ಆ್ಯಪ್ನಗರ

ನವರಾತ್ರಿ ಶ್ರೀದೇವಿ ಮಹಾತ್ಮೆ ಪುರಾಣ

ಗದಗ: ಮಾನವನು ನಿರಂತರವಾಗಿ ಧ್ಯಾನ ಮತ್ತು ಸತ್ಸಂಗ ಮಾಡುತ್ತ ತನ್ನಲ್ಲಿರುವ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರಗಳನ್ನು ನಾಶಗೊಳಿಸಿ ಸದ್ಗುಣಗಳೊಂದಿಗೆ ಶಾಂಭವಿಯ ಕೃಪೆ ಪಡೆದು ದೇವ ಮಾನವನಾಗಲು ಸಾಧ್ಯ ಎಂದು ಮಂಜುನಾಥ ಜಕ್ಕಲಿ ಹೇಳಿದರು.

Vijaya Karnataka 15 Oct 2019, 5:00 am
ಗದಗ: ಮಾನವನು ನಿರಂತರವಾಗಿ ಧ್ಯಾನ ಮತ್ತು ಸತ್ಸಂಗ ಮಾಡುತ್ತ ತನ್ನಲ್ಲಿರುವ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರಗಳನ್ನು ನಾಶಗೊಳಿಸಿ ಸದ್ಗುಣಗಳೊಂದಿಗೆ ಶಾಂಭವಿಯ ಕೃಪೆ ಪಡೆದು ದೇವ ಮಾನವನಾಗಲು ಸಾಧ್ಯ ಎಂದು ಮಂಜುನಾಥ ಜಕ್ಕಲಿ ಹೇಳಿದರು.
Vijaya Karnataka Web navratri sridevi mahatme mythology
ನವರಾತ್ರಿ ಶ್ರೀದೇವಿ ಮಹಾತ್ಮೆ ಪುರಾಣ


ತಾಲೂಕಿನ ಕುರ್ತಕೋಟಿ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನದಲ್ಲಿನವರಾತ್ರಿ ಅಂಗವಾಗಿ ನಡೆದ ದೇವಿ ಮಹಾತ್ಮೆ ಪುರಾಣ ಪ್ರವಚನದಲ್ಲಿಮಾತನಾಡಿದರು.

ಶ್ರೀದೇವಿಯು ದುರ್ಗುಣಗಳ ಆಗರವಾದ ರಕ್ಕಸರನ್ನು ಸಂಹಾರ ಮಾಡಿ ಶಿಷ್ಟರನ್ನು ಸಂರಕ್ಷಿಸಿ ಧರ್ಮ ಸ್ಥಾಪಿಸಿ ಲೋಕ ಕಲ್ಯಾಣ ಮಾಡಿದಳು ಎಂದರು.

ಪಠಣಕಾರ ಶಿದ್ರಾಮಯ್ಯ ನಾಗಾವಿಮಠ, ಹಾರ್ಮೋನಿಯಂ ವಾದಕ ಶೇಖರಯ್ಯ ನಾಗಾವಿಮಠ, ತಬಲಾವಾದಕ ಚನ್ನಬಸಯ್ಯ ನಾಗಾವಿಮಠ, ಕಿರಣಕುಮಾರ ಕೂಡ್ಲಿಗಿ ಹಿರೇಮಠ, ಗುರು ಗಂಗಾಧರ ಭಜನಾ ಸಂಘ, ವೀರಭದ್ರೇಶ್ವರ ಭಜನಾ ಸಂಘದ ಯುವಕರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ