ಆ್ಯಪ್ನಗರ

ನಮ್ಮೂರ ಶ್ರೀ ಸಿದ್ಧೇಶ್ವರ ಜಾತ್ರೆ

ನರಗುಂದ: ಇಲ್ಲಿನ ಶ್ರೀ ಸಿದ್ಧೇಶ್ವರ ಪಂಚಗ್ರಹ ಗುಡ್ಡದ ಹಿರೇಮಠದ ನಮ್ಮೂರ ಸಿದ್ಧೇಶ್ವರ ಜಾತ್ರೆ ಫೆ.19ರಿಂದ 29ವರೆಗೆ ವಿರಕ್ತಮಠದ ಆವರಣದಲ್ಲಿಆಧ್ಯಾತ್ಮ ಪ್ರವಚನ, ಕ್ರೀಡಾ ಸ್ಪೂರ್ತಿ, ರೈತರ ಹಿತ ಚಿಂತನಾ ಸಭೆ ಹಾಗೂ ಜಾನಪದ ಜಾತ್ರೆ ಜರುಗಲಿದೆ.

Vijaya Karnataka Web 18 Feb 2020, 7:11 pm
ನರಗುಂದ: ಇಲ್ಲಿನ ಶ್ರೀ ಸಿದ್ಧೇಶ್ವರ ಪಂಚಗ್ರಹ ಗುಡ್ಡದ ಹಿರೇಮಠದ ನಮ್ಮೂರ ಸಿದ್ಧೇಶ್ವರ ಜಾತ್ರೆ ಫೆ.19ರಿಂದ 29ವರೆಗೆ ವಿರಕ್ತಮಠದ ಆವರಣದಲ್ಲಿಆಧ್ಯಾತ್ಮ ಪ್ರವಚನ, ಕ್ರೀಡಾ ಸ್ಪೂರ್ತಿ, ರೈತರ ಹಿತ ಚಿಂತನಾ ಸಭೆ ಹಾಗೂ ಜಾನಪದ ಜಾತ್ರೆ ಜರುಗಲಿದೆ.
Vijaya Karnataka Web nammura shree siddheshwar fair
ನಮ್ಮೂರ ಶ್ರೀ ಸಿದ್ಧೇಶ್ವರ ಜಾತ್ರೆ


ಫೆ.19ರಂದು ಬೆಳಗ್ಗೆ 8.30ಕ್ಕೆ ಶ್ರೀ ಚಂದ್ರಶೇಖರ ಶಿವಾಚಾರ್ಯರಿಂದ ಷಟ್‌ಸ್ಥಳ ಧ್ವಜಾರೋಹಣ ನೆರವೇರಿಸಿ ಜಾತ್ರೆಗೆ ಚಾಲನೆ ನೀಡುವರು. ಸಂಜೆ 6.30ಕ್ಕೆ ಶ್ರೀ ಅಭಿನವ ಬೂದೀಶ್ವರ ಸ್ವಾಮಿಗಳು, ವಿರಕ್ತಮಠದ ಶಿವಕುಮಾರ ಸ್ವಾಮಿಗಳ ಸಾನ್ನಿಧ್ಯದಲ್ಲಿಮಣಕವಾಡ ಅನ್ನದಾನೇಶ್ವರ ದೇವ ಮಂದಿರ ಮಹಾಮಠದ ಮೃತ್ಯುಂಜಯ ಸ್ವಾಮಿಗಳಿಂದ ಆಧ್ಯಾತ್ಮ ಪ್ರವಚನ ಆರಂಭಗೊಳ್ಳುವುದು.

ಮುಖ್ಯಅತಿಥಿಯಾಗ ಸಚಿವ ಸಿ.ಸಿ.ಪಾಟೀಲ, ಮಾಜಿ ಸಚಿವ ಬಿ.ಆರ್‌.ಯಾವಗಲ್ಲಆಗಮಿಸಲಿದ್ದಾರೆ. ಫೆ.27ರಂದು ಸಂಜೆ 6.30ಕ್ಕೆ ಧರ್ಮ ಸಭೆ ಹಾಗೂ ಕ್ರೀಡಾ ಸ್ಫೂರ್ತಿ ಕಾರ್ಯಕ್ರಮ, ಫೆ.27 ರಂದು ಸಂಜೆ 6.30ಕ್ಕೆ ರೈತ ಹಿಂತ ಚಿಂತಕರ ಸಭೆ ಹಾಗೂ ಸಾವಯವ ರೈತ ಸಾಧಕರಿಗೆ ಸನ್ಮಾನ, ರಾತ್ರಿ 8.30ಕ್ಕೆ ಸಿದ್ಧೇಶ್ವರ ಅಕ್ಕನ ಬಳಗದಿಂದ ಕೆ.ಎಂ.ಹಾದಿಮನಿ ರಚಿಸಿದ ಆಧ್ಯ ವಚನಕಾರ ದೇವರ ದಾಸಿಮಯ್ಯ ಕಿರು ನಾಟಕ ಪ್ರದರ್ಶನ ಜರುಗಲಿದೆ. ಫೆ.29ರಂದು ಬೆಳಗ್ಗೆ ಅಯ್ಯಾಚಾರ ಹಾಗೂ ಲಿಂಗದೀಕ್ಷೆ, ಸಿದ್ಧೇಶ್ವರರ ಬೆಳ್ಳಿ ಮೂರ್ತಿ ಹಾಗೂ ಸಿದ್ಧಾಂತ ಶಿಖಾಮಣಿ ಮತ್ತು ಪ್ರವಚನ ಗ್ರಂಥಗಳೊಂದಿಗೆ ಶ್ರೀಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವ, ಜಾನಪದ ಕಲಾ ವೈಭವ ಜರುಗಲಿದೆ. ನಂತರ ಪ್ರವಚನ ಮಂಗಲ ಹಾಗೂ ತುಲಾಭಾರ ಕಾರ್ಯಕ್ರಮ ಜರುಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ