ಆ್ಯಪ್ನಗರ

ಮರವೇರಿ ಕುಳಿತ ಅಪ್ರಾಪ್ತ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ?

ಅಪ್ರಾಪ್ತ ಬಾಲಕನೊಬ್ಬ (16 ವರ್ಷ) ತನಗೆ ಯಾವುದೇ ಕೆಲಸ ಹೇಳಬಾರದು, ಹೊಸ ಬಟ್ಟೆ ತಂದುಕೊಡಬೇಕೆಂದು ವಿಚಿತ್ರ ಬೇಡಿಕೆಗಳನ್ನಿಟ್ಟು ಮರವೇರಿ ಕುಳಿತು ಕುಟುಂಬಸ್ಥರು ಹಾಗೂ ಸ್ಥಳೀಯರನ್ನು ಆತಂಕಕ್ಕೆ ಸಿಲುಕಿಸಿದ ಘಟನೆ ಮಂಗಳವಾರ ನಡೆದಿದೆ.

Vijaya Karnataka Web 21 Nov 2017, 4:02 pm
ಗದಗ: ಅಪ್ರಾಪ್ತ ಬಾಲಕನೊಬ್ಬ (16 ವರ್ಷ) ತನಗೆ ಯಾವುದೇ ಕೆಲಸ ಹೇಳಬಾರದು, ಹೊಸ ಬಟ್ಟೆ ತಂದುಕೊಡಬೇಕೆಂದು ವಿಚಿತ್ರ ಬೇಡಿಕೆಗಳನ್ನಿಟ್ಟು ಮರವೇರಿ ಕುಳಿತು ಕುಟುಂಬಸ್ಥರು ಹಾಗೂ ಸ್ಥಳೀಯರನ್ನು ಆತಂಕಕ್ಕೆ ಸಿಲುಕಿಸಿದ ಘಟನೆ ಮಂಗಳವಾರ ನಡೆದಿದೆ.
Vijaya Karnataka Web minor boy protest against his family
ಮರವೇರಿ ಕುಳಿತ ಅಪ್ರಾಪ್ತ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ?


ಬಾಲಕ ಗ್ರಾಮದ ವಿರುಪಾಕ್ಷೇಶ್ವರ ದೇವಾಲಯದ ಸಮೀಪದ ದೊಡ್ಡ ಆಲದ ಮರ ಏರಿ ಕುಳಿತಿದ್ದ. ಮನೆಯಲ್ಲಿ ಯಾರು ಕೂಡ ನನಗೆ ಕೆಲಸ ಹೇಳಬಾರದು, ಐಫೋಡ್ ಕೊಡಿಸಬೇಕು, ಬೇಡಿದ ವಸ್ತುಗಳು ಹಾಗೂ ಹೊಸ ಬಟ್ಟೆಗಳನ್ನ ಕೊಡಿಸಬೇಕು ಎಂದು ಬೇಡಿಕೆಗಳನ್ನು ಮುಂದಿಟ್ಟಿದ್ದ.

ಹೀಗೆ ಮರವೇರಿ ಕುಳಿತ ಬಾಲಕನ ಮನವೊಲಿಸಿ ಕೆಳಗಿಳಿಸಲು ಪೋಷಕರು, ಸ್ಥಳೀಯರು ಹರಸಾಹಸ ಪಟ್ಟರು. ಆದರೆ, ಅದಕ್ಕೆ ಬಾಲಕ ಒಪ್ಪದೇ ಒಂದೆರಡು ಗಂಟೆ ಮರದಲ್ಲಿಯೇ ಕುಳಿತಿದ್ದ. ಪಾಲಕರು ಆತನ ಬೇಡಿಕೆ ಈಡೇರಿಸುವುದಾಗಿ ಒಪ್ಪಿಕೊಂಡ ನಂತರವೇ ಆತ ಕೆಳಗೆ ಇಳಿದಿದ್ದಾನೆ.

ಬಾಲಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಕಳೆದ ಕೆಲವು ದಿನಗಳಿಂದ ಹೀಗೆ ವರ್ತಿಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ