ಆ್ಯಪ್ನಗರ

ಭೂಮಿ ಹದಗೊಳಿಸುವತ್ತ ಚಿತ್ತ

ಮುಳಗುಂದ : ಮಳೆಗಾಲ ಆರಂಭವಾಗುವ ಮುನ್ನವೇ ರೈತರು ಭೂಮಿಯನ್ನು ಹದಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ. ನೇಗಿಲು ಹಿಡಿದು ನಿಸರ್ಗದ ಜತೆ ಬೆರೆಯುತ್ತ ಕಾಯಕ ಮಾಡಲು ರೈತ ಮುಂದಾಗಿದ್ದಾನೆ.

Vijaya Karnataka 16 May 2019, 5:00 am
ಮುಳಗುಂದ : ಮಳೆಗಾಲ ಆರಂಭವಾಗುವ ಮುನ್ನವೇ ರೈತರು ಭೂಮಿಯನ್ನು ಹದಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ. ನೇಗಿಲು ಹಿಡಿದು ನಿಸರ್ಗದ ಜತೆ ಬೆರೆಯುತ್ತ ಕಾಯಕ ಮಾಡಲು ರೈತ ಮುಂದಾಗಿದ್ದಾನೆ.
Vijaya Karnataka Web mind the land
ಭೂಮಿ ಹದಗೊಳಿಸುವತ್ತ ಚಿತ್ತ


ಬರಗಾಲದಿಂದ ಬರಡು ಭೂಮಿಯಂತಾಗಿರುವ ಭೂಮಿಯಲ್ಲಿ ಮತ್ತೆ ಹಸಿರು ಬೆಳೆದು ರೈತರ ಕಷ್ಟ ಕಾರ್ಪಣ್ಯ ದೂರವಾಗಬಹುದು ಎಂಬ ನಿರೀಕ್ಷೆಯಲ್ಲಿ ಭೂತಾಯಿಯ ಮಗ ರೈತ ಕೃಷಿಯತ್ತ ಮತ್ತೆ ಮುಖ ಮಾಡಿದ್ದಾನೆ. ಮೂರು ವರ್ಷಗಳಿಂದ ಮುಂಗಾರು ಮಳೆ ಆದರೆ ಹಿಂಗಾರು ಮಳೆ ಬರಲಿಲ್ಲ. ಮತ್ತೆ ಹಿಂಗಾರು ಮಳೆ ಆದರೆ ಮರು ವರ್ಷ ಮುಂಗಾರು ಮಳೆಯಾಗದೆ ರೈತರ ಜತೆ ವರುಣ ಕಣ್ಣಾ ಮುಚ್ಚಾಲೆ ಆಡುತ್ತಿದ್ದ. ಈ ವರ್ಷವಾದರೂ ಸಂಪೂರ್ಣ ಮಳೆಯಾಗಿ ರೈತರ ಬದುಕು ಹಸನಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಭೂಮಿಯನ್ನು ಹದಗೊಳಿಸುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಪಟ್ಟಣದ ಸುತ್ತಮುತ್ತ ಗ್ರಾಮಗಳಲ್ಲಿ ಅಲ್ಪ-ಸ್ವಲ್ಪ ಮಳೆಯಾಗಿದ್ದು ಬಿಟ್ಟರೆ ಬರಿ ಮೋಡ,ಗಾಳಿ, ಅತಿಯಾದ ಬಿಸಿಲು ನೋಡಿದರೆ ಈ ವರ್ಷವೂ ಮಳೆಯ ಮುನ್ಸೂಚನೆ ಕಾಣುತ್ತಿಲ್ಲ ಎಂದು ರೈತರು ಚಿಂತಿಸುತ್ತಿದ್ದಾರೆ.

ಬಿತ್ತನೆ ಕಾರ್ಯಕ್ಕೂ ಮೊದಲು ಭೂಮಿಯನ್ನು ಹಸನುಗೊಳಿಸುವ ಕಾಯಕದಲ್ಲಿ ರೈತರು ನಿರತರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರೈತರ ಬದುಕು ಹಸನಾಗದಿದ್ದರೂ ಸಹಿತ ಮೇ ತಿಂಗಳಿನಲ್ಲಿ ಹೊಸ ಉತ್ಸಾಹ, ಮಳೆ ಬರುವ ನಿರೀಕ್ಷೆಯೊಂದಿಗೆ, ಬೆವರು ಹರಿಸಲು ಅನ್ನದಾತ ಮುಂದಾಗಿ, ಹೊಲಗಳನ್ನು ಹದಗೊಳಿಸುತ್ತಿದ್ದಾರೆ.

ನೀಲಗುಂದ, ಚಿಂಚಲಿ, ಕಲ್ಲೂರ, ಮುಳಗುಂದ, ಹರ್ತಿ, ಹೊಸೂರ, ಶಿರುಂದ, ಸೊರಟೂರ ಗ್ರಾಮದ ರೈತರು ಮುಂಗಾರು ಬಿತ್ತನೆ ಕಾರ್ಯ ಮಾಡಲು ರೈತರು ಭೂಮಿಯನ್ನು ಹರಗುವುದು, ಕಸ ಕಂಟಿ ಆರಿಸುವುದು, ಕೊಟ್ಟಗೆ ಗೊಬ್ಬರವನ್ನು ಹೊಲದಲ್ಲಿ ಹರಡಿ ಭೂಮಿಯನ್ನು ಬಿತ್ತಲು ಸಜ್ಜುಗೊಳಿಸುತ್ತಿದ್ದಾರೆ.

ಟ್ರ್ಯಾಕ್ಟರ್‌ಗಳೇ ಹೆಚ್ಚು :

ಸತತ ಬರಗಾಲದಿಂದ ಎತ್ತುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಸರಿಯಾಗಿ ಮಳೆಯಾದರೆ ಜಾನುವಾರುಗಳಿಗೆ ಮೇವು,ಹೊಟ್ಟು ದೋರೆಯುತ್ತದೆ. ಆದರೆ ಮಳೆಗಾಲ ಸರಿಯಾಗಿ ಇಲ್ಲದಿರುವುದರಿಂದ ಜಾನುವಾರುಗಳನ್ನು ಸಾಕುವುದು ತುಂಬಾ ಕಷ್ಟವಾಗುತ್ತಿದೆ ಎಂಬುದು ರೈತರ ಅಳಲು. ವಾಣಿಜ್ಯ ಬೆಳೆಗಳಿಗೆ ಮಾರು ಹೋಗಿ ರೈತರು ತಮ್ಮ ಎತ್ತುಗಳಿಗೆ ಹೊಟ್ಟು ಮೇವು ಇಲ್ಲದೇ ಜಾನುವಾರುಗಳನ್ನು ಮಾರಿ ಟ್ರ್ಯಾಕ್ಟರ್‌ಗಳಿಗೆ ಮಾರುಹೊಗಿದ್ದು ಇದರಿಂದ ಕೊಟ್ಟಿಗೆ ಗೊಬ್ಬರ ಸಿಗುವುದೇ ದುಸ್ಥರವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ