ಗದಗ : ದೇಶದ ವಿವಿಧ ರೈಲು ನಿಲ್ದಾಣಕ್ಕೆ ಮಹಾನ್ ಸಾಧಕರ ಹೆಸರು ನಾಮಕರಣಗೊಳಿಸಿದಂತೆ ಐತಿಹಾಸಿಕ ಸ್ಥಳವಾದ ಗದಗ ರೈಲು ನಿಲ್ದಾಣಕ್ಕೆ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ಹೆಸರು ನಾಮಕರಣಗೊಳಿಸಲು ಒತ್ತಾಯಿಸಿ ಶನಿವಾರ ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇಡೀ ವಿಶ್ವಕ್ಕೆ ಸಂಗೀತ ದಿಗ್ಗಜರನ್ನು ಕೊಡಮಾಡಿದ, ಅಂಧ ಅನಾಥರ ಪಾಲನೆ ಮಾಡಿ ಅವರನ್ನು ಸಂಗೀತ ಲೋಕದ ತಾರೆಗಳನ್ನಾಗಿಸಿದ ಕೀರ್ತಿ ಗದಗ ವೀರೇಶ್ವರ ಪುಣ್ಯಾಶ್ರಮದ ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರದು. ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರು ರೈಲು ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರನ್ನು ನಾಮಕರಣ ಮಾಡಿದಂತೆ ಗದಗ ರೈಲು ನಿಲ್ದಾಣಕ್ಕೆ ಪದ್ಮಭೂಷಣ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ಹೆಸರು ಇರಿಸಿ ಪೂಜ್ಯರ 105ನೇ ಜಯಂತ್ಯುತ್ಸವದ ಕೊಡುಗೆಯಾಗಿ ನೀಡಬೇಕು ಎಂಬುದು ಉತ್ತರ ಕರ್ನಾಟಕ ಜನರಬಯಕೆಯಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಭೂಮಿ ಒದಗಿಸಿ:
ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಗದಗ- ಹಾವೇರಿ ರೈಲು ಮಾರ್ಗ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಹೋರಾಟ ಮಾಡಿದ ಫಲವಾಗಿ ಕೇಂದ್ರ ಸರಕಾರದ ಮೇಲೆ ರಾಜ್ಯದ ಸಂಸದರು ಒತ್ತಡ ತಂದು ನೂತನ ಮಾರ್ಗ ಮಂಜೂರು ಮಾಡಿಸಿ ಅದಕ್ಕಾಗಿ ಈಗಾಗಲೇ 650 ಕೋಟಿ ರೂ. ನೀಡಲಾಗಿದೆ. ಗದಗ- ಹಾವೇರಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಬೇಕಾದ ಅಗತ್ಯ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡು ರೈಲ್ವೆ ಇಲಾಖೆಗೆ ನೀಡಬೇಕು ಹಾಗೂ ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.
ಗದಗ-ಮುಂಡರಗಿ-ಹರಪನಹಳ್ಳಿ ಹಾಗೂ ಗದಗನಿಂದ ಕಣಗಿನಹಾಳ, ಕೋಟುಮಚಗಿ, ನರೇಗಲ್, ಗಜೇಂದ್ರಗಡ, ಕುಷ್ಟಗಿ, ಲಿಂಗಸೂರ ಮೂಲಕ ವಾಡಿ ತಲುಪುವ ನೂತನ ಮಾರ್ಗವನ್ನು ಕೇಂದ್ರ ಸರಕಾರ ಈಗಾಗಲೇ ಘೋಷಿಸಿದ್ದು, ಈ ಎರಡೂ ನೂತನ ರೈಲು ಮಾರ್ಗಗಳಿಗೆ ಕೇಂದ್ರ ಸರಕಾರ ಶೀಘ್ರ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿಲಾಗಿದೆ.
ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ನಿಸಾರಅಹ್ಮದ ಖಾಜಿ, ಪ್ರಧಾನ ಕಾರ್ಯದರ್ಶಿ ಬಸವಣ್ಣೆಯ್ಯ ಹಿರೇಮಠ, ಎಂ.ಬಿ. ದೇಸಾಯಿ, ಎಚ್.ಕೆ. ಮುಲ್ಲಾ, ಮಹೇಶ ದಾಸರ, ಸಂಗಪ್ಪ ಕೊಟ್ಟೂರಶೆಟ್ರ, ಯಮನೂರಸಾಬ ನದಾಫ್, ವಿನಾಯಕ ನಂದಿಕೋಲಮಠ ಇದ್ದರು.
ಇಡೀ ವಿಶ್ವಕ್ಕೆ ಸಂಗೀತ ದಿಗ್ಗಜರನ್ನು ಕೊಡಮಾಡಿದ, ಅಂಧ ಅನಾಥರ ಪಾಲನೆ ಮಾಡಿ ಅವರನ್ನು ಸಂಗೀತ ಲೋಕದ ತಾರೆಗಳನ್ನಾಗಿಸಿದ ಕೀರ್ತಿ ಗದಗ ವೀರೇಶ್ವರ ಪುಣ್ಯಾಶ್ರಮದ ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರದು. ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರು ರೈಲು ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರನ್ನು ನಾಮಕರಣ ಮಾಡಿದಂತೆ ಗದಗ ರೈಲು ನಿಲ್ದಾಣಕ್ಕೆ ಪದ್ಮಭೂಷಣ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ಹೆಸರು ಇರಿಸಿ ಪೂಜ್ಯರ 105ನೇ ಜಯಂತ್ಯುತ್ಸವದ ಕೊಡುಗೆಯಾಗಿ ನೀಡಬೇಕು ಎಂಬುದು ಉತ್ತರ ಕರ್ನಾಟಕ ಜನರಬಯಕೆಯಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಭೂಮಿ ಒದಗಿಸಿ:
ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಗದಗ- ಹಾವೇರಿ ರೈಲು ಮಾರ್ಗ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಹೋರಾಟ ಮಾಡಿದ ಫಲವಾಗಿ ಕೇಂದ್ರ ಸರಕಾರದ ಮೇಲೆ ರಾಜ್ಯದ ಸಂಸದರು ಒತ್ತಡ ತಂದು ನೂತನ ಮಾರ್ಗ ಮಂಜೂರು ಮಾಡಿಸಿ ಅದಕ್ಕಾಗಿ ಈಗಾಗಲೇ 650 ಕೋಟಿ ರೂ. ನೀಡಲಾಗಿದೆ. ಗದಗ- ಹಾವೇರಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಬೇಕಾದ ಅಗತ್ಯ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡು ರೈಲ್ವೆ ಇಲಾಖೆಗೆ ನೀಡಬೇಕು ಹಾಗೂ ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.
ಗದಗ-ಮುಂಡರಗಿ-ಹರಪನಹಳ್ಳಿ ಹಾಗೂ ಗದಗನಿಂದ ಕಣಗಿನಹಾಳ, ಕೋಟುಮಚಗಿ, ನರೇಗಲ್, ಗಜೇಂದ್ರಗಡ, ಕುಷ್ಟಗಿ, ಲಿಂಗಸೂರ ಮೂಲಕ ವಾಡಿ ತಲುಪುವ ನೂತನ ಮಾರ್ಗವನ್ನು ಕೇಂದ್ರ ಸರಕಾರ ಈಗಾಗಲೇ ಘೋಷಿಸಿದ್ದು, ಈ ಎರಡೂ ನೂತನ ರೈಲು ಮಾರ್ಗಗಳಿಗೆ ಕೇಂದ್ರ ಸರಕಾರ ಶೀಘ್ರ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿಲಾಗಿದೆ.
ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ನಿಸಾರಅಹ್ಮದ ಖಾಜಿ, ಪ್ರಧಾನ ಕಾರ್ಯದರ್ಶಿ ಬಸವಣ್ಣೆಯ್ಯ ಹಿರೇಮಠ, ಎಂ.ಬಿ. ದೇಸಾಯಿ, ಎಚ್.ಕೆ. ಮುಲ್ಲಾ, ಮಹೇಶ ದಾಸರ, ಸಂಗಪ್ಪ ಕೊಟ್ಟೂರಶೆಟ್ರ, ಯಮನೂರಸಾಬ ನದಾಫ್, ವಿನಾಯಕ ನಂದಿಕೋಲಮಠ ಇದ್ದರು.