್ಕರ್‌ ಜಯಂತಿ ಅಂಗವಾಗಿ ಸಾಮೂಹಿಕ ವಿವಾಹ ನಡೆಯಿತು.


ತಾಲೂಕಿನ ಬೆಳವಣಿಕಿ ಗ್ರಾಮದ ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿಮಾನಿ ಬಳಗದ ವತಿಯಿಂದ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ 128ನೇ ಜಯಂತ್ಯುತ್ಸವ ಹಾಗೂ ಬೌದ್ದ ಧರ್ಮದ ಪ್ರಕಾರ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ದಲಿತರನ್ನು ಮೇಲ್ವರ್ಗದವರು ಸಮಾನವಾಗಿ ಕಾಣದೇ ಇರುವುದು ಶೋಚನೀಯ. ಡಾ.ಅಂಬೇಡ್ಕರ್‌ ಹಿಂದೂ ಧರ್ಮ ತೊರೆದು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅವರ ತತ್ವಗಳ ಅಡಿಯಲ್ಲಿ ಇಂದಿನ ಯುವಕರು ಬೌದ್ಧ ಧರ್ಮದ ಪ್ರಕಾರ ಸಾಮೂಹಿಕ ವಿವಾಹ ಹಮ್ಮಿಕೊಂಡು ಸಾಮಾಜಿಕ ಕ್ರಾಂತಿ ಮಾಡಿರುವುದು ಹೆಮ್ಮೆಯ ವಿಷಯ ಎಂದರು

ಅಧ್ಯಕ್ಷ ತೆ ವಹಿಸಿದ್ದ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಎಲ್‌.ನಾರಾಯಣ ಸ್ವಾಮಿ ಮಾತನಾಡಿ, ಬೆಳವಣಿಕಿ ಗ್ರಾಮದ ಯುವಕರು ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ಬುದ್ಧ, ಬಸವ, ಅಂಬೇಡ್ಕರ್‌ ಮಾರ್ಗದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಬುದ್ಧ ಧರ್ಮದ ಪ್ರಕಾರ ಉಚಿತ ಸಾಮೂಹಿಕ ವಿವಾಹ ಮಾಡುತ್ತಿರುವುದು ಸಾಮಾಜಿಕ ಕಳಕಳಿಯ ಜತೆಗೆ ಬಡವರ ಪರವಾದ ಕಾರ್ಯ. ಇಂತಹ ಸಾಮೂಹಿಕ ವಿವಾಹಗಳ ಮೂಲಕ ಬಡವರಿಗೆ ಅನುಕೂಲ ಕಲ್ಪಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು

ಬೌದ್ಧ ಧರ್ಮದ ಪ್ರಕಾರ ಬುದ್ಧ ಬಂತೇಜಿಗಳ ನೇತೃತ್ವದಲ್ಲಿ ಬೌದ್ಧ ಉಪಾಸಕ-ಉಪಾಸಕಿಯರಿಗೆ ವಿವಾಹ ಮಾಡಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರ ಮೆರವಣಿಗೆ ನಡೆಯಿತು.

ರಮೇಶ ಕೊಳೂರ, ಪರಶುರಾಮ್‌ ಕೊಳ್ಳಪ್ಪನವರ, ಸುರೇಶ ಚಲವಾದಿ, ನಾಗಮ್ಮ ಹಾಲಿನವರ, ಪರಶುರಾಮ ಕಾಳೆ, ರವೀಂದ್ರ ಹಿರೇಮಠ, ಎ.ಆರ್‌.ಕಾಳೆ, ಹನಂಂತ ಚಲವಾದಿ, ಮಂಜುನಾಥ ದೊಡ್ಡಮನಿ, ಅಶೋಕ ತಾಳದವರ, ಮುತ್ತು ತಾಳದವರ, ಯಲ್ಲಪ್ಪ ಚಲವಾದಿ, ಈರಪ್ಪ ತಾಳಿ, ಪ್ರಕಾಶ ಸರಕಾರಿ, ಮುತ್ತು ನಂದಿ,ಯಲ್ಲಪ್ಪ ಮೆಣಸಗಿ ಸೇರಿದಂತೆ ಸಂಘದ ಸದಸ್ಯರು, ಮಹಿಳಾ ಸಂಘದ ಪಧಾಧಿಕಾರಿಗಳು ಹಾಜರಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ