ಆ್ಯಪ್ನಗರ

ನಾಡು,ನುಡಿ,ಭಾಷೆ ತಿಳಿಯುವುದು ಅಗತ್ಯ

ಲಕ್ಷೆತ್ರ್ಮೕಶ್ವರ: ಇಂದಿನ ಯುವಕರು ಕನ್ನಡ ನಾಡು, ನುಡಿ, ಭಾಷೆ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮ ಸಂಸ್ಕೃತಿ ಆಚರಣೆಗಳನ್ನು ಎಂದಿಗೂ ಮರೆಯಬಾರದು ಎಂದು ಕಸಾಪ ಜಿಲ್ಲಾಧ್ಯಕ್ಷ ಶರಣು ಗೋಗೇರಿ ಹೇಳಿದರು.

Vijaya Karnataka 21 Nov 2019, 5:00 am
ಲಕ್ಷೆತ್ರ್ಮೕಶ್ವರ: ಇಂದಿನ ಯುವಕರು ಕನ್ನಡ ನಾಡು, ನುಡಿ, ಭಾಷೆ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮ ಸಂಸ್ಕೃತಿ ಆಚರಣೆಗಳನ್ನು ಎಂದಿಗೂ ಮರೆಯಬಾರದು ಎಂದು ಕಸಾಪ ಜಿಲ್ಲಾಧ್ಯಕ್ಷ ಶರಣು ಗೋಗೇರಿ ಹೇಳಿದರು.
Vijaya Karnataka Web need to know the language the language the language
ನಾಡು,ನುಡಿ,ಭಾಷೆ ತಿಳಿಯುವುದು ಅಗತ್ಯ


ಅವರು ಪಟ್ಟಣದ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ.ಅಗಡಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಅತ್ಯಂತ ಶ್ರಿಮಂತ ಇತಿಹಾಸ ಹೊಂದಿರುವ ಭಾಷೆಯಾಗಿದ್ದು, ಈ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವಿದೆ. ಇಂದಿನ ಯುವಕರಿಗೆ ನಮ್ಮ ನಾಡು, ನುಡಿ, ನೆಲ-ಜಲದ ಅಭಿಮಾನ ಇರಬೇಕು. ಕನ್ನಡದ ಶ್ರೇಷ್ಠತೆ, ಇತಿಹಾಸ ತಿಳಿದುಕೊಂಡು ಕನ್ನಡದ ಹಿರಿಮೆಯನ್ನು ಮುಂದಿನವರಿಗೆ ತಿಳಿಸುವಂತಹ ಮಹತ್ತರ ಕಾರ್ಯ ಮಾಡಬೇಕು. ಇತಿಹಾಸ ತಿಳಿಸುವ ಸ್ಮಾರಕಗಳ ರಕ್ಷಣೆ ಮುಂದಾಗಬೇಕು. ಕರ್ನಾಟಕ ಏಕೀಕರಣಕ್ಕಾಗಿ ಅನೇಕ ಮಹನೀಯರು ಹೋರಾಟ ಮಾಡಿದ್ದು, ಅದರ ಪ್ರತಿಫಲವಾಗಿ ಕರ್ನಾಟಕ ಒಂದು ಸುಂದರ ರಾಜ್ಯವಾಗಿದೆ ಎಂದರು.

ಅತಿಥಿಯಾಗಿ ಆಗಮಿಸಿದ್ದ ಸಾಹಿತಿ ಆನಂದ ಝಂಜರವಾಡ ಮಾತನಾಡಿ, ಮಾತೃ ಭಾಷೆಯನ್ನು ಪ್ರೀತಿಸುತ್ತಾರೋ ಅಂತವರು ಮಾತ್ರ ಜೀವನದಲ್ಲಿಸುಂದರವಾದ ಬದುಕು ಸಾಗಿಸುತ್ತಾರೆ. ಇಂದಿನ ಆಧುನಿಕ ಭರಾಟೆಯಲ್ಲಿಕಾವ್ಯ ರಚನೆ, ಕಥೆ, ಕಾದಂಬರಿ ರಚನೆಗಳ ಬರಹಗಾರರು ಕಡಿಮೆಯಾಗುತ್ತಿದ್ದು, ಯುವಕರು ಕಾವ್ಯ ರಚನೆ ಬರವಣಿಗೆಗೆ ಒತ್ತು ನೀಡಬೇಕು ಎಂದರು.

ಡಾ.ದೇವೆಂದ್ರ ಕೆ. ಜಯಶ್ರೀ ಹೊಸಮನಿ, ಬಸವರಾಜ ಬಾಳೇಶ್ವರಮಠ, ಸೋಮಶೇಖರ ಕೆರೆಮನಿ, ಬಿ.ಎಸ್‌.ಪಾಟೀಲ, ಡಾ.ದತ್ತಾತ್ರೇಯ, ಪ್ರೊ.ವಿಜಯಕುಮಾರ ಚವ್ಹಾಣ, ಎಸ್‌.ಎಫ್‌.ಕೊಡ್ಲಿ ಮುಂತಾದವರು ಇದ್ದರು.

ಸುರೇಶ ಬುಜರಿ ಸ್ವಾಗತಿಸಿದರು. ಭಾರ್ಗವ ಎಚ್‌.ಕೆ. ಪರಿಚಯಿಸಿದರು. ಸತೀಶ ದೊಡ್ಡಮನಿ, ಉಮಾ ಓಲೆಕಾರ ನಿರೂಪಿಸಿದರು.ರಾಧಿಕಾ ಕುಲಕರ್ಣಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ