ಆ್ಯಪ್ನಗರ

ಪಿಎಫ್‌ಐನಿಂದ ಹಣ ಶುದ್ಧ ಸುಳ್ಳು : ಸಿದ್ದರಾಮಯ್ಯ

ಮುಂಡರಗಿ (ಗದಗ): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಕ್ಕೆ ಪಿಎಫ್‌ಐ ಸಂಘಟನೆಯಿಂದ ಹಣ ಪೂರೈಕೆಯಾಗುತ್ತಿದೆ ಎನ್ನುವುದು ಶುದ್ಧ ಸುಳ್ಳು. ಈ ಬಗ್ಗೆ ಕೆಲವರು ತಮಗೆ ತಿಳಿದಂತೆ ಹೇಳುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.

Vijaya Karnataka 28 Jan 2020, 4:47 pm
ಮುಂಡರಗಿ (ಗದಗ): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಕ್ಕೆ ಪಿಎಫ್‌ಐ ಸಂಘಟನೆಯಿಂದ ಹಣ ಪೂರೈಕೆಯಾಗುತ್ತಿದೆ ಎನ್ನುವುದು ಶುದ್ಧ ಸುಳ್ಳು. ಈ ಬಗ್ಗೆ ಕೆಲವರು ತಮಗೆ ತಿಳಿದಂತೆ ಹೇಳುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
Vijaya Karnataka Web money from pfi is pure lie siddaramaiah
ಪಿಎಫ್‌ಐನಿಂದ ಹಣ ಶುದ್ಧ ಸುಳ್ಳು : ಸಿದ್ದರಾಮಯ್ಯ


ಸೋಮವಾರ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿಪಾಲ್ಗೊಳ್ಳುವ ಮೊದಲು ಸುದ್ದಿಗಾರರ ಜತೆ ಅವರು ಮಾತನಾಡಿದರು.

''ಪೌರತ್ವ ಕಾಯ್ದೆಯನ್ನು ಕೇವಲ ಮುಸ್ಲಿಂ ಜನಾಂಗ ವಿರೋಧಿಸುತ್ತಿಲ್ಲ. ಅಲೆಮಾರಿಗಳು, ದಲಿತರು, ಕಾಡುಜನರು ಕೂಡಾ ವಿರೋಧಿಸುತ್ತಿದ್ದಾರೆ. ಸಂವಿಧಾನದ ಆಶಯದಂತೆ ಪೌರತ್ವ ನೀಡಬೇಕು. ಇದನ್ನು ಬಿಟ್ಟು ಜಾತಿ, ಧರ್ಮದ ಮೇಲೆ ಕಾನೂನು ಜಾರಿಗೊಳಿಸಲು ಹೊರಟಿರುವುದು ಸಂವಿಧಾನಕ್ಕೆ ಅಪಚಾರ ಮಾಡಿದಂತೆ. ವಿವೇಚನೆ ಇಲ್ಲದ ಕಾನೂನುಗಳ ಜಾರಿಯಿಂದ ದೇಶ ನಾಶವಾಗುತ್ತದೆ'' ಎಂದರು.

ಖಜಾನೆ ಖಾಲಿ:
''ಸರಕಾರದ ಖಜಾನೆ ಖಾಲಿಯಾಗಿದೆ. ಮಾರ್ಚ್ನಲ್ಲಿಸರಕಾರ ಬಜೆಟ್‌ ಹೇಗೆ ಮಂಡಿಸುತ್ತದೆ. ಮಾಯಾಮಂತ್ರ ಮಾಡಲಾಗುತ್ತೆಯೇ? ಜನರ ತೆರಿಗೆ ಹಣ ಸಂಗ್ರಹಿಸಿದರೂ ಉತ್ತಮ ಆಡಳಿತ ನೀಡದ ಸರಕಾರ ಜನಪರ ಸರಕಾರ ಹೇಗೆ ಆಗುತ್ತದೆ. ಕೇಂದ್ರ ಸರಕಾರ ರಾಜ್ಯಕ್ಕೆ ಕೊಡಬೇಕಾದ 2 ಲಕ್ಷ ಕೋಟಿ ಹಣ ಕೊಡಲಿಲ್ಲ. ಅಲ್ಲಿಯೂ ಹಣ ಇಲ್ಲ'' ಎಂದು ತಿಳಿಸಿದರು.

ಹಿಂದಿನ ಸರಕಾರ ಖಜಾನೆ ಖಾಲಿ ಮಾಡಿ ಹೋಗಿದೆಯಂತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ''ಹಾಗಾದರೆ ನಾನು ಜನಪರ ಕೆಲಸ ಮಾಡಲಿಲ್ಲವೆ'' ಎಂದರು.

''ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ ಕೊಡಬೇಕೆಂಬ ಬಗ್ಗೆ ಹೈಕಮಾಂಡ್‌ ನಿರ್ಧರಿಸುತ್ತಿದೆ. ಮೂಲ, ವಲಸೆ ಕಾಂಗ್ರೆಸ್ಸಿಗರು ಎಂಬುದಿಲ್ಲ. ಇದು ಮಾಧ್ಯಮದವರು ಸೃಷ್ಟಿ'' ಎಂದು ಸಿಡುಕಿನಿಂದ ಉತ್ತರಿಸಿದರು.

ಎಂಟಿಬಿ ನಾಗರಾಜ ಅವರಿಗೆ ಸಚಿವ ಸ್ಥಾನ ಸಿಗುತ್ತದೆಯೇ ಎಂಬ ಪ್ರಶ್ನೆಗೆ, ''ಸೋತವರಿಗೆ ಸಚಿವ ಸ್ಥಾನ ಕೊಡುತ್ತಾರೇನ್ರಿ.. ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಿಗೆ ದ್ರೋಹ ಮಾಡಿ ಹೋದವರಿಗೆ ಸಚಿವ ಸ್ಥಾನ ಸಿಗುವುದಿಲ್ಲ'' ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.

ಈ ಸಂದರ್ಭ ಶಾಸಕ ಎಚ್‌.ಕೆ.ಪಾಟೀಲ, ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ಜಿ.ಎಸ್‌.ಪಾಟೀಲ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್‌್ಕ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ