ಆ್ಯಪ್ನಗರ

ಬೆಟಗೇರಿಯಲ್ಲಿ ನೇಕಾರ ಕಾರ್ಮಿಕರ ಸಭೆ

ಗದಗ : ಬೆಟಗೇರಿಯಲ್ಲಿ ನಡೆದ ನೇಕಾರ ಕಾರ್ಮಿಕರ ಸಂಘದ ಕಾರ್ಯಕ್ರಮ ನಡೆಯಿತು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಶಾಸ ಕ ಎಚ್‌.ಕೆ. ಪಾಟೀಲ್‌ ಮಾತನಾಡಿ, ರಾಜ್ಯದ ನೇಕಾರರು ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮವನ್ನು ಕಾಂಗ್ರೆಸ್‌ ಕೈಗೊಂಡಿದೆ ಎಂದರು.

Vijaya Karnataka 22 Apr 2019, 5:00 am
ಗದಗ : ಬೆಟಗೇರಿಯಲ್ಲಿ ನಡೆದ ನೇಕಾರ ಕಾರ್ಮಿಕರ ಸಂಘದ ಕಾರ್ಯಕ್ರಮ ನಡೆಯಿತು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಶಾಸ ಕ ಎಚ್‌.ಕೆ. ಪಾಟೀಲ್‌ ಮಾತನಾಡಿ, ರಾಜ್ಯದ ನೇಕಾರರು ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮವನ್ನು ಕಾಂಗ್ರೆಸ್‌ ಕೈಗೊಂಡಿದೆ ಎಂದರು.
Vijaya Karnataka Web GDG-21RUDRAGOUD4
ಬೆಟಗೇರಿಯಲ್ಲಿ ನಡೆದ ನೇಕಾರ ಕಾರ್ಮಿಕರ ಸಂಘದ ಕಾರ್ಯಕ್ರಮದಲ್ಲಿ ಶಾಸ ಕ ಎಚ್‌.ಕೆ. ಪಾಟೀಲ್‌ ಮಾತನಾಡಿದರು.


ದೇಶದ ಬಡಜನತೆಯ ಅಭಿವೃದ್ಧಿಗೆ ಕಾಂಗ್ರೆಸ್‌ ಅಮೂಲ್ಯ ಕೊಡುಗೆ ನೀಡಿದೆ. ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಯಕ್ರಮ ಹಮ್ಮಿಕೊಂಡು ಅದನ್ನು ಅನುಷ್ಠಾನಗೊಳಿಸಿದ ಖ್ಯಾತಿ ಕಾಂಗ್ರೆಸ್‌ ಪಕ್ಷ ದ್ದು.

ಅಸಂಘಟಿತ ನೇಕಾರರು ಈಗಲೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ .ಹಾವೇರಿಸ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಆರ್‌. ಪಾಟೀಲ್‌ ಅವರನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್‌ ಕೈ ಬಲಪಡಿಸುವಂತೆ ಮನವಿ ಮಾಡಿದರು.

ರೈಲ್ವೆ ಇಲಾಖೆ ವಿವಿಧ ಭಾಗಗಳು:

ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ರೈಲ್ವೆ ಕ್ವಾಟರ್ಸ್‌, ರೈಲ್ವೆ ಇಲಾಖೆ ವಿವಿಧ ವಿಭಾಗಗಳಾದ ರೈಲ್ವೆ ಆಸ್ಪತ್ರೆ, ಪಿಡಬ್ಲೂ ಆಫೀಸ್‌, ಐ. ಡಬ್ಲೂ, ಆಫೀಸ್‌, ಇಲೆಕ್ಟ್ರೀಕಲ್‌ ಆಫೀಸ್‌, ಎ.ಎನ್‌.ಆಫೀಸ್‌ ಮುಂತಾದ ಕಾರ್ಯಾಲಯಕ್ಕೆ ಭೇಟಿ ನೀಡಿ ಕಾಂಗ್ರೆಸ ಮುಖಂಡರು ಪ್ರಚಾರ ನಡೆಸಿದರು.

ಹನಮಂತಪ್ಪ ವಿರಾಪೂರ, ಸುರೇಶ ಗರಗ, ಆರ್‌. ಟಿ. ಹಡಗಲಿ, ಎಂ. ಜೇಮ್ಸ್‌, ಚಲವಾದಿ, ಮೈಯುದ್ದೀನಸಾಬ ವಾಲಿಕಾರಿ, ಜೆ. ಎಲ್‌. ಪ್ರಸಾದ, ಎಲ್‌. ಆರ್‌. ಕರಡಿ, ಸಯ್ಯದ ರಾಣೆಬೆನ್ನೂರ, ಕೆ. ನಾಗಪ್ಪ, ಹುಬಳಿಕರ, ಎಚ್‌. ಆಶೀರ್ವಾದಂ, ಟಿ.ವೈ. ಗೌಡರ, ಕುಬೇರಪ್ಪ ನಾಂದು ಜಗದಾಳೆ, ಪಿ. ವೈ. ಗೌಡರ, ವಾಲಿಕಾರ, ಚಿದಾಪುರ ಫ್ರಾನ್ಸಿಸ್‌, ಪರಶುರಾಮ ಗುಂಡಕಲ್ಲ, ನಾಯ್ಡು, ಬಸವರಾಜ ಮಾರ್ಗರೇಟ್‌ ಆಯ್‌. ಜೊಸೇಫ, ಪರಶುರಾಮ ದೊಡ್ಡಮನಿ, ಸುಮಾ ಗರಗ, ಅಬ್ದುಲ್‌ ಅವಸಂಗವಾಲೆ, ಬಸನಗೌಡ ಗುಳಪ್ಪನವರ, ರವಿ ತಮ್ಮನಗೌಡರ, ಮುತ್ತಣ್ಣ ಕಣದಾಳ ಇದ್ದರು.

ಮತಯಾಚನೆ :

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷ ದ ಅಭ್ಯರ್ಥಿ ಡಿ.ಆರ್‌. ಪಾಟೀಲ ಅವರ ಪರವಾಗಿ ಸಚಿನ್‌ ಡಿ. ಪಾಟೀಲ ಅವರು ನಗರದಲ್ಲಿ ಮನೆ-ಮನೆಗೆ ತೆರಳಿ ಮತಯಾಚಿಸಿ ಅವರು ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ