ಆ್ಯಪ್ನಗರ

ಪುರಸಭೆ: ಬಿಜೆಪಿಗೆ ಪಕ್ಷೇತರ ಅಭ್ಯರ್ಥಿಗಳ ಬೆಂಬಲ

ಮುಂಡರಗಿ : ಇಲ್ಲಿಯ ಪುರಸಭೆ 18 ನೇ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಶ್ವನಾಥ ಗಡ್ಡದ ಹಾಗೂ ಸುಭಾಷ ಕುಂಬಾರ ಅವರು ಬಿಜೆಪಿ ಅಭ್ಯರ್ಥಿ ನಾಗೇಂದ್ರಪ್ಪ ಹುಬ್ಬಳ್ಳಿ ಅವರಿಗೆ ಬೆಂಬಲ ಸೂಚಿಸಿದರು. ಶುಕ್ರವಾರ ಅಧಿಕೃತವಾಗಿ ಬಿಜೆಪಿ ಸೇರಿಕೊಂಡು 16 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ವಿರೇಶ ಸಜ್ಜನರ, 18

Vijaya Karnataka 25 May 2019, 5:00 am
ಮುಂಡರಗಿ : ಇಲ್ಲಿಯ ಪುರಸಭೆ 18 ನೇ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಶ್ವನಾಥ ಗಡ್ಡದ ಹಾಗೂ ಸುಭಾಷ ಕುಂಬಾರ ಅವರು ಬಿಜೆಪಿ ಅಭ್ಯರ್ಥಿ ನಾಗೇಂದ್ರಪ್ಪ ಹುಬ್ಬಳ್ಳಿ ಅವರಿಗೆ ಬೆಂಬಲ ಸೂಚಿಸಿದರು. ಶುಕ್ರವಾರ ಅಧಿಕೃತವಾಗಿ ಬಿಜೆಪಿ ಸೇರಿಕೊಂಡು 16 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ವಿರೇಶ ಸಜ್ಜನರ, 18 ನೇ ವಾರ್ಡಿನ ನಾಗೇಂದ್ರಪ್ಪ ಹುಬ್ಬಳ್ಳಿ ಸೇರಿದಂತೆ ಎಲ್ಲ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುವುದಾಗಿ ತಿಳಿಸಿದರು. ಮುಂಡರಗಿ ಪುರಸಭೆ ಬಿಜೆಪಿ ವಶ ಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ನಿವೃತ್ತ ಬೋಧಕ ಎಸ್‌.ಎಸ್‌.ಗಡ್ಡದ, ಹಿರಿಯ ಬಿ.ಎಸ್‌.ಗಿಂಡಿಮಠ ಬಿಜೆಪಿ ಸೇರಿದರು.
Vijaya Karnataka Web GDG-24MDR1 SSG
ಮುಂಡರಗಿ ಪುರಸಭೆ ಪಕ್ಷೇತರ ಅಭ್ಯರ್ಥಿಗಳು ಶುಕ್ರವಾರ ಬಿಜೆಪಿಗೆ ಸೇರ್ಪಡೆಗೊಂಡರು.


ಪಕ್ಷ ಕ್ಕೆ ಬರಮಾಡಿಕೊಂಡ ಮುಖಂಡ ಕರಬಸಪ್ಪ ಹಂಚಿನಾಳ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ದ ಅಭ್ಯರ್ಥಿಗಳು ಆಯ್ಕೆಗೊಳ್ಳುವ ಮೂಲಕ ನಿಚ್ಚಳ ಬಹುಮತ ಪಡೆದು ಅಧಿಕಾರ ಹಿಡಿಯುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷೇತರ ಅಭ್ಯರ್ಥಿಗಳು ಹಾಗೂ ಎಸ್‌.ಎಸ್‌.ಗಡ್ಡದ, ಬಿ.ಎಸ್‌.ಗಿಂಡಿಮಠ ಪಕ್ಷ ಸೇರಿರುವುದರಿಂದ ಪಕ್ಷ ಕ್ಕೆ ಬಲ ಬಂದಂತಾಗಿದೆ ಎಂದರು.

ಮಂಡಳ ಬಿಜೆಪಿ ಅಧ್ಯಕ್ಷ ದೇವಪ್ಪ ಕಂಬಳಿ, ಎಪಿಎಂಸಿ ಸದಸ್ಯ ರವೀಂದ್ರ ಉಪ್ಪಿನಬೆಟಗೇರಿ, ರಜನಿಕಾಂತ ದೇಸಾಯಿ, ಎಸ್‌.ವಿ.ಪಾಟೀಲ, 18ನೇ ವಾರ್ಡಿನ ಅಭ್ಯರ್ಥಿ ನಾಗೇಂದ್ರಪ್ಪ ಹುಬ್ಬಳ್ಳಿ, ಪಾಲಾಕ್ಷಿ ಗಣದಿನ್ನಿ, ಆರ್‌.ಎಂ.ತಪ್ಪಡಿ, ಬುಟ್ಟು ಹೊಸಮನಿ, ಪ್ರಶಾಂತ ಗುಡದಪ್ಪನವರ, ಮಾರುತಿ ಗಾಳಿ, ಬಸವರಾಜ ಹಂಚಿನಾಳ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ