ಆ್ಯಪ್ನಗರ

ರಾಷ್ಟ್ರೀಯ ಆಯುರ್ವೇದ ದಿನಾಚರಣೆ 25ಕ್ಕೆ

ಗದಗ: ನಗರದ ಡಿಜಿಎಂ ಆಯುರ್ವೇದ ಕಾಲೇಜಿನ ಸಭಾಂಗಣದಲ್ಲಿಅ.25 ರಂದು ಬೆಳಗ್ಗೆ 10ಕ್ಕೆ ಡಿ.ಜಿ.ಮೇಲ್ಮಾಳಗಿ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜ್‌ ಹಾಗೂ ಆಸ್ಪತ್ರೆಯಿಂದ 4ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ದೀರ್ಘಾಯುಷ್ಯಕ್ಕಾಗಿ ಆಯುರ್ವೇದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಉಮೇಶ ಪುರದ ಹೇಳಿದರು.

Vijaya Karnataka 22 Oct 2019, 5:00 am
ಗದಗ: ನಗರದ ಡಿಜಿಎಂ ಆಯುರ್ವೇದ ಕಾಲೇಜಿನ ಸಭಾಂಗಣದಲ್ಲಿಅ.25 ರಂದು ಬೆಳಗ್ಗೆ 10ಕ್ಕೆ ಡಿ.ಜಿ.ಮೇಲ್ಮಾಳಗಿ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜ್‌ ಹಾಗೂ ಆಸ್ಪತ್ರೆಯಿಂದ 4ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ದೀರ್ಘಾಯುಷ್ಯಕ್ಕಾಗಿ ಆಯುರ್ವೇದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಉಮೇಶ ಪುರದ ಹೇಳಿದರು.
Vijaya Karnataka Web national ayurveda day 25
ರಾಷ್ಟ್ರೀಯ ಆಯುರ್ವೇದ ದಿನಾಚರಣೆ 25ಕ್ಕೆ


ಸೋಮವಾರ ನಗರದ ಪತ್ರಿಕಾ ಭವನದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಆಯುರ್ವೇದ ಪ್ರಾಚೀನ ಭಾರತದ ವೈದ್ಯ ಪದ್ಧತಿಯಾಗಿದೆ. ರೋಗಿಗಳಿಗೆ ಚಿಕಿತ್ಸೆ ಮಾಡುವುದು ಎಷ್ಟು ಮುಖ್ಯವಾಗಿದೆಯೋ, ರೋಗ ಬಾರದಂತೆ ತಡೆಯುವುದು ಅಷ್ಟೇ ಪ್ರಮುಖವಾಗಿದೆ. ಸದೃಢವಾಗಿ, ನಿರೋಗಿಯಾಗಿ ಬಹುಕಾಲದವರೆಗೆ ಬದುಕುವ ಜೀವನ ಶೈಲಿಯ ಸರಳ ಆಚರಣೆ ಆಯುರ್ವೇದಲ್ಲಿಹೇಳಲಾಗಿದೆ. ಅವುಗಳ ಕುರಿತು ಜಾಗೃತಿ ಮಾಡುವುದು ಅವುಗಳ ಆಚರಣೆಗೆ ತರಲು ಪ್ರೇರಣೆ ನೀಡುವುದು ರಾಷ್ಟ್ರೀಯ ಆಯುರ್ವೇದ ದಿನಾಚಾರಣೆಯ ದ್ಯೇಯವಾಗಿದೆ. ನಮ್ಮ ಹಿರಿಯರು ವ್ಯವಸ್ಥಿತವಾದ ಜೀವನ ನಡೆಸಿ ದೀರ್ಘಾಯುಷಿಗಳಾಗಿ ನಮ್ಮ ನಡುವೆ ಇದ್ದಾರೆ. ಇಂದಿನ ಯುವಕರಲ್ಲಿಮತ್ತು ಸಮಾಜದಲ್ಲಿಜಾಗೃತಿ ಮೂಡಿಸುವ ಉಪನ್ಯಾಸ ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿಏರ್ಪಡಿಸಲಾಗಿದೆ. ವಿವಿಧ ಲೇಖನಗಳ ಮೂಲಕ ಪ್ರಶಸ್ತಿ ಕರಪತ್ರಗಳ ಹಂಚುವುದು, ಜಾತಾ ಮಾಡುವುದು ಮತ್ತು ಮಾದ್ಯಮಗಳ ಮೂಲಕ ಆರೋಗ್ಯ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅ.25 ರಂದು ನಡೆಯುವ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಕಾರ್ಯಕ್ರಮ ಉದ್ಘಾಟಿಸುವರು. ಜ.ಅಭಿನವ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸ್ಥೆಯ ಚೇರಮನ್‌ ಎಸ್‌.ಬಿ.ಸಂಶಿ ಅಧ್ಯಕ್ಷತೆ ವಹಿಸುವರು. ಡಾ.ಯು.ವಿ. ಪುರದ ಭಾಗವಹಿಸುವರು. ಇದೇ ಸಂದರ್ಭದಲ್ಲಿದೀರ್ಘಾಯುಷಿ ಮಹನೀಯರಾದ ಡಾ.ವಿ.ಎಚ್‌.ಹೊಂಬಣ್ಣವರ, ಡಾ.ಜಿ.ಜಿ.ಪಾಟೀಲ ದಂಪತಿ, ಎಸ್‌.ಕೆ.ಮೇಲಮರಿ, ಗಂಗಣ್ಣ ಕೋಟಿ ಅವರನ್ನು ಸಂಸ್ಥೆಯಿಂದ ಸ್ಮಾನಿಸಲಾಗುವುದು ಎಂದರು.

ಆಯುರ್ವೇದ ಜಾಗೃತಿ ಜಾಥ:
ಆಯುರ್ವೇದ ದಿನಾಚರಣೆ ಅಂಗವಾಗಿ ಡಿ.ಜಿ.ಮೇಲ್ಮಾಳಗಿ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜ್‌ ಹಾಗೂ ಆಸ್ಪತ್ರೆಯಿಂದ ಆಯುರ್ವೇದ ಜಾಗೃತಿ ಜಾಥಾವು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ. ಜಾಗೃತಿ ಜಾಥಾವು ಇಲ್ಲಿನ ಮುನ್ಸಿಪಲ್‌ ಕಾಲೇಜಿನಿಂದ ಆರಂಭವಾಗಿ ಗಾಂಧಿ ಸರ್ಕಲ್‌ ಮಾರ್ಗವಾಗಿ ಟಾಂಗಾಕೂಟ, ಹಳೇ ಬಸ್‌ ನಿಲ್ದಾಣ, ರೋಟರಿ ಸರ್ಕಲ್‌, ತೋಂಟದಾರ್ಯ ರಥ ಬೀದಿ ಮೂಲಕ ಗಾಂಧಿ ಸರ್ಕಲ್‌ ಬಂದು ಮುಕ್ತವಾಗುತ್ತಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿಡಾ.ಕೆ.ಎಸ್‌.ಪರಡ್ಡಿ, ಡಾ.ಎಸ್‌.ಎನ್‌.ಬೆಳವಡಿ, ಡಾ.ಎಂ.ಡಿ.ಸಮುದ್ರಿ, ಡಾ.ಬೂದೇಶ ಕನಾಜ, ಎಂ.ವಿ. ಸೊಬಗಿನ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ