ಆ್ಯಪ್ನಗರ

ಭ್ರಷ್ಟಾಚಾರ ತಡೆಯಲು ಮತ್ತೊಮ್ಮೆ ಮೋದಿ ಗೆಲ್ಲಿಸಿ

ಲಕ್ಕುಂಡಿ: ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಭ್ರಷ್ಟಾಚಾರದ ಬೇರು ಕೊನೆಯಾಗಲು ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು ಎಂದು ಇಡೀ ದೇಶವೇ ಆಶಿಸುತ್ತಿದೆ ಎಂದು ಬಾಗಲಕೋಟ ಲೋಕಸಭಾ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅಭಿಪ್ರಾಯಪಟ್ಟರು.

Vijaya Karnataka 19 Apr 2019, 5:00 am
ಲಕ್ಕುಂಡಿ: ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಭ್ರಷ್ಟಾಚಾರದ ಬೇರು ಕೊನೆಯಾಗಲು ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು ಎಂದು ಇಡೀ ದೇಶವೇ ಆಶಿಸುತ್ತಿದೆ ಎಂದು ಬಾಗಲಕೋಟ ಲೋಕಸಭಾ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅಭಿಪ್ರಾಯಪಟ್ಟರು.
Vijaya Karnataka Web modi once again to stop corruption
ಭ್ರಷ್ಟಾಚಾರ ತಡೆಯಲು ಮತ್ತೊಮ್ಮೆ ಮೋದಿ ಗೆಲ್ಲಿಸಿ


ಇಲ್ಲಿಯ ವಿವಿಧ ವಾರ್ಡ್‌ಗಳಲ್ಲಿ ಮನೆ ಮನೆ ಮತಯಾಚನೆ ನಂತರ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ತಡೆಯಲು, ನೋಟ್‌ ಬ್ಯಾನ್‌, ಜಿ.ಎಸ್‌.ಟಿ, ಮತ್ತು ಸೊನ್ನೆ ಖಾತೆ ತೆರೆಯುವುದು, ಆಧಾರ ಜೋಡಣೆಯಂತಹ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಕೇವಲ ಆಧಾರ ಜೋಡಣೆಯಿಂದಲೇ ಸರಕಾರದ ಹಲವಾರು ಯೋಜನೆಗಳು ಮಧ್ಯವರ್ತಿಗಳ ಪಾಲಾಗುತ್ತಿರುವುದು ತಪ್ಪುತ್ತಿದೆ. ಪ್ರತಿಯೊಂದು ಯೋಜನೆಯು ಫಲಾನುಭವಿ ಖಾತೆಗೆ ಜಮಾ ಆಗುತ್ತಿದ್ದು ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ ಎಂದರು.

ಉಗ್ರವಾದವನ್ನು ತಡೆಯಲು ಹಲವಾರು ತಂತ್ರಗಳನ್ನು ಅಳವಡಿಸಿಕೊಳ್ಳಲು ಸೈನಿಕರಿಗೆ ಸಂಪೂರ್ಣ ಅಧಿಕಾರ ನೀಡಿದ ಮೋದಿಯವರು ಭಾರತದ ಭದ್ರತೆಗೆ ಕೋಟಿ ಕೋಟಿ ಹಣವನ್ನು ಮಂಜೂರು ಮಾಡಿದ್ದು ವಿಶ್ವದ ನಾಯಕರಾಗಿ ಹೊಮ್ಮಿದ್ದಾರೆ ಎಂದರು.

ನನ್ನ ಕ್ಷೇತ್ರ ನನ್ನ ಕಾರ್ಯ: ಕೇವಲ ಮೋದಿ ಅವರ ಹೆಸರು ಹೇಳಿಕೊಂಡು ಮತಯಾಚನೆ ಮಾಡುತ್ತಿದ್ದಾರೆ ಎಂದು ಹೇಳುವ ಕಾಂಗ್ರೆಸ್ಸಿಗರಿಗೆ ನಾನು ಮಾಡಿದ ಅಭಿವೃದ್ಧಿ ಕಾಮಗಾರಿಗಳು ಮತ್ತು ಮೋದಿಯವರ ಯೋಜನೆಯನ್ನು ಸಾಕರಗೊಳಿಸಿರುವ ನನ್ನ ಕ್ಷೇತ್ರ- ನನ್ನ ಕಾರ್ಯ ಎಂಬ ಪುಸ್ತಕ ಪ್ರಕಟಿಸಿದ್ದು ಅದನ್ನು ಪರಿಶೀಲಿಸಬಹುದು. ಇದರಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿಯ ಪಾರಂಪರಿಕ ತಾಣಗಳಾದ ಬದಾಮಿ, ಪಟ್ಟದಕಲ್ಲು, ಐಹೊಳೆ, ಶಿವಯೋಗ ಮಂದಿರ, ಬನಶಂಕರಿ, ಹಳ್ಳೂರು, ಬೇವೂರು, ಚೋಳಚಗುಡ್ಡ ಹಾಗೂ ಲಕ್ಕುಂಡಿಗೆ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿ ಕಾಮಗಾರಿಗಳಿಗಾಗಿ ಪರಾತತ್ವ ಇಲಾಖೆಯಿಂದ 675.78 ಲಕ್ಷ ರೂ, ಗಳನ್ನು ಮಂಜೂರಿ ಮಾಡಲಾಗಿದೆ. ಇದರಲ್ಲಿ ಲಕ್ಕುಂಡಿಗೆ 2 ಕೋಟಿ ನೀಡಲಾಗಿದೆ ಎಂದರು.

ಎಸ್‌.ಬಿ.ಕಲಕೇರಿ, ಅಂದಪ್ಪ ತಿಮ್ಮಾಪೂರ, ಡಿ.ವಿ.ಜೋಶಿ, ಅಜ್ಜಪ್ಪಗೌಡ ಪಾಟೀಲ, ಮಹೇಶ ಮುಸ್ಕಿನಬಾವಿ, ಪ್ರೇಮಾ ಮಟ್ಟಿ, ಮಹಮ್ಮದರಫಿಕ್‌ ಹುಬ್ಬಳ್ಳಿ, ಪ್ರಕಾಶ ಅರಹುಣಶಿ, ಅಂಬರೀಶ ಕರೆಕಲ್ಲ. ಮರಿಯಪ್ಪ ವಡ್ಡರ, ವಿರುಪಾಕ್ಷಿ ಬೆಟಗೇರಿ,ಈರಪ್ಪ ಬಂಡಿ, ಸುರೇಶ ಕವಲೂರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ