ಆ್ಯಪ್ನಗರ

ಕ್ರಿಮಿನಾಶಕ ಸಿಂಪಡಿಸಿದ್ದ ಹುಲ್ಲು ತಿಂದು 15ಕ್ಕೂ ಹೆಚ್ಚು ಕುರಿಗಳು ಸಾವು; ಕಂಗೆಟ್ಟ ಮಾಲೀಕ..!

ಚಿಕ್ಕೋಡಿ ತಾಲೂಕಿನ ನಾಗರಮನವಳ್ಳಿ ಗ್ರಾಮದ ಹೂವಪ್ಪ ಕಗ್ಗೊಣ್ಣವರ ಅವರಿಗೆ ಸೇರಿದ ಕುರಿಗಳಾಗಿವೆ. ಜಮೀನೊಂದರಲ್ಲಿ ಕ್ರಿಮಿನಾಶಕ ಸಿಂಪಡಿಸಿರುವ ಬಗ್ಗೆ ಗೊತ್ತಾಗದೆ ಕುರಿಗಳನ್ನು ಮೇಯಲು ಬಿಟ್ಟಿದ್ದಾರೆ. ಕುರಿಗಳು ಹುಲ್ಲು ಮೇಯ್ದ ನಂತರ ಅಸ್ವಸ್ತಗೊಂಡಿದ್ದು 15 ಕುರಿಗಳು ಸಾವನಪ್ಪಿವೆ.

Vijaya Karnataka Web 28 Feb 2021, 1:45 pm
ಲಕ್ಷ್ಮೇಶ್ವರ: ಕ್ರಿಮಿನಾಶಕ ಸಿಂಪಡಿಸಿದ್ದ ಹುಲ್ಲು ತಿಂದು 15ಕ್ಕೂ ಹೆಚ್ಚು ಕುರಿಗಳು ಸಾವನಪ್ಪಿರುವ ಘಟನೆ ಶನಿವಾರ ತಾಲೂಕಿನ ಅಡರಕಟ್ಟಿಯಲ್ಲಿ ಸಂಭವಿಸಿದೆ.
Vijaya Karnataka Web sheeps


ಸುಮಾರು 400 ಕುರಿಗಳ ಹಿಂಡು ಹೊಂದಿದ್ದ ಈ ಗುಂಪಿನಲ್ಲಿ ಬಹುತೇಕ ಕುರಿಗಳು ಅರೆಪ್ರಜ್ಞಾವಸ್ಥೆ ತಲುಪಿದ್ದು ಪಶು ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಉಳಿದ ಕುರಿಗಳಿಗೆ ಯಾವುದೇ ಪ್ರಾಣ ಹಾನಿಯಾಗದಂತೆ ಔಷಧೋಪಚಾರ ಮಾಡಿದ್ದಾರೆ. ಚಿಕ್ಕೋಡಿ ತಾಲೂಕಿನ ನಾಗರಮನವಳ್ಳಿ ಗ್ರಾಮದ ಹೂವಪ್ಪ ಕಗ್ಗೊಣ್ಣವರ ಅವರಿಗೆ ಸೇರಿದ ಕುರಿಗಳಾಗಿವೆ. ಜಮೀನೊಂದರಲ್ಲಿ ಕ್ರಿಮಿನಾಶಕ ಸಿಂಪಡಿಸಿರುವ ಬಗ್ಗೆ ಗೊತ್ತಾಗದೆ ಕುರಿಗಳನ್ನು ಮೇಯಲು ಬಿಟ್ಟಿದ್ದಾರೆ.
ಮಾವು, ಪೇರಲ, ಲಿಂಬೆ, ತರಕಾರಿ ಸೇರಿದಂತೆ ಇನ್ನಿತರ ಬೆಳೆಗಳ ಕೀಟ ಬಾಧೆ ನಿಯಂತ್ರಣಕ್ಕೆ ಇಲ್ಲಿದೆ ಪರಿಹಾರ
ಕುರಿಗಳು ಹುಲ್ಲು ಮೇಯ್ದ ನಂತರ ಅಸ್ವಸ್ತಗೊಂಡಿದ್ದು 15 ಕುರಿಗಳು ಸಾವನಪ್ಪಿವೆ. ಇದರಿಂದ ಕುರಿಗಾರರು ಸ್ಥಳೀಯ ಸಹಕಾರದಿಂದ ವೈದ್ಯರನ್ನು ಬರಮಾಡಿಕೊಂಡು ಉಳಿದೆಲ್ಲ ಕುರಿಗಳ ಆರೋಗ್ಯ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷ ನಿಂಗಪ್ಪ ಬನ್ನಿ ಅವರು ಮೃತಪಟ್ಟ ಪ್ರತಿ ಕುರಿಗೆ 5 ಸಾವಿರ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಮಹೇಶ ಲಮಾಣಿ, ತಿಪ್ಪಣ್ಣ ಸಂಶಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ