ಆ್ಯಪ್ನಗರ

ಹೊಳೆಆಲೂರಿನಲ್ಲಿ ಸಾಮೂಹಿಕ ಪ್ರಾರ್ಥನೆ

ಹೊಳೆಆಲೂರ : ಒಂದು ತಿಂಗಳಿನಿಂದ ಪವಿತ್ರ ರಂಜಾನ ನಿಮಿತ್ತ ಉಪವಾಸ ಮಾಡಿ ಅಲ್ಲಾನನ್ನು ಸ್ಮರಣೆ ಮಾಡಿದ್ದಕ್ಕೆ ಖಂಡಿತವಾಗಿಯೂ ನಮಗೆ ಉತ್ತಮ ಜೀವನ ದೊರೆಯುವುದರಲ್ಲಿ ಸಂದೇಹವಿಲ್ಲ ಎಂದು ಮೌಲಾನಾ ಅಬ್ದುಲ್‌ ಲತೀಫ್‌ ಮನ್ನಾಪೂರ ಹೇಳಿದರು.

Vijaya Karnataka 6 Jun 2019, 5:00 am
ಹೊಳೆಆಲೂರ : ಒಂದು ತಿಂಗಳಿನಿಂದ ಪವಿತ್ರ ರಂಜಾನ ನಿಮಿತ್ತ ಉಪವಾಸ ಮಾಡಿ ಅಲ್ಲಾನನ್ನು ಸ್ಮರಣೆ ಮಾಡಿದ್ದಕ್ಕೆ ಖಂಡಿತವಾಗಿಯೂ ನಮಗೆ ಉತ್ತಮ ಜೀವನ ದೊರೆಯುವುದರಲ್ಲಿ ಸಂದೇಹವಿಲ್ಲ ಎಂದು ಮೌಲಾನಾ ಅಬ್ದುಲ್‌ ಲತೀಫ್‌ ಮನ್ನಾಪೂರ ಹೇಳಿದರು.
Vijaya Karnataka Web GDG-5HLR1
ಹೊಳೆಆಲೂರಿನಲ್ಲಿ ರಂಜಾನ್‌ ಮುಕ್ತಾಯದ ನಿಮಿತ್ತ ಅಮರಗೋಳ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮಾಜದವರು ಪ್ರಾರ್ಥನೆ ಸಲ್ಲಿಸಿದರು.


ಅವರು ಇಲ್ಲಿನ ಅಮರಗೋಳ ರಸ್ತೆಯಲ್ಲಿರುವ ಇದ್ಗಾ ಮೈದಾನದಲ್ಲಿ ಬೆಳಗ್ಗೆ ಊರಿನ ಎಲ್ಲ ಮುಸ್ಲಿಂ ಸಮಾಜದವರು ಪ್ರಾರ್ಥನೆ ಸಲ್ಲಿಸಿದ ನಂತರ ಸೇರಿದ್ದವರಿಗೆ ಧರ್ಮ ಬೋಧನೆ ಮಾಡಿ ಮಾತನಾಡಿದರು. ಫಕ್ರುಸಾಬ್‌ ಚಿಕ್ಕಮಣ್ಣೂರ ಮಾತನಾಡಿದರು. ಹೊಳೆಆಲೂರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ Ü ಮಲ್ಲಿಕಾರ್ಜುನ ಕೋಳೇರಿ, ಮಹಾಬಳೇಶ್ವರ ಗಾಣಿಗೇರ, ಪ್ರವೀಣ ಜಡಮಳಿ, ಪ್ರಕಾಶ ಭಜಂತ್ರಿ ಈದ್ಗಾ ಮೈದಾನಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ