ಆ್ಯಪ್ನಗರ

ಸಾವಿನ ಮನೆಗೆ ಬಂದು ಹೆಗಲಿಗೆ ಒರಗಿಸಿಕೊಂಡು ಸಾಂತ್ವನ ಹೇಳುವ ಕಪಿ!

ನರಗುಂದ ಪಟ್ಟಣದಲ್ಲಿ ಇತ್ತೀಚಿಗೆ ದೇವೇಂದ್ರಪ್ಪ ಕಮ್ಮಾರ್ (80) ಎಂಬುವವರು ಸಾವನ್ನಪ್ಪಿದ್ದವು. ಅವರ ಪರಿವಾರ ಶೋಕದಲ್ಲಿ ಮುಳುಗಿದ್ದ ಸಂದರ್ಭದಲ್ಲಿ ಕಪಿಯೊಂದು ಅವರನ್ನು ಸೇರಿಕೊಂಡಿದೆ. ಶವದ ಮುಂದೆ ಅಳುತ್ತಿದ್ದ ಮಹಿಳೆಯೊಬ್ಬರ ತಲೆ ಮುಟ್ಟಿದ ಕಪಿ ಬಳಿಕ ಹೆಗಲಿಗೆ ಕೈ ಹಾಕಿ ನಿಧಾನಕ್ಕೆ ತನ್ನ ಹೆಗಲ ಮೇಲೆ ಅವರ ತಲೆಯನ್ನು ಒರಗಿಸಿ ಕೊಂಡು ಸಾಂತ್ವನ ಹೇಳಿದೆ.

Indiatimes 21 Apr 2019, 10:41 am
ಗದಗ: ಸತ್ತರೆ ಸಂಬಂಧಿಕರೇ ಬರಲು ಹಿಂದೆ ಮುಂದೆ ನೋಡುವ ಕಾಲವಿದು. ಆದರೆ ಮೂಕ ಪ್ರಾಣಿ ಮಂಗವೊಂದು ಊರಲ್ಲಿ ಯಾರಾದರು ಸತ್ತರೆ ಅಂತವರ ಮನೆಗೆ ಹೋಗಿ ಸಾಂತ್ವನ ಹೇಳುತ್ತಿರುವ ಹೃದಯಸ್ಪರ್ಶಿ ದೃಶ್ಯ ಇತ್ತೀಚಿನ ಕೆಲ ದಿನಗಳಿಂದ ಗದಗದಲ್ಲಿ ಕಂಡು ಬರುತ್ತಿದೆ.
Vijaya Karnataka Web monkey_1555756774_725x725



ನರಗುಂದ ಪಟ್ಟಣದಲ್ಲಿ ಇತ್ತೀಚಿಗೆ ದೇವೇಂದ್ರಪ್ಪ ಕಮ್ಮಾರ್ (80) ಎಂಬುವವರು ಸಾವನ್ನಪ್ಪಿದ್ದವು. ಅವರ ಪರಿವಾರ ಶೋಕದಲ್ಲಿ ಮುಳುಗಿದ್ದ ಸಂದರ್ಭದಲ್ಲಿ ಕಪಿಯೊಂದು ಅವರನ್ನು ಸೇರಿಕೊಂಡಿದೆ. ಶವದ ಮುಂದೆ ಅಳುತ್ತಿದ್ದ ಮಹಿಳೆಯೊಬ್ಬರ ತಲೆ ಮುಟ್ಟಿದ ಕಪಿ ಬಳಿಕ ಹೆಗಲಿಗೆ ಕೈ ಹಾಕಿ ನಿಧಾನಕ್ಕೆ ತನ್ನ ಹೆಗಲ ಮೇಲೆ ಅವರ ತಲೆಯನ್ನು ಒರಗಿಸಿ ಕೊಂಡು ಸಾಂತ್ವನ ಹೇಳಿದೆ.

ಬಳಿಕ ಸ್ವಲ್ಪ ಹೊತ್ತು ಶವದ ಮುಂದೆ ಕುಳಿತು ತಾನು ಕೂಡ ಶೋಕಾಚರಣೆ ಮಾಡಿ, ಯಾರಿಗೂ ತೊಂದರೆ ನೀಡದೆ ಅಲ್ಲಿಂದ ಮರಳಿದೆ.

ಕಪಿಗೆ ಜನರು ಜೋರಾಗಿ ಕೂಗುತ್ತ ಗೋಳಾಡುತ್ತಿರುವುದು ಕಾಣಿಸಿದೆ. ಏನಾಗಿದೆ ಎಂದು ನೋಡಲು ಅಲ್ಲಿಗೆ ಬಂದ ಮಂಗ ಇತರರನ್ನು ಅನುಕರಿಸುತ್ತ ತಾನು ಕೂಡ ನೊಂದವರಿಗೆ ಸಮಾಧಾನ ಮಾಡಿದೆ, ಎಂದು ಸ್ಥಳೀಯ ನಿವಾಸಿ ಪರಮೇಶ್ವರ್ ನಾಯಕ್ ತಿಳಿಸಿದ್ದಾರೆ.

ಈ ಹಿಂದೆ ಕೂಡ ಈ ಮಂಗ ಮೃತರೊಬ್ಬರ ಮನೆಗೆ ಹೋಗಿ , ಮನೆಯ ಹಿರಿಯ ಮಗನ ತಲೆ ಸವರಿ ಸಮಾಧಾನ ಮಾಡಿತ್ತು. ಊರಲ್ಲಿ ಯಾರೇ ಮೃತಪಟ್ಟರೂ ಮಂಗ ಅಲ್ಲಿಗೆ ಹಾಜರಾಗಿ ಸಾಂತ್ವನ ಹೇಳುವುದು ಸಾಮಾನ್ಯವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ