ಆ್ಯಪ್ನಗರ

ಹಿಂಗಾರಿ ಬೆಳೆ ಸ್ಥಿತಿಗತಿ ಪರಿಶೀಲಿಸಿಲನೆ

ಕೊಣ್ಣೂರ: ನರಗುಂದ ತಾಲೂಕಿನಲ್ಲಿಬೆಳೆದ ಹಿಂಗಾರಿ ಬೆಳೆಗಳಲ್ಲಿಕೀಟ ಮತ್ತು ರೋಗ ಬಾಧೆಗಳು ಉಂಟಾಗಿದ್ದು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ನಾನಾ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಸ್ಥಿತಿಗತಿ ಪರಿಶೀಲಿಸಿದರು. ಇಲಾಖೆಯ ಕ್ಷೇತ್ರ ಸಿಬ್ಬಂದಿಯೊಂದಿಗೆ ಜಮೀನುಗಳಿಗೆ ತೆರಳಿ ಬೆಳೆ ನಷ್ಟದ ಅಂದಾಜು ಮಾಡಿದ್ದಲ್ಲದೆ

Vijaya Karnataka 16 Feb 2020, 5:00 am
ಕೊಣ್ಣೂರ: ನರಗುಂದ ತಾಲೂಕಿನಲ್ಲಿಬೆಳೆದ ಹಿಂಗಾರಿ ಬೆಳೆಗಳಲ್ಲಿಕೀಟ ಮತ್ತು ರೋಗ ಬಾಧೆಗಳು ಉಂಟಾಗಿದ್ದು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ನಾನಾ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಸ್ಥಿತಿಗತಿ ಪರಿಶೀಲಿಸಿದರು. ಇಲಾಖೆಯ ಕ್ಷೇತ್ರ ಸಿಬ್ಬಂದಿಯೊಂದಿಗೆ ಜಮೀನುಗಳಿಗೆ ತೆರಳಿ ಬೆಳೆ ನಷ್ಟದ ಅಂದಾಜು ಮಾಡಿದ್ದಲ್ಲದೆ ಅವಶ್ಯಕ ಸಸ್ಯ ಸಂರಕ್ಷಣಾ ಕ್ರಮ ಶಿಫಾರಸ್ಸು ಮಾಡಿದರು. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿಸಸ್ಯ ಸಂರಕ್ಷಣೆಗೆ ಬೇಕಾದ ಸಾಕಷ್ಟು ಔಷಧಿಗಳನ್ನು ದಾಸ್ತಾನು ಮಾಡಲಾಗಿದೆಯಂದು ತಿಳಿಸಿದರು. ತಾಲೂಕಿನಲ್ಲಿ21000 ಹೆಕ್ಟೇರ್‌ ಕಡಲೆ, 7000 ಹೆಕ್ಟೇರ್‌ ಗೋಧಿ, 7100 ಹೆಕ್ಟೇರ್‌ ಜೋಳ 200 ಹೆಕ್ಟೇರ್‌ ಸೂರ್ಯಕಾಂತಿ ಮತ್ತು 400 ಹೆಕ್ಟೇರ್‌ ಕುಸುಬೆ ಬೆಳೆ¿åಲಾಗಿದೆ. ಕಡಲೆಯಲ್ಲಿಶೇ.75 ರಷ್ಟು ಕುಂಕುಮ ರೋಗದ ಬಾಧೆ ಕಂಡು ಬಂದಿದೆ. ಶೇ.80-90 ಗೋಧಿ ಬೆಳೆಯಲ್ಲಿಭಂಡಾರ ರೋಗದ ಬಾಧೆ ಕಂಡುಬಂದಿದೆ. ಇದರೊಂದಿಗೆ ಸೂರ್ಯಕಾಂತಿಯಲ್ಲಿತುಕ್ಕು ರೋಗವು ಕಂಡು ಬಂದಿದ್ದು ಶಿಲೀಂದ್ರನಾಶಕ ಸಿಂಪರಣೆ ಮಾಡಲು ಈಗಾಗಲೇ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ ಸಿಬ್ಬಂದಿ ಸಂಪರ್ಕಿಸಲು ತಿಳಿಸಲಾಗಿದೆ.
Vijaya Karnataka Web monitor the status of hingari crop
ಹಿಂಗಾರಿ ಬೆಳೆ ಸ್ಥಿತಿಗತಿ ಪರಿಶೀಲಿಸಿಲನೆ


ಸಹಾಯಕ ಕೃಷಿ ನಿರ್ದೇಶಕರು ಹಾಗೂ ಇಲಾಖೆಯ ಸಿಬ್ಬಂದಿ ಹದಲಿ, ಗಂಗಾಪೂರ, ರಡ್ಡೇರನಾಗನೂರ, ಶಿರೋಳ, ಕಪ್ಪಲಿ, ಕಲ್ಲಾಪೂರ ಗ್ರಾಮದ ಕ್ಷೇತ್ರಗಳಲ್ಲಿಭೇಟಿ ನೀಡಿದ್ದರು. ಬಸವಂತಪ್ಪ ಸುಂಕದ, ಈರಪ್ಪ ಸಜ್ಜನ, ಬಸವರಾಜ ಅಬ್ಬಿಗೇರಿ, ಗ್ರಾಪಂ ಸದಸ್ಯರಾದ ಮಾರುತಿ ಯಾದವ, ಶಾಂತವ್ವ ಹಿರೇಮಠ, ಶಿವಾನಂದ ಸಣಕಲ್‌ ಮುಂತಾದವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ