ಮುಳಗುಂದ: ಶೇ. 76.14ರಷ್ಟು ಮತದಾನ
ಮುಳಗುಂದ: ಪಶ್ಚಿಮ ಪದವೀಧರರ ಚುನಾವಣೆ ಪಪಂ ಕಛೇರಿ 66ರಲ್ಲಿಶಾಂತಿಯುತ ನಡೆಯಿತು. ಮುಳಗುಂದ ವ್ಯಾಪ್ತಿಯ ಚಿಂಚಲಿ, ಕಲ್ಲೂರ, ನೀಲಗುಂದ ಸೇರಿದಂತೆ ಒಟ್ಟು 394 ಪದವೀಧರ ಮತದಾರರಲ್ಲಿಸುಮಾರು 300 ಮತಗಳು ಚಲಾವಣೆಗೊಂಡಿವೆ.
Vijaya Karnataka 29 Oct 2020, 5:00 am
ಮುಳಗುಂದ: ಪಶ್ಚಿಮ ಪದವೀಧರರ ಚುನಾವಣೆ ಪಪಂ ಕಛೇರಿ 66ರಲ್ಲಿಶಾಂತಿಯುತ ನಡೆಯಿತು. ಮುಳಗುಂದ ವ್ಯಾಪ್ತಿಯ ಚಿಂಚಲಿ, ಕಲ್ಲೂರ, ನೀಲಗುಂದ ಸೇರಿದಂತೆ ಒಟ್ಟು 394 ಪದವೀಧರ ಮತದಾರರಲ್ಲಿಸುಮಾರು 300 ಮತಗಳು ಚಲಾವಣೆಗೊಂಡಿವೆ.
ಪಪಂ ಕಾಂಗ್ರೆಸ್ ಸದಸ್ಯ ಕೆ.ಎಲ್.ಕರಿಗೌಡರ ಹಾಗೂ ಬಸವರಾಜ ಹಾರೋಗೇರಿ ಮತದಾನ ಮಾಡಿದರು. ಮತಗಟ್ಟೆಯಲ್ಲಿಬೆಳಗ್ಗೆಯಿಂದ ಪೊಲೀಸ್ ಬಿಗಿ ಭದ್ರತೆಯಲ್ಲಿಪಪಂ ಸಿಬ್ಬಂದಿ ಮತದಾರರಿಗೆ ಪ್ರತ್ಯೇಕ ಬಾಕ್ಸ್ ನಿರ್ಮಿಸಿದ್ದರು. ಥರ್ಮಲ್ ಸ್ಕಾತ್ರ್ಯನಿಂಗ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡುವ ಕೋವಿಡ್ ನಿಯಮ ಪಾಲಿಸಬೇಕೆಂದು ತಿಳಿವಳಿಕೆ ನೀಡುತ್ತಿರುವುದು ಕಂಡುಬಂದಿತು.
ಗದಗ ತಹಸೀಲ್ದಾರ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಯೋಜನಾಧಿಕಾರಿ ರುದ್ರೇಶ, ಜಿಲ್ಲಾಧಿಕಾರಿ ಎಂ.ಸುರೇದ್ರ ಬಾಬು, ಎಸ್ಪಿ ಯತೀಶ ಹಾಗೂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಆನಂದ ಮತಗಟ್ಟೆಗೆ ಭೇಟಿ ನೀಡಿದರು.
ಮತಗಟ್ಟೆ ಅಧೀಕ್ಷಕ ಅಧಿಕಾರಿ ಬಸವರಾಜ ಎಸ್.ಕನ್ನೂರ, ಎಆರ್ಪಿಓ ಸಿ.ಎಚ್.ವೆಂಕಟ, ಆರ್.ಎನ್.ಗಡ್ಡಿ, ಮಲ್ಲಪ್ಪ ಟಿ. ಕರಿದೇವನವರ, ಎಸ್.ಎ.ನಾವಿ, ಪಪಂ ಮುಖ್ಯಾಧಿಕಾರಿ ಎಂ.ಎಸ್.ಬೆಂತೂರ ಇದ್ದರು.
ಪಪಂ ಕಾಂಗ್ರೆಸ್ ಸದಸ್ಯ ಕೆ.ಎಲ್.ಕರಿಗೌಡರ ಹಾಗೂ ಬಸವರಾಜ ಹಾರೋಗೇರಿ ಮತದಾನ ಮಾಡಿದರು. ಮತಗಟ್ಟೆಯಲ್ಲಿಬೆಳಗ್ಗೆಯಿಂದ ಪೊಲೀಸ್ ಬಿಗಿ ಭದ್ರತೆಯಲ್ಲಿಪಪಂ ಸಿಬ್ಬಂದಿ ಮತದಾರರಿಗೆ ಪ್ರತ್ಯೇಕ ಬಾಕ್ಸ್ ನಿರ್ಮಿಸಿದ್ದರು. ಥರ್ಮಲ್ ಸ್ಕಾತ್ರ್ಯನಿಂಗ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡುವ ಕೋವಿಡ್ ನಿಯಮ ಪಾಲಿಸಬೇಕೆಂದು ತಿಳಿವಳಿಕೆ ನೀಡುತ್ತಿರುವುದು ಕಂಡುಬಂದಿತು.
ಗದಗ ತಹಸೀಲ್ದಾರ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಯೋಜನಾಧಿಕಾರಿ ರುದ್ರೇಶ, ಜಿಲ್ಲಾಧಿಕಾರಿ ಎಂ.ಸುರೇದ್ರ ಬಾಬು, ಎಸ್ಪಿ ಯತೀಶ ಹಾಗೂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಆನಂದ ಮತಗಟ್ಟೆಗೆ ಭೇಟಿ ನೀಡಿದರು.
ಮತಗಟ್ಟೆ ಅಧೀಕ್ಷಕ ಅಧಿಕಾರಿ ಬಸವರಾಜ ಎಸ್.ಕನ್ನೂರ, ಎಆರ್ಪಿಓ ಸಿ.ಎಚ್.ವೆಂಕಟ, ಆರ್.ಎನ್.ಗಡ್ಡಿ, ಮಲ್ಲಪ್ಪ ಟಿ. ಕರಿದೇವನವರ, ಎಸ್.ಎ.ನಾವಿ, ಪಪಂ ಮುಖ್ಯಾಧಿಕಾರಿ ಎಂ.ಎಸ್.ಬೆಂತೂರ ಇದ್ದರು.